<p><strong>ಬಂಗಾಳ ಮುಖ್ಯಮಂತ್ರಿ ಅಜಯ್ ರಾಜೀನಾಮೆ</strong></p>.<p>ಕಲ್ಕತ್ತ, ಮಾರ್ಚ್ 16– ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ಅಜಯ್ ಮುಖರ್ಜಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.ಜನತೆಗೆ ಭದ್ರತೆಯನ್ನು ಒದಗಿಸಲು ತಮ್ಮ ಕೈಲಿ ಸಾಧ್ಯವಾಗದ ಕಾರಣ ತಾವು ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.</p>.<p>‘ಪಕ್ಷಾಂತರ ಕಲಹಗಳು, ಲೂಟಿ, ಕೊಲೆ, ಮಹಿಳೆಯರಿಗೆ ಆಗುತ್ತಿರುವ ಅಪಮಾನವನ್ನು ತಡೆಯಲು ನನ್ನಿಂದ ಸಾಧ್ಯವಾಗಲಿಲ್ಲ. ಇವು ನಿರಂತರವಾಗಿ ನಡೆಯುತ್ತಲೇ ಇವೆ. ನಾನು ಅಧಿಕಾರದಲ್ಲಿ ಮುಂದುವರಿದಿದ್ದರೆ ಜನತೆಗೆ ದ್ರೋಹ ಬಗೆದಂತಾಗುತ್ತಿತ್ತು’ ಎಂದರು.</p>.<p><strong>ಅಲ್ಪ ಉಳಿತಾಯ ಠೇವಣಿಗೆ ಹೆಚ್ಚಿನ ಬಡ್ಡಿ ದರ ನಿಗದಿಗೊಳಿಸಲು ಹೆಗಡೆ ಕರೆ</strong></p>.<p>ಬೆಂಗಳೂರು, ಮಾರ್ಚ್ 16– ವಾಣಿಜ್ಯ ಬ್ಯಾಂಕುಗಳ ಬಡ್ಡಿ ದರಕ್ಕೆ ಸಮನಾಗಿರುವ ಹೊಸ ಬಡ್ಡಿ ದರಗಳನ್ನು ಕಾರ್ಯರೂಪಕ್ಕೆ ತಂದರೆ ಅಲ್ಪ ಉಳಿತಾಯ ಯೋಜನೆಗೆ ವಿನಿಯೋಗಿಸಲು ಹೆಚ್ಚಿನ ಜನರು ಮುಂದೆ ಬರಬಹುದೆಂದು ಅರ್ಥ ಸಚಿವ ರಾಮಕೃಷ್ಣ ಹೆಗಡೆ ಅವರು ಇಂದು ಇಲ್ಲಿ ಆಶಿಸಿದರು.</p>.<p>‘ಯದ್ವಾತದ್ವಾ ಬಡ್ಡಿ ದರ ನೀಡಲು ಮುಂದೆ ಬಂದು ‘ನಾಯಿ ಕೊಡೆ’ಗಳಂತೆ ಎದ್ದಿರುವ ಫೈನಾನ್ಸ್ ಕಾರ್ಪೊರೇಷನ್ಗಳ ಬಗ್ಗೆ ಸರ್ಕಾರ ಏನೂ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದೆ’ ಎಂದರು.</p>.<p><strong>ಜ್ಯೋತಿ ಬಸುಗೆ ಆಹ್ವಾನ ನೀಡಲು ಕೇಂದ್ರದ ವಿರೋಧ</strong></p>.<p>ಹೊಸದೆಹಲಿ, ಮಾರ್ಚ್ 16– ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿಗಳ<br />ಬೆಳವಣಿಗೆಯನ್ನು ಇಂದು ಪರಿಶೀಲಿಸಿದ ಕೇಂದ್ರ ಸಂಪುಟದ ಆಂತರಿಕ ವ್ಯವಹಾರಗಳ ಸಮಿತಿ ಒಟ್ಟಭಿಪ್ರಾಯವು, ಮಾರ್ಕ್ಸ್ವಾದಿ ನಾಯಕ ಜ್ಯೋತಿ ಬಸು ಅವರು ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸ್ಥಿರೀಕರಿಸದೇ ಹೋದರೆ ಸರ್ಕಾರ ರಚಿಸಲು ಅವರನ್ನು ಆಹ್ವಾನಿಸುವುದಕ್ಕೆ ವಿರುದ್ಧವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾಳ ಮುಖ್ಯಮಂತ್ರಿ ಅಜಯ್ ರಾಜೀನಾಮೆ</strong></p>.<p>ಕಲ್ಕತ್ತ, ಮಾರ್ಚ್ 16– ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ಅಜಯ್ ಮುಖರ್ಜಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.ಜನತೆಗೆ ಭದ್ರತೆಯನ್ನು ಒದಗಿಸಲು ತಮ್ಮ ಕೈಲಿ ಸಾಧ್ಯವಾಗದ ಕಾರಣ ತಾವು ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.</p>.<p>‘ಪಕ್ಷಾಂತರ ಕಲಹಗಳು, ಲೂಟಿ, ಕೊಲೆ, ಮಹಿಳೆಯರಿಗೆ ಆಗುತ್ತಿರುವ ಅಪಮಾನವನ್ನು ತಡೆಯಲು ನನ್ನಿಂದ ಸಾಧ್ಯವಾಗಲಿಲ್ಲ. ಇವು ನಿರಂತರವಾಗಿ ನಡೆಯುತ್ತಲೇ ಇವೆ. ನಾನು ಅಧಿಕಾರದಲ್ಲಿ ಮುಂದುವರಿದಿದ್ದರೆ ಜನತೆಗೆ ದ್ರೋಹ ಬಗೆದಂತಾಗುತ್ತಿತ್ತು’ ಎಂದರು.</p>.<p><strong>ಅಲ್ಪ ಉಳಿತಾಯ ಠೇವಣಿಗೆ ಹೆಚ್ಚಿನ ಬಡ್ಡಿ ದರ ನಿಗದಿಗೊಳಿಸಲು ಹೆಗಡೆ ಕರೆ</strong></p>.<p>ಬೆಂಗಳೂರು, ಮಾರ್ಚ್ 16– ವಾಣಿಜ್ಯ ಬ್ಯಾಂಕುಗಳ ಬಡ್ಡಿ ದರಕ್ಕೆ ಸಮನಾಗಿರುವ ಹೊಸ ಬಡ್ಡಿ ದರಗಳನ್ನು ಕಾರ್ಯರೂಪಕ್ಕೆ ತಂದರೆ ಅಲ್ಪ ಉಳಿತಾಯ ಯೋಜನೆಗೆ ವಿನಿಯೋಗಿಸಲು ಹೆಚ್ಚಿನ ಜನರು ಮುಂದೆ ಬರಬಹುದೆಂದು ಅರ್ಥ ಸಚಿವ ರಾಮಕೃಷ್ಣ ಹೆಗಡೆ ಅವರು ಇಂದು ಇಲ್ಲಿ ಆಶಿಸಿದರು.</p>.<p>‘ಯದ್ವಾತದ್ವಾ ಬಡ್ಡಿ ದರ ನೀಡಲು ಮುಂದೆ ಬಂದು ‘ನಾಯಿ ಕೊಡೆ’ಗಳಂತೆ ಎದ್ದಿರುವ ಫೈನಾನ್ಸ್ ಕಾರ್ಪೊರೇಷನ್ಗಳ ಬಗ್ಗೆ ಸರ್ಕಾರ ಏನೂ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದೆ’ ಎಂದರು.</p>.<p><strong>ಜ್ಯೋತಿ ಬಸುಗೆ ಆಹ್ವಾನ ನೀಡಲು ಕೇಂದ್ರದ ವಿರೋಧ</strong></p>.<p>ಹೊಸದೆಹಲಿ, ಮಾರ್ಚ್ 16– ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿಗಳ<br />ಬೆಳವಣಿಗೆಯನ್ನು ಇಂದು ಪರಿಶೀಲಿಸಿದ ಕೇಂದ್ರ ಸಂಪುಟದ ಆಂತರಿಕ ವ್ಯವಹಾರಗಳ ಸಮಿತಿ ಒಟ್ಟಭಿಪ್ರಾಯವು, ಮಾರ್ಕ್ಸ್ವಾದಿ ನಾಯಕ ಜ್ಯೋತಿ ಬಸು ಅವರು ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸ್ಥಿರೀಕರಿಸದೇ ಹೋದರೆ ಸರ್ಕಾರ ರಚಿಸಲು ಅವರನ್ನು ಆಹ್ವಾನಿಸುವುದಕ್ಕೆ ವಿರುದ್ಧವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>