<p id="thickbox_headline"><strong>ಸ್ಪೀಕರ್ ಸ್ಥಾನ: ಸಂಗ್ಮಾ– ಬಾಲಯೋಗಿ ಸ್ಪರ್ಧೆ</strong></p>.<p><strong>ನವದೆಹಲಿ, ಮಾರ್ಚ್ 23– </strong>ಸಂಯುಕ್ತ ರಂಗದಿಂದ ಹೊರಬಂದ ತೆಲುಗು ದೇಶಂ ಪಕ್ಷ ಆಳುವ ಬಿಜೆಪಿಯ ಜತೆ ಕೈಗೂಡಿಸಿ ತನ್ನ ಸದಸ್ಯ ಜಿ.ಎಂ.ಸಿ.ಬಾಲಯೋಗಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಳುವ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನಾಗಿ ಇಂದು ನಿಲ್ಲಿಸಿತು.</p>.<p>ಇದರಿಂದ ಹನ್ನೆರಡನೇ ಲೋಕಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಈಗ ಚುನಾವಣೆ ಅನಿವಾರ್ಯವಾಗಿದೆ.</p>.<p>ಕಾಂಗ್ರೆಸ್–ಸಂಯುಕ್ತ ರಂಗ ಅಭ್ಯರ್ಥಿಯಾಗಿ ಕಾಂಗ್ರೆಸ್ನ ಪಿ.ಎ.ಸಂಗ್ಮಾ ಅವರು ಸಹಾ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ಸ್ಪೀಕರ್ ಸ್ಥಾನದ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಫಲಿತಾಂಶವು ವಿಶ್ವಾಸ ಮತದ ಭವಿಷ್ಯದ ದಿಕ್ಸೂಚಿಯಾಗಲಿದೆ.</p>.<p><strong>ಕಾಂಗ್ರೆಸ್ಗೆ ರಂಗ ಬೆಂಬಲ ನಿರ್ಧಾರ: ನಾಯ್ಡು ಟೀಕೆ</strong></p>.<p><strong>ನವದೆಹಲಿ, ಮಾರ್ಚ್ 23– </strong>ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಸಂಯುಕ್ತ ರಂಗದ ತೀರ್ಮಾನವು ಪ್ರಮುಖ ವಿಷಯಗಳ ಬಗೆಗೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಬೇಕೆನ್ನುವ ಮೂಲ ಬೇರನ್ನೇ ಕಡಿದು ಹಾಕಿದಂತಾಗಿದೆ ಎಂದು ತೆಲುಗು ದೇಶಂ ನಾಯಕ ಎನ್.ಚಂದ್ರಬಾಬು ನಾಯ್ಡು ಅವರು ರಂಗದ ತೀರ್ಮಾನವನ್ನು ಕಟುವಾಗಿ ಟೀಕಿಸಿದ್ದಾರೆ.</p>.<p>ರಂಗದ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ಬರೆದಿರುವ ಪತ್ರವನ್ನು ಇಲ್ಲಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ನಾಯ್ಡು ಅವರು, ರಂಗದ ಸಂಚಾಲಕರಾಗಿರುವ ತಮಗೆ ಗೊತ್ತಿಲ್ಲದಂತೆ ಮತ್ತು ತಮ್ಮನ್ನು ಕಡೆಗಣಿಸಿ ತೆಗೆದುಕೊಂಡಿರುವ ಈ ಏಕಪಕ್ಷೀಯ ನಿರ್ಧಾರ ತತ್ವರಹಿತವಾದುದು ಎಂದು ಕಟುವಾಗಿ ಟೀಕಿಸಿದ್ದಾರೆ. ತಾವು ತಮ್ಮ ಅಭಿಪ್ರಾಯ ಮತ್ತು ಭಾವನೆಯನ್ನು ಸ್ಪಷ್ಟವಾಗಿ ತಿಳಿಸಿದ್ದರೂ ನಿನ್ನೆ ಸಂಜೆ ರಂಗದ ಉನ್ನತ ಸಮಿತಿ ಕೈಗೊಂಡ ತೀರ್ಮಾನ ಸರಿಯಾದುದಲ್ಲ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ಸ್ಪೀಕರ್ ಸ್ಥಾನ: ಸಂಗ್ಮಾ– ಬಾಲಯೋಗಿ ಸ್ಪರ್ಧೆ</strong></p>.<p><strong>ನವದೆಹಲಿ, ಮಾರ್ಚ್ 23– </strong>ಸಂಯುಕ್ತ ರಂಗದಿಂದ ಹೊರಬಂದ ತೆಲುಗು ದೇಶಂ ಪಕ್ಷ ಆಳುವ ಬಿಜೆಪಿಯ ಜತೆ ಕೈಗೂಡಿಸಿ ತನ್ನ ಸದಸ್ಯ ಜಿ.ಎಂ.ಸಿ.ಬಾಲಯೋಗಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಳುವ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನಾಗಿ ಇಂದು ನಿಲ್ಲಿಸಿತು.</p>.<p>ಇದರಿಂದ ಹನ್ನೆರಡನೇ ಲೋಕಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಈಗ ಚುನಾವಣೆ ಅನಿವಾರ್ಯವಾಗಿದೆ.</p>.<p>ಕಾಂಗ್ರೆಸ್–ಸಂಯುಕ್ತ ರಂಗ ಅಭ್ಯರ್ಥಿಯಾಗಿ ಕಾಂಗ್ರೆಸ್ನ ಪಿ.ಎ.ಸಂಗ್ಮಾ ಅವರು ಸಹಾ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ಸ್ಪೀಕರ್ ಸ್ಥಾನದ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಫಲಿತಾಂಶವು ವಿಶ್ವಾಸ ಮತದ ಭವಿಷ್ಯದ ದಿಕ್ಸೂಚಿಯಾಗಲಿದೆ.</p>.<p><strong>ಕಾಂಗ್ರೆಸ್ಗೆ ರಂಗ ಬೆಂಬಲ ನಿರ್ಧಾರ: ನಾಯ್ಡು ಟೀಕೆ</strong></p>.<p><strong>ನವದೆಹಲಿ, ಮಾರ್ಚ್ 23– </strong>ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಸಂಯುಕ್ತ ರಂಗದ ತೀರ್ಮಾನವು ಪ್ರಮುಖ ವಿಷಯಗಳ ಬಗೆಗೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಬೇಕೆನ್ನುವ ಮೂಲ ಬೇರನ್ನೇ ಕಡಿದು ಹಾಕಿದಂತಾಗಿದೆ ಎಂದು ತೆಲುಗು ದೇಶಂ ನಾಯಕ ಎನ್.ಚಂದ್ರಬಾಬು ನಾಯ್ಡು ಅವರು ರಂಗದ ತೀರ್ಮಾನವನ್ನು ಕಟುವಾಗಿ ಟೀಕಿಸಿದ್ದಾರೆ.</p>.<p>ರಂಗದ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ಬರೆದಿರುವ ಪತ್ರವನ್ನು ಇಲ್ಲಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ನಾಯ್ಡು ಅವರು, ರಂಗದ ಸಂಚಾಲಕರಾಗಿರುವ ತಮಗೆ ಗೊತ್ತಿಲ್ಲದಂತೆ ಮತ್ತು ತಮ್ಮನ್ನು ಕಡೆಗಣಿಸಿ ತೆಗೆದುಕೊಂಡಿರುವ ಈ ಏಕಪಕ್ಷೀಯ ನಿರ್ಧಾರ ತತ್ವರಹಿತವಾದುದು ಎಂದು ಕಟುವಾಗಿ ಟೀಕಿಸಿದ್ದಾರೆ. ತಾವು ತಮ್ಮ ಅಭಿಪ್ರಾಯ ಮತ್ತು ಭಾವನೆಯನ್ನು ಸ್ಪಷ್ಟವಾಗಿ ತಿಳಿಸಿದ್ದರೂ ನಿನ್ನೆ ಸಂಜೆ ರಂಗದ ಉನ್ನತ ಸಮಿತಿ ಕೈಗೊಂಡ ತೀರ್ಮಾನ ಸರಿಯಾದುದಲ್ಲ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>