<p><strong>ಬೆಂಗಳೂರು, ಜ. 22</strong>– ಇಂದು ಕಲ್ಕತ್ತದಿಂದ ಬೆಂಗಳೂರಿಗೆ ಬಂದ ‘ಏರ್ವೇಸ್ ಇಂಡಿಯಾ’ ವಿಮಾನವೊಂದು ವಿಮಾನ ನಿಲ್ದಾಣದಲ್ಲಿ ಕೆಳಗಿಳಿಯುವಾಗ ನೆಲಕ್ಕೆ ತಾಕಿದ್ದರಿಂದ ಆ ವಿಮಾನಕ್ಕೆ ಸ್ವಲ್ಪ ಜಖಂ ಆಗಿದೆ.</p>.<p>ವಿಮಾನದಲ್ಲಿದ್ದ ಯಾರಿಗೂ ಅಪಾಯವಾಗಿಲ್ಲ. ಮೈಸೂರಿನ ಮಾಜಿ ದಿವಾನರಾದ ಸರ್. ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅವರೂ ಈ ವಿಮಾನದಲ್ಲಿದ್ದರು.</p>.<p><strong>ಸಿಂಗಪುರದಲ್ಲಿ ಭಾರತ ಯುವಕರಿಗೆ ಶಿಕ್ಷೆ</strong></p><p><strong>ಸಿಂಗಪುರ, ಜ. 22– </strong>‘ಜರ್ಥಾಹರ್ಟೋಗ್ ವ್ಯವಹಾರದ ಬಗ್ಗೆ ಸಿಂಗಪುರ ವಸಾಹತಿನಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆದ ದೊಂಬಿಯಲ್ಲಿ ನ್ಯಾಯಬಾಹಿರವಾದ ಸಭೆಯ ಸದಸ್ಯರಾಗಿದ್ದರೆಂದು ಇಬ್ಬರು ಭಾರತೀಯ ಯುವಕರನ್ನು ತುರಂಗವಾಸದ ಶಿಕ್ಷೆಗೆ ಒಳಪಡಿಸಲಾಗಿದೆ.</p>.<p>ರಂಗಸ್ವಾಮಿ ಮತ್ತು ಸಿ. ಕೃಷ್ಣನ್ ಎಂಬ ಇಬ್ಬರು ಯುವಕರಿಗೆ ಕ್ರಮವಾಗಿ ನಾಲ್ಕು ಹಾಗೂ ಮೂರು ತಿಂಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು, ಜ. 22</strong>– ಇಂದು ಕಲ್ಕತ್ತದಿಂದ ಬೆಂಗಳೂರಿಗೆ ಬಂದ ‘ಏರ್ವೇಸ್ ಇಂಡಿಯಾ’ ವಿಮಾನವೊಂದು ವಿಮಾನ ನಿಲ್ದಾಣದಲ್ಲಿ ಕೆಳಗಿಳಿಯುವಾಗ ನೆಲಕ್ಕೆ ತಾಕಿದ್ದರಿಂದ ಆ ವಿಮಾನಕ್ಕೆ ಸ್ವಲ್ಪ ಜಖಂ ಆಗಿದೆ.</p>.<p>ವಿಮಾನದಲ್ಲಿದ್ದ ಯಾರಿಗೂ ಅಪಾಯವಾಗಿಲ್ಲ. ಮೈಸೂರಿನ ಮಾಜಿ ದಿವಾನರಾದ ಸರ್. ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅವರೂ ಈ ವಿಮಾನದಲ್ಲಿದ್ದರು.</p>.<p><strong>ಸಿಂಗಪುರದಲ್ಲಿ ಭಾರತ ಯುವಕರಿಗೆ ಶಿಕ್ಷೆ</strong></p><p><strong>ಸಿಂಗಪುರ, ಜ. 22– </strong>‘ಜರ್ಥಾಹರ್ಟೋಗ್ ವ್ಯವಹಾರದ ಬಗ್ಗೆ ಸಿಂಗಪುರ ವಸಾಹತಿನಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆದ ದೊಂಬಿಯಲ್ಲಿ ನ್ಯಾಯಬಾಹಿರವಾದ ಸಭೆಯ ಸದಸ್ಯರಾಗಿದ್ದರೆಂದು ಇಬ್ಬರು ಭಾರತೀಯ ಯುವಕರನ್ನು ತುರಂಗವಾಸದ ಶಿಕ್ಷೆಗೆ ಒಳಪಡಿಸಲಾಗಿದೆ.</p>.<p>ರಂಗಸ್ವಾಮಿ ಮತ್ತು ಸಿ. ಕೃಷ್ಣನ್ ಎಂಬ ಇಬ್ಬರು ಯುವಕರಿಗೆ ಕ್ರಮವಾಗಿ ನಾಲ್ಕು ಹಾಗೂ ಮೂರು ತಿಂಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>