<p><strong>ಪಾಕಿಸ್ತಾನಕ್ಕೆ ಚೀನದ ಕ್ಷಿಪಣಿ ಸಜ್ಜಿತ ನೌಕೆಗಳು</strong></p>.<p>ನವದೆಹಲಿ, ಮಾರ್ಚ್ 29– ಚೀನವು ಪಾಕಿಸ್ತಾನಕ್ಕೆ ಕ್ಷಿಪಣಿಗಳನ್ನು ಜೋಡಿಸಿರುವ ಮಿಲಿಟರಿ ನೌಕೆಗಳನ್ನು ಒದಗಿಸುವುದಾಗಿ ತಿಳಿದು ಬಂದಿದೆಯೆಂದು ವಿದೇಶಾಂಗ ಖಾತೆ ಸಚಿವ ಸ್ವರಣಾಸಿಂಗ್ ಅವರು ಇಂದು ಲೋಕಸಭೆಯಲ್ಲಿ ಹೇಳಿದರು.</p>.<p>ಅಂಥ ಎಷ್ಟು ನೌಕೆಗಳನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ ಎಂಬುದು ಖಚಿತವಾಗಿ ಗೊತ್ತಿಲ್ಲ.</p>.<p>ಜನಸಂಘದ ಅಟಲಬಿಹಾರಿ ವಾಜಪೇಯಿ ಮತ್ತಿತರ ನಾಲ್ವರು ಸದಸ್ಯರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡುತ್ತಿದ್ದ ಅವರು ‘ಕೊಮರ್’ ಕ್ಷಿಪಣಿಗಳನ್ನು ಜೋಡಿಸಿದ ನೌಕೆಗಳನ್ನು ರಷ್ಯವು ಪಾಕಿಸ್ತಾನಕ್ಕೆ ಒದಗಿಸಿದೆಯೆಂಬುದನ್ನು ಸ್ಪಷ್ಟವಾಗಿ ನಿರಾಕರಿಸಿದರು.</p>.<p>ರಷ್ಯಾ ನೌಕೆಗಳನ್ನು ಒದಗಿಸಿರುವುದೆಂಬ ಸುದ್ದಿಗೆ ಆಧಾರ ಇಲ್ಲವೆಂದು ತಿಳಿಸಿದ ವಿದೇಶಾಂಗ ಸಚಿವರು ಆ ಬಗ್ಗೆ ರಷ್ಯದ ರಾಯಭಾರ ಕಚೇರಿಯಲ್ಲಿ ಈಗಾಗಲೇ ವಿಚಾರಿಸಲಾಗಿದೆ ಎಂದರು.</p>.<p><strong>ಭಾರತದ ಜತೆ ಬಾಂಧವ್ಯ ಸುಧಾರಣೆ, ಬಾಂಗ್ಲಾದೇಶ ಮಾನ್ಯತೆಗೆ ಭುಟ್ಟೋ ಬಯಕೆ</strong></p>.<p>ನವದೆಹಲಿ, ಮಾರ್ಚ್ 29– ಭಾರತ– ಪಾಕಿಸ್ತಾನ ಬಾಂಧವ್ಯದಲ್ಲಿನ ಬಿಕ್ಕಟ್ಟನ್ನು ‘ಮುರಿಯಬೇಕು’ ಎಂದು ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರು ಇಂದು ರಾತ್ರಿ ಹೇಳಿದರು.</p>.<p>ತಮ್ಮ ರಾಷ್ಟ್ರವನ್ನು ಉದ್ದೇಶಿಸಿ ಪ್ರಸಾರಭಾಷಣ ಮಾಡಿದ ಭುಟ್ಟೋ ಅವರು ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯವನ್ನು ಕಾಡುತ್ತಿರುವ ತೊಂದರೆಗಳನ್ನು ‘ದಾಟಲಾಗುತ್ತದೆ’ ಎಂದು ತಾವು ನಂಬಿರುವುದಾಗಿ ತಿಳಿಸಿದರು.</p>.<p>‘ಪಾಕಿಸ್ತಾನದ ಹಿತದೃಷ್ಟಿಯಿಂದ ಪಾಕಿಸ್ತಾನದ ಹೆಸರಿನಲ್ಲಿ ಅವುಗಳನ್ನು ದಾಟಬೇಕು’ ಎಂದರವರು.</p>.<p>ಬಾಂಗ್ಲಾದೇಶವನ್ನು ಅವರು ಪ್ರಸ್ತಾಪಿಸಿ ಸ್ವತಃ ತಾವು ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡಲು ಇಚ್ಛಿಸುತ್ತಿದ್ದುದಾಗಿ ಅವರು ಹೇಳಿ, ‘ಆದರೆ ಬಾಂಗ್ಲಾದೇಶಕ್ಕೆ ಮಾನ್ಯತೆ ಕೂಡದು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ’ ಎಂದರು.</p>.<p><strong>ಆಕ್ಟ್ರಾಯಿ ರದ್ದಿಗೆ ಆಗ್ರಹ</strong></p>.<p>ಬೆಂಗಳೂರು, ಮಾರ್ಚ್ 29– ಆಕ್ಟ್ರಾಯಿ ಸುಂಕ ಕಂದಾಚಾರದ ಪದ್ಧತಿಯಾಗಿದ್ದು ಅದರಿಂದ ಸೋರಿಹೋಗುವ ವರಮಾನವೇ ಹೆಚ್ಚಾಗಿದೆಯೆಂದು ಇಂದು ವಿಧಾನಸಭೆಯಲ್ಲಿ ಸದಸ್ಯರು ಟೀಕಿಸಿ ಅದನ್ನು ತತ್ಕ್ಷಣ ರದ್ದು ಮಾಡಲು ಆಗ್ರಹಪಡಿಸಿದರು.</p>.<p>ಪೌರಾಡಳಿತ ಬಾಬಿನ ಬೇಡಿಕೆಗಳ ಚರ್ಚೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸದಸ್ಯ ಶ್ರೀ ಕೆ.ಪುಟ್ಟಸ್ವಾಮಿ ಅವರು<br />ಪುರಸಭೆಗಳನ್ನು ರದ್ದು ಮಾಡಿ ಆಡಳಿತಾಧಿಕಾರಿಗಳನ್ನು ನೇಮಿಸುವುದು ಜನತಂತ್ರ ವಿರೋಧಿ ಕ್ರಮ ಎಂದು ಕಟುವಾಗಿ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಕಿಸ್ತಾನಕ್ಕೆ ಚೀನದ ಕ್ಷಿಪಣಿ ಸಜ್ಜಿತ ನೌಕೆಗಳು</strong></p>.<p>ನವದೆಹಲಿ, ಮಾರ್ಚ್ 29– ಚೀನವು ಪಾಕಿಸ್ತಾನಕ್ಕೆ ಕ್ಷಿಪಣಿಗಳನ್ನು ಜೋಡಿಸಿರುವ ಮಿಲಿಟರಿ ನೌಕೆಗಳನ್ನು ಒದಗಿಸುವುದಾಗಿ ತಿಳಿದು ಬಂದಿದೆಯೆಂದು ವಿದೇಶಾಂಗ ಖಾತೆ ಸಚಿವ ಸ್ವರಣಾಸಿಂಗ್ ಅವರು ಇಂದು ಲೋಕಸಭೆಯಲ್ಲಿ ಹೇಳಿದರು.</p>.<p>ಅಂಥ ಎಷ್ಟು ನೌಕೆಗಳನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ ಎಂಬುದು ಖಚಿತವಾಗಿ ಗೊತ್ತಿಲ್ಲ.</p>.<p>ಜನಸಂಘದ ಅಟಲಬಿಹಾರಿ ವಾಜಪೇಯಿ ಮತ್ತಿತರ ನಾಲ್ವರು ಸದಸ್ಯರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡುತ್ತಿದ್ದ ಅವರು ‘ಕೊಮರ್’ ಕ್ಷಿಪಣಿಗಳನ್ನು ಜೋಡಿಸಿದ ನೌಕೆಗಳನ್ನು ರಷ್ಯವು ಪಾಕಿಸ್ತಾನಕ್ಕೆ ಒದಗಿಸಿದೆಯೆಂಬುದನ್ನು ಸ್ಪಷ್ಟವಾಗಿ ನಿರಾಕರಿಸಿದರು.</p>.<p>ರಷ್ಯಾ ನೌಕೆಗಳನ್ನು ಒದಗಿಸಿರುವುದೆಂಬ ಸುದ್ದಿಗೆ ಆಧಾರ ಇಲ್ಲವೆಂದು ತಿಳಿಸಿದ ವಿದೇಶಾಂಗ ಸಚಿವರು ಆ ಬಗ್ಗೆ ರಷ್ಯದ ರಾಯಭಾರ ಕಚೇರಿಯಲ್ಲಿ ಈಗಾಗಲೇ ವಿಚಾರಿಸಲಾಗಿದೆ ಎಂದರು.</p>.<p><strong>ಭಾರತದ ಜತೆ ಬಾಂಧವ್ಯ ಸುಧಾರಣೆ, ಬಾಂಗ್ಲಾದೇಶ ಮಾನ್ಯತೆಗೆ ಭುಟ್ಟೋ ಬಯಕೆ</strong></p>.<p>ನವದೆಹಲಿ, ಮಾರ್ಚ್ 29– ಭಾರತ– ಪಾಕಿಸ್ತಾನ ಬಾಂಧವ್ಯದಲ್ಲಿನ ಬಿಕ್ಕಟ್ಟನ್ನು ‘ಮುರಿಯಬೇಕು’ ಎಂದು ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರು ಇಂದು ರಾತ್ರಿ ಹೇಳಿದರು.</p>.<p>ತಮ್ಮ ರಾಷ್ಟ್ರವನ್ನು ಉದ್ದೇಶಿಸಿ ಪ್ರಸಾರಭಾಷಣ ಮಾಡಿದ ಭುಟ್ಟೋ ಅವರು ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯವನ್ನು ಕಾಡುತ್ತಿರುವ ತೊಂದರೆಗಳನ್ನು ‘ದಾಟಲಾಗುತ್ತದೆ’ ಎಂದು ತಾವು ನಂಬಿರುವುದಾಗಿ ತಿಳಿಸಿದರು.</p>.<p>‘ಪಾಕಿಸ್ತಾನದ ಹಿತದೃಷ್ಟಿಯಿಂದ ಪಾಕಿಸ್ತಾನದ ಹೆಸರಿನಲ್ಲಿ ಅವುಗಳನ್ನು ದಾಟಬೇಕು’ ಎಂದರವರು.</p>.<p>ಬಾಂಗ್ಲಾದೇಶವನ್ನು ಅವರು ಪ್ರಸ್ತಾಪಿಸಿ ಸ್ವತಃ ತಾವು ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡಲು ಇಚ್ಛಿಸುತ್ತಿದ್ದುದಾಗಿ ಅವರು ಹೇಳಿ, ‘ಆದರೆ ಬಾಂಗ್ಲಾದೇಶಕ್ಕೆ ಮಾನ್ಯತೆ ಕೂಡದು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ’ ಎಂದರು.</p>.<p><strong>ಆಕ್ಟ್ರಾಯಿ ರದ್ದಿಗೆ ಆಗ್ರಹ</strong></p>.<p>ಬೆಂಗಳೂರು, ಮಾರ್ಚ್ 29– ಆಕ್ಟ್ರಾಯಿ ಸುಂಕ ಕಂದಾಚಾರದ ಪದ್ಧತಿಯಾಗಿದ್ದು ಅದರಿಂದ ಸೋರಿಹೋಗುವ ವರಮಾನವೇ ಹೆಚ್ಚಾಗಿದೆಯೆಂದು ಇಂದು ವಿಧಾನಸಭೆಯಲ್ಲಿ ಸದಸ್ಯರು ಟೀಕಿಸಿ ಅದನ್ನು ತತ್ಕ್ಷಣ ರದ್ದು ಮಾಡಲು ಆಗ್ರಹಪಡಿಸಿದರು.</p>.<p>ಪೌರಾಡಳಿತ ಬಾಬಿನ ಬೇಡಿಕೆಗಳ ಚರ್ಚೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸದಸ್ಯ ಶ್ರೀ ಕೆ.ಪುಟ್ಟಸ್ವಾಮಿ ಅವರು<br />ಪುರಸಭೆಗಳನ್ನು ರದ್ದು ಮಾಡಿ ಆಡಳಿತಾಧಿಕಾರಿಗಳನ್ನು ನೇಮಿಸುವುದು ಜನತಂತ್ರ ವಿರೋಧಿ ಕ್ರಮ ಎಂದು ಕಟುವಾಗಿ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>