ನವದೆಹಲಿ, ಮಾ.31– ಇನ್ನಾರು ತಿಂಗಳಿನಿಂದ ಒಂದು ವರ್ಷದೊಳಗೆ ರಾಜ್ಯದಲ್ಲಿ ರೈತರ ಜಮೀನು ಹಕ್ಕುಗಳ ದಾಖಲೆ ಕಾರ್ಯ ಪೂರ್ಣ, ಪಟ್ಟಾ ಹಾಗೂ ಹಾಲಿ ಇರುವ ಸರಾಠಿ ಜಮೀನು ಹಂಚಿಕೆ ಹಾಗೂ ಭೂ ಸ್ವಾಧೀನ ಪ್ರಕರಣಗಳನ್ನು ತ್ವರಿತಗೊಳಿಸುವ ಭಾರಿ ಉದ್ದೇಶಗಳಿಂದ ಕಂದಾಯ ಸಚಿವ ಎನ್. ಹುಚ್ಚ ಮಾಸ್ತಿಗೌಡ ಅವರು ತಮ್ಮ ಕಾರ್ಯವನ್ನು ಆರಂಭಿಸಿದ್ದಾರೆ. ಸರ್ಕಾರದ ಬಳಿ ಇರುವ ಜಮೀನನ್ನು ಭೂ ಹೀನರಿಗೆ ಹಂಚಲು ಖಾಸಗಿ ಸದಸ್ಯರನ್ನೊ ಳಗೊಂಡ ಭೂ ಹಂಚಿಕೆ ಸಮಿತಿಗಳನ್ನು ಮತ್ತೆ ಅಸ್ತಿತ್ವಕ್ಕೆ ಸರ್ಕಾರ ತರಲಿದೆ.