<p><strong>‘ಅಗ್ನಿ ಪರೀಕ್ಷಾ’ ಪರಿಷ್ಕರಣಕ್ಕೆ ಆಚಾರ್ಯ ತುಳಸಿ ಇಚ್ಛೆ</strong></p>.<p><strong>ರಾಯಪುರ, ನ. 13–</strong> ತಮ್ಮ ವಿವಾದಾತ್ಮಕ ಗ್ರಂಥ ‘ಅಗ್ನಿಪರೀಕ್ಷಾ’ವನ್ನು ಸೂಕ್ತವಾಗಿ ತಿದ್ದುಪಡಿ ಮಾಡುವ ಮತ್ತು ಇಲ್ಲಿನ ಸನಾತನ ಧರ್ಮೀಯರ ಭಾವನೆಗೆ ಕುಂದುಂಟು ಮಾಡಿರುವ ಪದಗಳನ್ನು ಹಾಗೂ ವಾಕ್ಯಗಳನ್ನು ಪುಸ್ತಕದಿಂದ ತೆಗೆದುಹಾಕುವ ತಮ್ಮಿಚ್ಛೆಯನ್ನು ಜೈನಮುನಿ ಆಚಾರ್ಯ ತುಳಸಿ ಅವರು ವ್ಯಕ್ತಪಡಿಸಿದ್ದಾರೆ.</p>.<p>ಸಮಾಧಾನ ಸಮಿತಿಯ ಉಪಾಧ್ಯಕ್ಷ ಶ್ರೀ ದೇವೇಂದ್ರ ಕುಮಾರ್ ಗುಪ್ತಾ ಮತ್ತು ಕಾರ್ಯದರ್ಶಿ ಶ್ರೀ ಎಸ್. ಗೋಪಾಲಶಾಸ್ತ್ರಿ ಅವರಿಗೆ ಆಚಾರ್ಯ ತುಳಸಿ ಅವರು ನಿನ್ನೆ ಈ ಅಂಶ ತಿಳಿಸಿದರು. ಆರ್.ಆರ್. ದಿವಾಕರ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಧಾರ್ಮಿಕ ಮುಖಂಡರ ಸಮ್ಮೇಳನದಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು.</p>.<p><strong>ಸಂಸತ್ ಅಥವಾ ಪ್ರತ್ಯೇಕ ಆಯೋಗ ಪರಿಶೀಲನೆಗೆ ಮಹಾಜನ್ ವರದಿ?</strong></p>.<p><strong>ನವದೆಹಲಿ, ನ. 13– ಮೈಸೂರು– </strong>ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರ ವಿವಿಧ ಪರ್ಯಾಯ ಸೂತ್ರಗಳನ್ನು ಇನ್ನೂ ಪರಿಶೀಲಿಸುತ್ತಿದೆ.</p>.<p>ವಿವಾದವನ್ನು ಸಂಸತ್ ಉಪಸಮಿತಿಯೊಂದಕ್ಕೆ ವಹಿಸುವ ಸಲಹೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದ್ದು, ಮಹಾಜನ್ ವರದಿಯನ್ನು ಸಂಸತ್ತಿಗೋ ಅಥವಾ ಹೊಸ ಆಯೋಗವೊಂದಕ್ಕೋ ವಹಿಸುವ ಇತರ ಸಾಧ್ಯತೆಗಳನ್ನು ಪೂರ್ಣವಾಗಿ ತಿಳಿಯುವವರೆಗೆ ಅಂತಹ ಕ್ರಮ ತೆಗೆದುಕೊಳ್ಳುವ ಸಂಭವವಿಲ್ಲವೆಂದು ಅಧಿಕೃತ ವಲಯಗಳಿಂದ ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಅಗ್ನಿ ಪರೀಕ್ಷಾ’ ಪರಿಷ್ಕರಣಕ್ಕೆ ಆಚಾರ್ಯ ತುಳಸಿ ಇಚ್ಛೆ</strong></p>.<p><strong>ರಾಯಪುರ, ನ. 13–</strong> ತಮ್ಮ ವಿವಾದಾತ್ಮಕ ಗ್ರಂಥ ‘ಅಗ್ನಿಪರೀಕ್ಷಾ’ವನ್ನು ಸೂಕ್ತವಾಗಿ ತಿದ್ದುಪಡಿ ಮಾಡುವ ಮತ್ತು ಇಲ್ಲಿನ ಸನಾತನ ಧರ್ಮೀಯರ ಭಾವನೆಗೆ ಕುಂದುಂಟು ಮಾಡಿರುವ ಪದಗಳನ್ನು ಹಾಗೂ ವಾಕ್ಯಗಳನ್ನು ಪುಸ್ತಕದಿಂದ ತೆಗೆದುಹಾಕುವ ತಮ್ಮಿಚ್ಛೆಯನ್ನು ಜೈನಮುನಿ ಆಚಾರ್ಯ ತುಳಸಿ ಅವರು ವ್ಯಕ್ತಪಡಿಸಿದ್ದಾರೆ.</p>.<p>ಸಮಾಧಾನ ಸಮಿತಿಯ ಉಪಾಧ್ಯಕ್ಷ ಶ್ರೀ ದೇವೇಂದ್ರ ಕುಮಾರ್ ಗುಪ್ತಾ ಮತ್ತು ಕಾರ್ಯದರ್ಶಿ ಶ್ರೀ ಎಸ್. ಗೋಪಾಲಶಾಸ್ತ್ರಿ ಅವರಿಗೆ ಆಚಾರ್ಯ ತುಳಸಿ ಅವರು ನಿನ್ನೆ ಈ ಅಂಶ ತಿಳಿಸಿದರು. ಆರ್.ಆರ್. ದಿವಾಕರ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಧಾರ್ಮಿಕ ಮುಖಂಡರ ಸಮ್ಮೇಳನದಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು.</p>.<p><strong>ಸಂಸತ್ ಅಥವಾ ಪ್ರತ್ಯೇಕ ಆಯೋಗ ಪರಿಶೀಲನೆಗೆ ಮಹಾಜನ್ ವರದಿ?</strong></p>.<p><strong>ನವದೆಹಲಿ, ನ. 13– ಮೈಸೂರು– </strong>ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರ ವಿವಿಧ ಪರ್ಯಾಯ ಸೂತ್ರಗಳನ್ನು ಇನ್ನೂ ಪರಿಶೀಲಿಸುತ್ತಿದೆ.</p>.<p>ವಿವಾದವನ್ನು ಸಂಸತ್ ಉಪಸಮಿತಿಯೊಂದಕ್ಕೆ ವಹಿಸುವ ಸಲಹೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದ್ದು, ಮಹಾಜನ್ ವರದಿಯನ್ನು ಸಂಸತ್ತಿಗೋ ಅಥವಾ ಹೊಸ ಆಯೋಗವೊಂದಕ್ಕೋ ವಹಿಸುವ ಇತರ ಸಾಧ್ಯತೆಗಳನ್ನು ಪೂರ್ಣವಾಗಿ ತಿಳಿಯುವವರೆಗೆ ಅಂತಹ ಕ್ರಮ ತೆಗೆದುಕೊಳ್ಳುವ ಸಂಭವವಿಲ್ಲವೆಂದು ಅಧಿಕೃತ ವಲಯಗಳಿಂದ ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>