ಜೈಪುರ, ನ. 28–‘ಭಾರತ ಉಪ ಖಂಡದಲ್ಲಿನ ಈಗಿನ ಬಿಕ್ಕಟ್ಟಿನ ಪರಿಸ್ಥಿತಿ ವಿಷಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಯಲ್ಲಿ ಪ್ರಸ್ತಾಪಿಸುವುದರಿಂದ ಆ ಪರಿಸ್ಥಿತಿ ಸಡಿಲಗೊಳ್ಳುವುದಕ್ಕೆ ಸಹಾಯಕವಾಗುವುದಿಲ್ಲ. ಅಲ್ಲದೆ ಪ್ರಸಕ್ತ ಪರಿಸ್ಥಿತಿ ಮೇಲೆ ಯಾವ ವಾಸ್ತವಿಕ ಪರಿಣಾಮವೂ ಉಂಟಾಗದು’ ಎಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಹೇಳಿದರು.