ಹೈದರಾಬಾದ್, ಆ. 26 (ಪಿಟಿಐ)– ಆಂಧ್ರದಲ್ಲಿ ಆಡಳಿತ ತೆಲುಗುದೇಶಂ ಪಕ್ಷದೊಳಗಿನ ಭಾರಿ ಬಿಕ್ಕಟ್ಟನ್ನು ತಡೆಯುವ ಕೊನೆ ಗಳಿಗೆ ಯತ್ನವಾಗಿ ಮುಖ್ಯಮಂತ್ರಿ ರಾಮರಾವ್ ಅವರ ಪತ್ನಿ ಲಕ್ಷ್ಮಿ ಶಿವಪಾರ್ವತಿ ಅವರು ‘ದುರುದ್ದೇಶವಿಲ್ಲದೆ ತಮ್ಮಿಂದ ನಡೆದ ತಪ್ಪುಗಳಿಗೆ’ ಬಹಿರಂಗ ಕ್ಷಮೆ ಕೇಳಿದರು. ಅಲ್ಲದೆ ರಾಜಕೀಯದಿಂದ ದೂರ ಸರಿದು ತಮ್ಮ ಚಟುವಟಿಕೆಯನ್ನು ಗೃಹ ಕೃತ್ಯಕ್ಕೆ ಸೀಮಿತಗೊಳಿಸುವುದಾಗಿ ಪ್ರಕಟಿಸಿದರು.