ಬೆಂಗಳೂರು, ಮಾ. 20– ಬಿಜಾಪುರ ಮತ್ತು ಕುಲ್ಬುರ್ಗಿ ಜಿಲ್ಲಾ ಸಹಕಾರಿ ಬ್ಯಾಂಕುಗಳ ಅಧಿಕಾರ ಚಲಾವಣೆ ಮೇಲೆ, ಹತೋಟಿ ಪಡೆದುಕೊಂಡು ಸರ್ಕಾರ ಹೊರಡಿಸಿದ ಆದೇಶಗಳಲ್ಲಿ ‘ರಾಜಕೀಯ ದುರುದ್ದೇಶ’ ಕಂಡ ವಿರೋಧ ಪಕ್ಷಗಳು ಇಂದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಈ ಸಂಬಂಧದಲ್ಲಿ ಆದೇಶ ಮಂಡಿಸಬಯಸಿದ ಸರ್ಕಾರದ ಮೇಲೆ ಬಹುತೇಕ ಮಟ್ಟಿಗೆ ಯಶಸ್ವೀ ಹೋರಾಟ ನಡೆಸಿದುವು.