<p>ಸೋಮವಾರ, 19–02–1951</p><p>ಕಾನಪುರ, ಫೆ. 18– ಕಾಂಗ್ರೆಸ್ಸಿಗರು ಪರಸ್ಪರ ದ್ವೇಷಾಸೂಯೆ ಮತ್ತು ಸಣ್ಣಪುಟ್ಟ ಜಗಳಗಳನ್ನು ತ್ಯಜಿಸಿ, ಕಾಂಗ್ರೆಸ್ ಸಂಸ್ಥೆಯನ್ನು ಅದು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಸಾಧಿಸಿದ್ದಂತಹ ಮಹತ್ತರ ಸ್ಥಾನಕ್ಕೇರಿಸಲು ಒಗ್ಗಟ್ಟಿನಿಂದಲೂ ನಿಸ್ಪೃಹತೆಯಿಂದಲೂ ದುಡಿಯಬೇಕೆಂದು ಮಹಾ ಪ್ರಧಾನಿ ನೆಹರೂರವರು ಕಾನಪುರದ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ತಿಳಿಸಿದರು.</p>.<p>ನೆಹರೂ ಮುಂದುವರಿದು ‘ಸದ್ಯಕ್ಕೆ ದೇಶದಲ್ಲಿ ಕಾಂಗ್ರೆಸ್ಸಿಗೆ ಬದಲಾಗಿ ಆ ಸ್ಥಾನವನ್ನು ವಹಿಸಲು ಶಕ್ತಿಯುಳ್ಳ ಸಂಸ್ಥೆ ಬೇರೊಂದಿಲ್ಲ. ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಆ ಮಹಾತ್ಮನ ಹೆಸರಿಗೆ ಕಳಂಕ ತರದಂತೆ ನಮ್ಮ ಸಂಸ್ಥೆಯನ್ನು ಬೆಳೆಸಬೇಕು’ ಎಂದು ನುಡಿದರು.</p>.<p>‘ಸ್ವಾತಂತ್ರ್ಯ ತಂದ ಕಾಂಗ್ರೆಸ್ಸಿನ ಕೆಲಸವಿನ್ನೂ ಮುಗಿದಿಲ್ಲ. ದೀನದಲಿತರ ಉದ್ಧಾರವೇ ಆ ಕಾರ್ಯ. ಈ ಕೆಲಸ ಸಾಧಿಸಲು ಎಲ್ಲರೂ ಉತ್ಸಾಹಪೂರಿತ ಒಗ್ಗಟ್ಟಿನಿಂದ ದುಡಿಯಬೇಕು. ಗಾಂಧೀಜಿಯವರ ರಚನಾತ್ಮಕ ಕಾರ್ಯಗಳಿಗೆ ಹೆಚ್ಚು ಗಮನವೀಯಬೇಕು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೋಮವಾರ, 19–02–1951</p><p>ಕಾನಪುರ, ಫೆ. 18– ಕಾಂಗ್ರೆಸ್ಸಿಗರು ಪರಸ್ಪರ ದ್ವೇಷಾಸೂಯೆ ಮತ್ತು ಸಣ್ಣಪುಟ್ಟ ಜಗಳಗಳನ್ನು ತ್ಯಜಿಸಿ, ಕಾಂಗ್ರೆಸ್ ಸಂಸ್ಥೆಯನ್ನು ಅದು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಸಾಧಿಸಿದ್ದಂತಹ ಮಹತ್ತರ ಸ್ಥಾನಕ್ಕೇರಿಸಲು ಒಗ್ಗಟ್ಟಿನಿಂದಲೂ ನಿಸ್ಪೃಹತೆಯಿಂದಲೂ ದುಡಿಯಬೇಕೆಂದು ಮಹಾ ಪ್ರಧಾನಿ ನೆಹರೂರವರು ಕಾನಪುರದ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ತಿಳಿಸಿದರು.</p>.<p>ನೆಹರೂ ಮುಂದುವರಿದು ‘ಸದ್ಯಕ್ಕೆ ದೇಶದಲ್ಲಿ ಕಾಂಗ್ರೆಸ್ಸಿಗೆ ಬದಲಾಗಿ ಆ ಸ್ಥಾನವನ್ನು ವಹಿಸಲು ಶಕ್ತಿಯುಳ್ಳ ಸಂಸ್ಥೆ ಬೇರೊಂದಿಲ್ಲ. ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಆ ಮಹಾತ್ಮನ ಹೆಸರಿಗೆ ಕಳಂಕ ತರದಂತೆ ನಮ್ಮ ಸಂಸ್ಥೆಯನ್ನು ಬೆಳೆಸಬೇಕು’ ಎಂದು ನುಡಿದರು.</p>.<p>‘ಸ್ವಾತಂತ್ರ್ಯ ತಂದ ಕಾಂಗ್ರೆಸ್ಸಿನ ಕೆಲಸವಿನ್ನೂ ಮುಗಿದಿಲ್ಲ. ದೀನದಲಿತರ ಉದ್ಧಾರವೇ ಆ ಕಾರ್ಯ. ಈ ಕೆಲಸ ಸಾಧಿಸಲು ಎಲ್ಲರೂ ಉತ್ಸಾಹಪೂರಿತ ಒಗ್ಗಟ್ಟಿನಿಂದ ದುಡಿಯಬೇಕು. ಗಾಂಧೀಜಿಯವರ ರಚನಾತ್ಮಕ ಕಾರ್ಯಗಳಿಗೆ ಹೆಚ್ಚು ಗಮನವೀಯಬೇಕು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>