<p><strong>‘ಸಂಜೀವಿನಿ’ (?) ನುಂಗಿದರೂ ರೋಗ ಬಿಡಲಿಲ್ಲ</strong></p>.<p>ಕಟಕ್, ಡಿ. 17– ‘ಸರ್ವರೋಗ ನಿವಾರಣೆ’ ಮದ್ದಿಗಾಗಿ ಜನ ಬರುವುದನ್ನು ತಡೆಯಬೇಕೆಂಬುದಾಗಿ ಈ ದಿನ ಒರಿಸ್ಸಾದ ಸಾರ್ವಜನಿಕ ಸಂಪರ್ಕ ಶಾಖಾ ಸಚಿವ ಪ್ರವಟಕ ಮೋಹನ ಪ್ರಧಾನ್ರವರು ನೆರೆ ಪ್ರಾಂತ್ಯಗಳ ಸಾರ್ವಜನಿಕರಿಗೂ ಪತ್ರಿಕೆಗಳಿಗೂ ವಿನಂತಿ ಮಾಡಿಕೊಂಡರು.</p>.<p>ಕುರುಬ ಹುಡುಗನ ವೈದ್ಯ ಪ್ರತೀತಿಗೆ ಮರುಳಾಗಿ ರಿಂಕಲ್ಟೆಗೆ ಬಂದ ಯಾತ್ರಿಕರು ಹಾಗೂ ರೋಗಿಗಳಲ್ಲಿ ಅನೇಕರು ಕಾಲರಾದಿಂದ ಮೃತರಾದರೆಂದೂ ತಿಳಿಸಿದರು. ಔಷಧಿ ನುಂಗಿದ ಕೆಲವರನ್ನು ರೋಗ ನುಂಗಿತೆಂದರು.</p>.<p><strong>ಕಮ್ಯುನಿಸ್ಟರೆಂದು ಸ್ತ್ರೀ, ಪುರುಷ, ಮಕ್ಕಳಿಗೆ ಗುಂಡೇಟು</strong></p>.<p>ಸಿಯೋಲ್, ಡಿ. 17– ದಕ್ಷಿಣ ಕೊರಿಯದ ಮಹಿಳೆಯೊಬ್ಬಳನ್ನು ಕಳೆದ ಶುಕ್ರವಾರ ಬಲಪಕ್ಷದ ಕೊರಿಯಾ ಯುವಜನ ರಕ್ಷಣಾ ಸಂಘದವರು ಕೊಲೆ ಮಾಡಲೆತ್ನಿಸುತ್ತಿದ್ದಾಗ, ಅಮೆರಿಕದ ಕಾಲಾಳು ದಳದ ಪಹರೆಯವರು ಮಧ್ಯ ಹೋಗಿ ತಪ್ಪಿಸಿದರು. ಆದರೆ, ಇವರು ಬರುವ ಹೊತ್ತಿಗೆ 26 ಮಂದಿ ಇತರರನ್ನು ವಧೆ ಮಾಡಲಾಗಿತ್ತು.</p>.<p>ವಧೆಗಾಗಿ ನಿಲ್ಲಿಸಲಾಗಿದ್ದ ಸ್ತ್ರೀಯರಲ್ಲಿ ಬದುಕಿಕೊಂಡವಳು ಈಕೆಯೊಬ್ಬಳೆ. ತನ್ನ 9 ವರ್ಷದ ಮಗನನ್ನೂ, ಮತ್ತೊಬ್ಬಾಕೆಯ 13 ವರ್ಷದ ಕುಮಾರಿಯನ್ನೂ ಗುಂಡಿನಿಂದ ಹೊಡೆದು ಕೊಲೆ ಮಾಡಿದ ದೃಶ್ಯವನ್ನು ಈಕೆ ಕಣ್ಣಾರೆ ಕಂಡಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಸಂಜೀವಿನಿ’ (?) ನುಂಗಿದರೂ ರೋಗ ಬಿಡಲಿಲ್ಲ</strong></p>.<p>ಕಟಕ್, ಡಿ. 17– ‘ಸರ್ವರೋಗ ನಿವಾರಣೆ’ ಮದ್ದಿಗಾಗಿ ಜನ ಬರುವುದನ್ನು ತಡೆಯಬೇಕೆಂಬುದಾಗಿ ಈ ದಿನ ಒರಿಸ್ಸಾದ ಸಾರ್ವಜನಿಕ ಸಂಪರ್ಕ ಶಾಖಾ ಸಚಿವ ಪ್ರವಟಕ ಮೋಹನ ಪ್ರಧಾನ್ರವರು ನೆರೆ ಪ್ರಾಂತ್ಯಗಳ ಸಾರ್ವಜನಿಕರಿಗೂ ಪತ್ರಿಕೆಗಳಿಗೂ ವಿನಂತಿ ಮಾಡಿಕೊಂಡರು.</p>.<p>ಕುರುಬ ಹುಡುಗನ ವೈದ್ಯ ಪ್ರತೀತಿಗೆ ಮರುಳಾಗಿ ರಿಂಕಲ್ಟೆಗೆ ಬಂದ ಯಾತ್ರಿಕರು ಹಾಗೂ ರೋಗಿಗಳಲ್ಲಿ ಅನೇಕರು ಕಾಲರಾದಿಂದ ಮೃತರಾದರೆಂದೂ ತಿಳಿಸಿದರು. ಔಷಧಿ ನುಂಗಿದ ಕೆಲವರನ್ನು ರೋಗ ನುಂಗಿತೆಂದರು.</p>.<p><strong>ಕಮ್ಯುನಿಸ್ಟರೆಂದು ಸ್ತ್ರೀ, ಪುರುಷ, ಮಕ್ಕಳಿಗೆ ಗುಂಡೇಟು</strong></p>.<p>ಸಿಯೋಲ್, ಡಿ. 17– ದಕ್ಷಿಣ ಕೊರಿಯದ ಮಹಿಳೆಯೊಬ್ಬಳನ್ನು ಕಳೆದ ಶುಕ್ರವಾರ ಬಲಪಕ್ಷದ ಕೊರಿಯಾ ಯುವಜನ ರಕ್ಷಣಾ ಸಂಘದವರು ಕೊಲೆ ಮಾಡಲೆತ್ನಿಸುತ್ತಿದ್ದಾಗ, ಅಮೆರಿಕದ ಕಾಲಾಳು ದಳದ ಪಹರೆಯವರು ಮಧ್ಯ ಹೋಗಿ ತಪ್ಪಿಸಿದರು. ಆದರೆ, ಇವರು ಬರುವ ಹೊತ್ತಿಗೆ 26 ಮಂದಿ ಇತರರನ್ನು ವಧೆ ಮಾಡಲಾಗಿತ್ತು.</p>.<p>ವಧೆಗಾಗಿ ನಿಲ್ಲಿಸಲಾಗಿದ್ದ ಸ್ತ್ರೀಯರಲ್ಲಿ ಬದುಕಿಕೊಂಡವಳು ಈಕೆಯೊಬ್ಬಳೆ. ತನ್ನ 9 ವರ್ಷದ ಮಗನನ್ನೂ, ಮತ್ತೊಬ್ಬಾಕೆಯ 13 ವರ್ಷದ ಕುಮಾರಿಯನ್ನೂ ಗುಂಡಿನಿಂದ ಹೊಡೆದು ಕೊಲೆ ಮಾಡಿದ ದೃಶ್ಯವನ್ನು ಈಕೆ ಕಣ್ಣಾರೆ ಕಂಡಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>