<p><strong>ಒಡಕು ಎದುರಿಸಲು ಮುಖ್ಯಮಂತ್ರಿಯ ಸದ್ದಿಲ್ಲದ ಸಿದ್ಧತೆ</strong></p>.<p><strong>ಬೆಂಗಳೂರು, ಡಿ. 3–</strong> ಎರಡು ಕಾಂಗ್ರೆಸ್ಗಾಗಿರುವ ಘಟನೆಯಿಂದಾಗಬಹುದಾದ ಪರಿಣಾಮವನ್ನೆದುರಿಸಲು ಗದ್ದಲವಿಲ್ಲದೆ ಸಿದ್ಧರಾಗುತ್ತಿರುವ ರಾಜ್ಯದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ವಿಧಾನಸಭೆಯ ಇಬ್ಬರು ಕಾಂಗ್ರೆಸ್ಸೇತರ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆಂದು ಇಂದು ಇಲ್ಲಿ ಪ್ರಕಟಿಸಿದರು.</p>.<p>ಬಿಜಾಪುರ ಜಿಲ್ಲೆಯ ಬದಾಮಿ ಕ್ಷೇತ್ರದಿಂದ ಆಯ್ಕೆಯಾಗಿರುವ ಪಕ್ಷೇತರ ಸದಸ್ಯ ಶ್ರೀ ಕೆ.ಎಂ. ಪಟ್ಟಣಶೆಟ್ಟಿ ಹಾಗೂ ರಾಯಚೂರಿನ ದೇವದುರ್ಗ ಕ್ಷೇತ್ರದ ಪಕ್ಷೇತರ ಸದಸ್ಯ ಶ್ರೀ ಸದಾಶಿವಪ್ಪ ಪಾಟೀಲ್ ಅವರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.</p>.<p>ಇದರಿಂದಾಗಿ 216 ಮಂದಿ ಸದಸ್ಯರಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ 133ರಿಂದ 135ಕ್ಕೇರಿದಂತಾಯಿತು.</p>.<p><strong>ಕೋರ್ಟು ಶುಲ್ಕ ವಿನಾಯಿತಿ- ಗೇಣಿದಾರರಿಗೆ ಸರ್ಕಾರದ ಹೊಸ ವರ್ಷದ ಉಡುಗೊರೆ</strong></p>.<p><strong>ಬೆಂಗಳೂರು, ಡಿ. 3–</strong> ಮುಂದಿನ ಜನವರಿ ಒಂದರಿಂದ ಯಾವ ಗೇಣಿದಾರನೂ ಭೂ ಪಂಚಾಯಿತಿ ಮುಂದೆ ಅಥವಾ ನ್ಯಾಯಾಲಯದ ಮುಂದೆ ಹೋಗಲು ಕೋರ್ಟು ಸ್ಟಾಂಪ್ ಶುಲ್ಕವನ್ನುಪಾವತಿ ಮಾಡಬೇಕಾಗಿಲ್ಲ.</p>.<p>ಇಂದು ನಡೆದ ಸಚಿವ ಸಂಪುಟದ ಸಭೆ, ಸ್ಟಾಂಪ್ ಶುಲ್ಕ ಪಾವತಿಯನ್ನು ವಿನಾಯ್ತಿಗೊಳಿಸಲು ನಿರ್ಧರಿಸಿತೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.</p>.<p><strong>ಕೋಮು ಗಲಭೆಗಳನ್ನು ಹತ್ತಿಕ್ಕಲು ಶಕ್ತಿಮೀರಿ ಯತ್ನ: ಚವಾಣ್ ಭರವಸೆ</strong></p>.<p><strong>ನವದೆಹಲಿ, ಡಿ. 3–</strong> ಕೋಮು ಗಲಭೆಗಳನ್ನು ಮೂಲೋತ್ಪಾಟನೆಗೊಳಿಸಲು ಸರ್ಕಾರ ಶಕ್ತಿ ಮೀರಿ ಸಕಲ ಕ್ರಮಗಳನ್ನು ಕೈಗೊಳ್ಳುವುದೆಂದು ಕೇಂದ್ರ ಗೃಹ ಸಚಿವ ವೈ.ಬಿ. ಚವಾಣ್ ಅವರು ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು.</p>.<p>ದೇಶದಲ್ಲಿನ ಕೋಮು ಪರಿಸ್ಥಿತಿ ಕುರಿತು ಇಂದು ಸುದೀರ್ಘ ಹೇಳಿಕೆ ನೀಡಿ ಚವಾಣರು ಕೊನೆಯಲ್ಲಿ ಈ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಒಡಕು ಎದುರಿಸಲು ಮುಖ್ಯಮಂತ್ರಿಯ ಸದ್ದಿಲ್ಲದ ಸಿದ್ಧತೆ</strong></p>.<p><strong>ಬೆಂಗಳೂರು, ಡಿ. 3–</strong> ಎರಡು ಕಾಂಗ್ರೆಸ್ಗಾಗಿರುವ ಘಟನೆಯಿಂದಾಗಬಹುದಾದ ಪರಿಣಾಮವನ್ನೆದುರಿಸಲು ಗದ್ದಲವಿಲ್ಲದೆ ಸಿದ್ಧರಾಗುತ್ತಿರುವ ರಾಜ್ಯದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ವಿಧಾನಸಭೆಯ ಇಬ್ಬರು ಕಾಂಗ್ರೆಸ್ಸೇತರ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆಂದು ಇಂದು ಇಲ್ಲಿ ಪ್ರಕಟಿಸಿದರು.</p>.<p>ಬಿಜಾಪುರ ಜಿಲ್ಲೆಯ ಬದಾಮಿ ಕ್ಷೇತ್ರದಿಂದ ಆಯ್ಕೆಯಾಗಿರುವ ಪಕ್ಷೇತರ ಸದಸ್ಯ ಶ್ರೀ ಕೆ.ಎಂ. ಪಟ್ಟಣಶೆಟ್ಟಿ ಹಾಗೂ ರಾಯಚೂರಿನ ದೇವದುರ್ಗ ಕ್ಷೇತ್ರದ ಪಕ್ಷೇತರ ಸದಸ್ಯ ಶ್ರೀ ಸದಾಶಿವಪ್ಪ ಪಾಟೀಲ್ ಅವರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.</p>.<p>ಇದರಿಂದಾಗಿ 216 ಮಂದಿ ಸದಸ್ಯರಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ 133ರಿಂದ 135ಕ್ಕೇರಿದಂತಾಯಿತು.</p>.<p><strong>ಕೋರ್ಟು ಶುಲ್ಕ ವಿನಾಯಿತಿ- ಗೇಣಿದಾರರಿಗೆ ಸರ್ಕಾರದ ಹೊಸ ವರ್ಷದ ಉಡುಗೊರೆ</strong></p>.<p><strong>ಬೆಂಗಳೂರು, ಡಿ. 3–</strong> ಮುಂದಿನ ಜನವರಿ ಒಂದರಿಂದ ಯಾವ ಗೇಣಿದಾರನೂ ಭೂ ಪಂಚಾಯಿತಿ ಮುಂದೆ ಅಥವಾ ನ್ಯಾಯಾಲಯದ ಮುಂದೆ ಹೋಗಲು ಕೋರ್ಟು ಸ್ಟಾಂಪ್ ಶುಲ್ಕವನ್ನುಪಾವತಿ ಮಾಡಬೇಕಾಗಿಲ್ಲ.</p>.<p>ಇಂದು ನಡೆದ ಸಚಿವ ಸಂಪುಟದ ಸಭೆ, ಸ್ಟಾಂಪ್ ಶುಲ್ಕ ಪಾವತಿಯನ್ನು ವಿನಾಯ್ತಿಗೊಳಿಸಲು ನಿರ್ಧರಿಸಿತೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.</p>.<p><strong>ಕೋಮು ಗಲಭೆಗಳನ್ನು ಹತ್ತಿಕ್ಕಲು ಶಕ್ತಿಮೀರಿ ಯತ್ನ: ಚವಾಣ್ ಭರವಸೆ</strong></p>.<p><strong>ನವದೆಹಲಿ, ಡಿ. 3–</strong> ಕೋಮು ಗಲಭೆಗಳನ್ನು ಮೂಲೋತ್ಪಾಟನೆಗೊಳಿಸಲು ಸರ್ಕಾರ ಶಕ್ತಿ ಮೀರಿ ಸಕಲ ಕ್ರಮಗಳನ್ನು ಕೈಗೊಳ್ಳುವುದೆಂದು ಕೇಂದ್ರ ಗೃಹ ಸಚಿವ ವೈ.ಬಿ. ಚವಾಣ್ ಅವರು ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು.</p>.<p>ದೇಶದಲ್ಲಿನ ಕೋಮು ಪರಿಸ್ಥಿತಿ ಕುರಿತು ಇಂದು ಸುದೀರ್ಘ ಹೇಳಿಕೆ ನೀಡಿ ಚವಾಣರು ಕೊನೆಯಲ್ಲಿ ಈ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>