ಡಾಕಾ, ನ.14: ಇಲ್ಲಿಂದ ದಕ್ಷಿಣಕ್ಕೆ ಗಂಗಾನದಿಪ್ರದೇಶದಲ್ಲಿರುವ ಹಟಿಯಾ ದ್ವೀಪದ ಮೇಲೆ ರಾಕ್ಷಸಾಕಾರದ ಸಮುದ್ರದ ಅಲೆಗಳು ಅಪ್ಪಳಿಸಿ ಸುಮಾರು 60,000 ಜನರು ಕೊಚ್ಚಿ ಹೋಗಿದ್ದಾರೆಂದು ಇಲ್ಲಿಗೆ ತಲುಪಿರುವ ವರದಿಗಳು ತಿಳಿಸಿವೆ.
ಮಹಾಜನ್ ವರದಿಯೇ ನಮಗೆ ಒಪ್ಪಿಗೆ: ಕೇಂದ್ರಕ್ಕೆ ಮತ್ತೆ ವೀರೇಂದ್ರ ಸ್ಪಷ್ಟನೆ
ಬೆಂಗಳೂರು, ನ.14: ಮಹಾಜನ್ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿರುವ ಯಾವ ಸಲಹೆಯೂ ಮೈಸೂರು ರಾಜ್ಯ ಹಾಗೂ ಜನತೆಗೆ ಒಪ್ಪಿಗೆಯಾಗದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ದೆಹಲಿಯಲ್ಲಿ ಮತ್ತೆ ಪ್ರತಿಪಾದಿಸಿದರು.