<p><strong>ಬೆಂಗಳೂರು</strong>, ಫೆ. 27– ಕಾಂಗ್ರೆಸ್ ಸರ್ಕಾರದ ಘೋಷಿತ, ಜನತಾಂತ್ರಿಕ ಹಾಗೂ ಸಮಾಜವಾದಿ ಧ್ಯೇಯಗಳು, ಕಳೆದ ಎರಡು ವರ್ಷಗಳ ಆಡಳಿತದಲ್ಲಿ ಅನಾಥವಾಗಿ, ದೇಶದಲ್ಲಿ ಜನರು ದಂಗೆ ಏಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಶ್ರೀ ಎಚ್.ಡಿ. ದೇವೇಗೌಡ ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು.</p><p>ಫೆಬ್ರುವರಿ 25ರಂದು ವಿಧಾನಮಂಡಲದ ಸಂಯುಕ್ತ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಿದುದಕ್ಕೆ ವಂದನೆ<br>ಅರ್ಪಿಸುವ ನಿರ್ಣಯವನ್ನು ವಿರೋಧಿಸಿ ಮಾತನಾಡಿದರು.</p><p>ರೈಲು ಪ್ರಯಾಣ, ಸಾಗಣೆ ದರದಲ್ಲಿ ಏರಿಕೆ</p><p>ನವದೆಹಲಿ, ಫೆ. 27– 1974ನೇ ಸಾಲಿನಲ್ಲಿ 136.38 ಕೋಟಿ ರೂಪಾಯಿಗಳ ಹೆಚ್ಚಿನ ಸಂಪನ್ಮೂಲವನ್ನು ಕಲೆಹಾಕಲು ಎಲ್ಲ ವರ್ಗದ ಪ್ರಯಾಣಿಕರ ದರವನ್ನು ಹೆಚ್ಚಿಸುವುದಾ<br>ಗಿಯೂ ಹಾಗೂ ಸಾಗಣೆ ದರಗಳನ್ನು ಗಣನೀಯ ಪ್ರಮಾಣದಲ್ಲಿ ಪರಿಷ್ಕರಿಸುವುದಾಗಿಯೂ ರೈಲ್ವೆ ಮಂತ್ರಿ ಶ್ರೀ ಲಲಿತ ನಾರಾಯಣ ಮಿಶ್ರಾ ಅವರು ಇಂದು ಸೂಚಿಸಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>, ಫೆ. 27– ಕಾಂಗ್ರೆಸ್ ಸರ್ಕಾರದ ಘೋಷಿತ, ಜನತಾಂತ್ರಿಕ ಹಾಗೂ ಸಮಾಜವಾದಿ ಧ್ಯೇಯಗಳು, ಕಳೆದ ಎರಡು ವರ್ಷಗಳ ಆಡಳಿತದಲ್ಲಿ ಅನಾಥವಾಗಿ, ದೇಶದಲ್ಲಿ ಜನರು ದಂಗೆ ಏಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಶ್ರೀ ಎಚ್.ಡಿ. ದೇವೇಗೌಡ ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು.</p><p>ಫೆಬ್ರುವರಿ 25ರಂದು ವಿಧಾನಮಂಡಲದ ಸಂಯುಕ್ತ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಿದುದಕ್ಕೆ ವಂದನೆ<br>ಅರ್ಪಿಸುವ ನಿರ್ಣಯವನ್ನು ವಿರೋಧಿಸಿ ಮಾತನಾಡಿದರು.</p><p>ರೈಲು ಪ್ರಯಾಣ, ಸಾಗಣೆ ದರದಲ್ಲಿ ಏರಿಕೆ</p><p>ನವದೆಹಲಿ, ಫೆ. 27– 1974ನೇ ಸಾಲಿನಲ್ಲಿ 136.38 ಕೋಟಿ ರೂಪಾಯಿಗಳ ಹೆಚ್ಚಿನ ಸಂಪನ್ಮೂಲವನ್ನು ಕಲೆಹಾಕಲು ಎಲ್ಲ ವರ್ಗದ ಪ್ರಯಾಣಿಕರ ದರವನ್ನು ಹೆಚ್ಚಿಸುವುದಾ<br>ಗಿಯೂ ಹಾಗೂ ಸಾಗಣೆ ದರಗಳನ್ನು ಗಣನೀಯ ಪ್ರಮಾಣದಲ್ಲಿ ಪರಿಷ್ಕರಿಸುವುದಾಗಿಯೂ ರೈಲ್ವೆ ಮಂತ್ರಿ ಶ್ರೀ ಲಲಿತ ನಾರಾಯಣ ಮಿಶ್ರಾ ಅವರು ಇಂದು ಸೂಚಿಸಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>