<p>ಜಮ್ಮು, ಫೆ. 10 (ಪಿಟಿಐ)– ಜಮ್ಮು ಮತ್ತು ಕಾಶ್ಮೀರದ ರಾಚೌರಿ ಜಿಲ್ಲೆಯ ಕೊಚತ್ವಾಲ್ ಎಂಬ ಹಳ್ಳಿಯಲ್ಲಿ ನಿನ್ನೆ ರಾತ್ರಿ ಶಸ್ತ್ರಸಜ್ಜಿತ ಉಗ್ರಗಾಮಿಗಳು ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಮೂವರು ಮಹಿಳೆಯರು, ಏಳು ಮಕ್ಕಳು ಸೇರಿದಂತೆ ಹದಿನೈದು ಜನರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p>ನಿನ್ನೆ ಮಧ್ಯರಾತ್ರಿ ಹಳ್ಳಿಗೆ ದಾಳಿ<br>ಯಿಟ್ಟ ಉಗ್ರರು ಮೊದಲು ಮಕ್ಕಳನ್ನು ಹೊಡೆದರು. ನಂತರ ಒಂದೇ ಸಮನೆ ಗುಂಡಿನ ಮಳೆಗರೆದರು. ಇದರಿಂದ ಬಾಕೆರ್ವಾಲ್ ಸಮುದಾಯದ 15 ಜನರು ಮೃತರಾದರು. ತಕ್ಷಣ ಗ್ರಾಮ ರಕ್ಷಣಾ ಸಮಿತಿಯ ಸದಸ್ಯರು ಧಾವಿಸಿ ಪ್ರತಿದಾಳಿ ನಡೆಸಿದರು.</p>.<p><strong>ಅಪಘಾತ: ಹೊತ್ತಿಕೊಂಡ ಬೆಂಕಿಗೆ 10 ಜನ ಸಜೀವ ದಹನ</strong></p>.<p>ಬೆಳಗಾವಿ, ಫೆ. 10– ಸಂಕೇಶ್ವರ ಬಳಿಯ ಹೆಬ್ಬಾಳ ಸಮೀಪ ರಾಷ್ಟ್ರೀಯ ಹೆದ್ದಾರಿ (ಪುಣೆ–ಬೆಂಗಳೂರು) ನಂ. 4ರಲ್ಲಿ ಮಧ್ಯರಾತ್ರಿ 12.30ರ ಸುಮಾರಿಗೆ ಟೆಂಪೋಟ್ರ್ಯಾಕ್ಸ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಎಂಟು ವಿದ್ಯಾರ್ಥಿಗಳು ಸೇರಿದಂತೆ 10 ಜನರು ಸಜೀವ ದಹನವಾಗಿದ್ದು, ಮೂವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.</p>.<p>ಅಪಘಾತದಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಟೆಂಪೋಟ್ರ್ಯಾಕ್ಸ್, ಲಾರಿ ಹಾಗೂ 8 ವಿದ್ಯಾರ್ಥಿಗಳು, ಒಬ್ಬ ಶಿಕ್ಷಕ, ಟೆಂಪೋಟ್ರ್ಯಾಕ್ಸ್ ಚಾಲಕ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಮ್ಮು, ಫೆ. 10 (ಪಿಟಿಐ)– ಜಮ್ಮು ಮತ್ತು ಕಾಶ್ಮೀರದ ರಾಚೌರಿ ಜಿಲ್ಲೆಯ ಕೊಚತ್ವಾಲ್ ಎಂಬ ಹಳ್ಳಿಯಲ್ಲಿ ನಿನ್ನೆ ರಾತ್ರಿ ಶಸ್ತ್ರಸಜ್ಜಿತ ಉಗ್ರಗಾಮಿಗಳು ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಮೂವರು ಮಹಿಳೆಯರು, ಏಳು ಮಕ್ಕಳು ಸೇರಿದಂತೆ ಹದಿನೈದು ಜನರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p>ನಿನ್ನೆ ಮಧ್ಯರಾತ್ರಿ ಹಳ್ಳಿಗೆ ದಾಳಿ<br>ಯಿಟ್ಟ ಉಗ್ರರು ಮೊದಲು ಮಕ್ಕಳನ್ನು ಹೊಡೆದರು. ನಂತರ ಒಂದೇ ಸಮನೆ ಗುಂಡಿನ ಮಳೆಗರೆದರು. ಇದರಿಂದ ಬಾಕೆರ್ವಾಲ್ ಸಮುದಾಯದ 15 ಜನರು ಮೃತರಾದರು. ತಕ್ಷಣ ಗ್ರಾಮ ರಕ್ಷಣಾ ಸಮಿತಿಯ ಸದಸ್ಯರು ಧಾವಿಸಿ ಪ್ರತಿದಾಳಿ ನಡೆಸಿದರು.</p>.<p><strong>ಅಪಘಾತ: ಹೊತ್ತಿಕೊಂಡ ಬೆಂಕಿಗೆ 10 ಜನ ಸಜೀವ ದಹನ</strong></p>.<p>ಬೆಳಗಾವಿ, ಫೆ. 10– ಸಂಕೇಶ್ವರ ಬಳಿಯ ಹೆಬ್ಬಾಳ ಸಮೀಪ ರಾಷ್ಟ್ರೀಯ ಹೆದ್ದಾರಿ (ಪುಣೆ–ಬೆಂಗಳೂರು) ನಂ. 4ರಲ್ಲಿ ಮಧ್ಯರಾತ್ರಿ 12.30ರ ಸುಮಾರಿಗೆ ಟೆಂಪೋಟ್ರ್ಯಾಕ್ಸ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಎಂಟು ವಿದ್ಯಾರ್ಥಿಗಳು ಸೇರಿದಂತೆ 10 ಜನರು ಸಜೀವ ದಹನವಾಗಿದ್ದು, ಮೂವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.</p>.<p>ಅಪಘಾತದಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಟೆಂಪೋಟ್ರ್ಯಾಕ್ಸ್, ಲಾರಿ ಹಾಗೂ 8 ವಿದ್ಯಾರ್ಥಿಗಳು, ಒಬ್ಬ ಶಿಕ್ಷಕ, ಟೆಂಪೋಟ್ರ್ಯಾಕ್ಸ್ ಚಾಲಕ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>