<p><strong>ಲೋಕಸಭೆಗೆ ವಿ.ಪಿ. ಸಿಂಗ್ ರಾಜೀನಾಮೆ</strong></p>.<p><strong>ನವದೆಹಲಿ, ಡಿ. 5 (ಪಿಟಿಐ) </strong>ಜನತಾ ದಳದ ನಾಯಕ ವಿಶ್ವನಾಥ ಪ್ರತಾಪ್ ಸಿಂಗ್ ಅವರು ಇಂದು ಲೋಕಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.</p>.<p>ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ‘ರಾಷ್ಟ್ರೀಯ ರಂಗ– ಎಡರಂಗ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವ ಹಂತದಲ್ಲಿರುವ ಕಾರಣ’ ನಿರಾಳವಾಗಿ ರಾಜೀನಾಮೆ<br />ನೀಡುತ್ತಿರುವುದಾಗಿ ಅವರು ತಿಳಿಸಿದರು.</p>.<p>***</p>.<p><strong>ವೀರಪ್ಪನ್ ಷರತ್ತಿಗೆ ಪೊಲೀಸರ ಅಸ್ತು</strong></p>.<p>ಕೊಯಮತ್ತೂರು, ಡಿ. 5 (ಪಿಟಿಐ)– ನರಹಂತಕ ವೀರಪ್ಪನ್ನನ್ನು ಬಂಧಿಸಲು ನಿಯೋಜಿಸಲಾಗಿರುವ ವಿಶೇಷ ಕಾರ್ಯಾಚರಣೆ ಪಡೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ತಮ್ಮ ಚಟುವಟಿಕೆಗಳನ್ನು ನಿಲ್ಲಿಸುವಂತೆ ತಿಳಿಸಲಾಗಿದೆ. ಈ ದಂತಚೋರನ ತಂಡದವರಿಂದ ಅಪಹರಣಕ್ಕೊಳಗಾಗಿರುವ ಡಿಎಸ್ಪಿ ಹಾಗೂ ಅವರ ಸಂಬಂಧಿಗಳ ಪ್ರಾಣರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.</p>.<p>ತಮಿಳುನಾಡಿನ ಜಾಗೃತಿ ಮತ್ತು ಭ್ರಷ್ಟಾಚಾರ ವಿರೋಧಿ ದಳದ ಡಿಎಸ್ಪಿ ಚಿದಂಬರನಾಥ್ ಹಾಗೂ ಅವರ ಇಬ್ಬರು ಸಂಬಂಧಿಗಳನ್ನು ವೀರಪ್ಪನ್ ತಂಡ ಶನಿವಾರ ಕೊಯಮತ್ತೂರು ಜಿಲ್ಲೆಯ ಸಿರಿಮುಗೈನಿಂದ ಅಪಹರಿಸಿದೆ.</p>.<p>ಅಪಹೃತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಅಧಿಕಾರಿಗಳು ತಮ್ಮ ಚಟುವಟಿಕೆಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ<br />ಸಿ.ವಿ. ಶಂಕರ್ ಸುದ್ದಿಗಾರರಿಗೆ ತಿಳಿಸಿದರು.</p>.<p><strong>***</strong></p>.<p><strong>ಕಲ್ಲಿನಿಂದ ಜಜ್ಜಿ ನ್ಯಾಯಾಧೀಶರ ಹತ್ಯೆ</strong></p>.<p>ಪಟ್ನಾ, ಡಿ. 5 (ಯುಎನ್ಐ)– ಮುಜಾಫರ್ ನಗರದ ಖಾಬ್ರಾ ಎಂಬಲ್ಲಿ ರೊಚ್ಚಿಗೆದ್ದ ಗುಂಪೊಂದು ಗೋಪಾಲ್ಗಂಜ್ ನ್ಯಾಯಾಧೀಶ ಜಿ. ಕೃಷ್ಣಯ್ಯ ಅವರನ್ನು ಇಂದು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿತು ಹಾಗೂ ಅವರ ಕಾರನ್ನು ಜಖಂಗೊಳಿಸಿತು.</p>.<p>ಬಿಹಾರ ಪೀಪಲ್ಸ್ ಪಕ್ಷದ ಕಾರ್ಯಕರ್ತರು ನಿನ್ನೆ ಮುಜಾಫರ್ ನಗರದಲ್ಲಿ ಹತ್ಯೆಗೊಳಗಾದ ಪಕ್ಷದ ಐವರು ಕಾರ್ಯಕರ್ತರ ಶವಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದಾಗ ಕೃಷ್ಣಯ್ಯ ಅವರ ಕಾರು ಆ ಮಾರ್ಗವಾಗಿ ಬಂತು. ಮೆರವಣಿಗೆ ನೇತೃತ್ವವನ್ನು ಪಕ್ಷದ ಸ್ಥಾಪಕ ಹಾಗೂ ಶಾಸಕ ಆನಂದ ಮೋಹನ್ ಹಾಗೂ ಅವರ ಪತ್ನಿ ಲವ್ಲಿ ಆನಂದ್ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೋಕಸಭೆಗೆ ವಿ.ಪಿ. ಸಿಂಗ್ ರಾಜೀನಾಮೆ</strong></p>.<p><strong>ನವದೆಹಲಿ, ಡಿ. 5 (ಪಿಟಿಐ) </strong>ಜನತಾ ದಳದ ನಾಯಕ ವಿಶ್ವನಾಥ ಪ್ರತಾಪ್ ಸಿಂಗ್ ಅವರು ಇಂದು ಲೋಕಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.</p>.<p>ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ‘ರಾಷ್ಟ್ರೀಯ ರಂಗ– ಎಡರಂಗ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವ ಹಂತದಲ್ಲಿರುವ ಕಾರಣ’ ನಿರಾಳವಾಗಿ ರಾಜೀನಾಮೆ<br />ನೀಡುತ್ತಿರುವುದಾಗಿ ಅವರು ತಿಳಿಸಿದರು.</p>.<p>***</p>.<p><strong>ವೀರಪ್ಪನ್ ಷರತ್ತಿಗೆ ಪೊಲೀಸರ ಅಸ್ತು</strong></p>.<p>ಕೊಯಮತ್ತೂರು, ಡಿ. 5 (ಪಿಟಿಐ)– ನರಹಂತಕ ವೀರಪ್ಪನ್ನನ್ನು ಬಂಧಿಸಲು ನಿಯೋಜಿಸಲಾಗಿರುವ ವಿಶೇಷ ಕಾರ್ಯಾಚರಣೆ ಪಡೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ತಮ್ಮ ಚಟುವಟಿಕೆಗಳನ್ನು ನಿಲ್ಲಿಸುವಂತೆ ತಿಳಿಸಲಾಗಿದೆ. ಈ ದಂತಚೋರನ ತಂಡದವರಿಂದ ಅಪಹರಣಕ್ಕೊಳಗಾಗಿರುವ ಡಿಎಸ್ಪಿ ಹಾಗೂ ಅವರ ಸಂಬಂಧಿಗಳ ಪ್ರಾಣರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.</p>.<p>ತಮಿಳುನಾಡಿನ ಜಾಗೃತಿ ಮತ್ತು ಭ್ರಷ್ಟಾಚಾರ ವಿರೋಧಿ ದಳದ ಡಿಎಸ್ಪಿ ಚಿದಂಬರನಾಥ್ ಹಾಗೂ ಅವರ ಇಬ್ಬರು ಸಂಬಂಧಿಗಳನ್ನು ವೀರಪ್ಪನ್ ತಂಡ ಶನಿವಾರ ಕೊಯಮತ್ತೂರು ಜಿಲ್ಲೆಯ ಸಿರಿಮುಗೈನಿಂದ ಅಪಹರಿಸಿದೆ.</p>.<p>ಅಪಹೃತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಅಧಿಕಾರಿಗಳು ತಮ್ಮ ಚಟುವಟಿಕೆಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ<br />ಸಿ.ವಿ. ಶಂಕರ್ ಸುದ್ದಿಗಾರರಿಗೆ ತಿಳಿಸಿದರು.</p>.<p><strong>***</strong></p>.<p><strong>ಕಲ್ಲಿನಿಂದ ಜಜ್ಜಿ ನ್ಯಾಯಾಧೀಶರ ಹತ್ಯೆ</strong></p>.<p>ಪಟ್ನಾ, ಡಿ. 5 (ಯುಎನ್ಐ)– ಮುಜಾಫರ್ ನಗರದ ಖಾಬ್ರಾ ಎಂಬಲ್ಲಿ ರೊಚ್ಚಿಗೆದ್ದ ಗುಂಪೊಂದು ಗೋಪಾಲ್ಗಂಜ್ ನ್ಯಾಯಾಧೀಶ ಜಿ. ಕೃಷ್ಣಯ್ಯ ಅವರನ್ನು ಇಂದು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿತು ಹಾಗೂ ಅವರ ಕಾರನ್ನು ಜಖಂಗೊಳಿಸಿತು.</p>.<p>ಬಿಹಾರ ಪೀಪಲ್ಸ್ ಪಕ್ಷದ ಕಾರ್ಯಕರ್ತರು ನಿನ್ನೆ ಮುಜಾಫರ್ ನಗರದಲ್ಲಿ ಹತ್ಯೆಗೊಳಗಾದ ಪಕ್ಷದ ಐವರು ಕಾರ್ಯಕರ್ತರ ಶವಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದಾಗ ಕೃಷ್ಣಯ್ಯ ಅವರ ಕಾರು ಆ ಮಾರ್ಗವಾಗಿ ಬಂತು. ಮೆರವಣಿಗೆ ನೇತೃತ್ವವನ್ನು ಪಕ್ಷದ ಸ್ಥಾಪಕ ಹಾಗೂ ಶಾಸಕ ಆನಂದ ಮೋಹನ್ ಹಾಗೂ ಅವರ ಪತ್ನಿ ಲವ್ಲಿ ಆನಂದ್ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>