<p id="thickbox_headline"><strong>ಆದೇಶ ಮಂಡನೆ ತಡೆಗೆ ಉಭಯ ಸದನಗಳಲ್ಲೂ ಯಶಸ್ವೀ ಹೋರಾಟ</strong></p>.<p><strong>ಬೆಂಗಳೂರು, ಮಾ. 20–</strong> ಬಿಜಾಪುರ ಮತ್ತು ಕುಲ್ಬುರ್ಗಿ ಜಿಲ್ಲಾ ಸಹಕಾರಿ ಬ್ಯಾಂಕುಗಳ ಅಧಿಕಾರ ಚಲಾವಣೆ ಮೇಲೆ, ಹತೋಟಿ ಪಡೆದುಕೊಂಡು ಸರ್ಕಾರ ಹೊರಡಿಸಿದ ಆದೇಶಗಳಲ್ಲಿ ‘ರಾಜಕೀಯ ದುರುದ್ದೇಶ’ ಕಂಡ ವಿರೋಧ ಪಕ್ಷಗಳು ಇಂದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಈ ಸಂಬಂಧದಲ್ಲಿ ಆದೇಶ ಮಂಡಿಸಬಯಸಿದ ಸರ್ಕಾರದ ಮೇಲೆ ಬಹುತೇಕ ಮಟ್ಟಿಗೆ ಯಶಸ್ವೀ ಹೋರಾಟ ನಡೆಸಿದುವು.</p>.<p>ಸುಮಾರು ಒಂದೂ ಮುಕ್ಕಾಲು ಗಂಟೆ ಕಾಲ ಗೊಂದಲ, ಚಕಮಕಿ ತಂದ ವಿಧಾನಸಭೆ, ಒಂದು ಗಂಟೆ ಕಾಲ ಮುಂದಕ್ಕೆ ಹೋದ ಅವಧಿಯಲ್ಲಿ ಆದ ಒಪ್ಪಂದದ ಪ್ರಕಾರ ಸೂಚನೆಯ ಮಂಡನೆಯನ್ನು ಮುಂದಕ್ಕೆ ಹಾಕಲು ಸರ್ಕಾರ ಒಪ್ಪಿಕೊಂಡಿತು. </p>.<p>ವಿಧಾನಪರಿಷತ್ತಿನಲ್ಲಿ ಇನ್ನೊಂದು ರೂಪಕ್ಕೆ ತಿರುಗಿದ ಈ ಪ್ರಕರಣದಲ್ಲಿ ಗೊಂದಲದ ನಡುವೆ ಸಹಕಾರ ಸಚಿವರಿಂದ ಸೂಚನೆಯ ಮಂಡನೆ ಆಗಿದೆಯೇ ಇಲ್ಲವೇ ಎಂಬುದೇ ವಿವಾದವಾಗಿ ಬೆಳೆದಾಗ ನಾಳೆ ದಾಖಲೆಗಳನ್ನು ತರಿಸಿ ನೋಡಿ ರೂಲಿಂಗ್ ನೀಡುವುದಾಗಿ ಉಪ ಸಭಾಪತಿಯವರು ಸಭೆಯನ್ನು ಮುಂದಕ್ಕೆ ಹಾಕಿದರು.</p>.<p><strong>ಮಂಚನಬೆಲೆ ಯೋಜನೆಗೆ ಕೇಂದ್ರದ ಅಸ್ತು</strong></p>.<p><strong>ಬೆಂಗಳೂರು, ಮಾ. 20–</strong> ಮಂಚನಬೆಲೆ ಯೋಜನೆಗೆ ಕೇಂದ್ರದ ಅನುಮತಿ ದೊರೆತಿದೆಯೆಂದು ಭಾರಿ ನೀರಾವರಿ ರಾಜ್ಯ ಸಚಿವ ಶ್ರೀ ಎಚ್.ಎನ್. ನಂಜೇಗೌಡ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿ, ಐದನೇ ಪಂಚವಾರ್ಷಿಕ ಯೋಜನೆ ಅಂತ್ಯದೊಳಗಾಗಿ ಅದನ್ನು ಪೂರ್ಣಗೊಳಿಸಲು ಉದ್ದೇಶಿಸ ಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ಆದೇಶ ಮಂಡನೆ ತಡೆಗೆ ಉಭಯ ಸದನಗಳಲ್ಲೂ ಯಶಸ್ವೀ ಹೋರಾಟ</strong></p>.<p><strong>ಬೆಂಗಳೂರು, ಮಾ. 20–</strong> ಬಿಜಾಪುರ ಮತ್ತು ಕುಲ್ಬುರ್ಗಿ ಜಿಲ್ಲಾ ಸಹಕಾರಿ ಬ್ಯಾಂಕುಗಳ ಅಧಿಕಾರ ಚಲಾವಣೆ ಮೇಲೆ, ಹತೋಟಿ ಪಡೆದುಕೊಂಡು ಸರ್ಕಾರ ಹೊರಡಿಸಿದ ಆದೇಶಗಳಲ್ಲಿ ‘ರಾಜಕೀಯ ದುರುದ್ದೇಶ’ ಕಂಡ ವಿರೋಧ ಪಕ್ಷಗಳು ಇಂದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಈ ಸಂಬಂಧದಲ್ಲಿ ಆದೇಶ ಮಂಡಿಸಬಯಸಿದ ಸರ್ಕಾರದ ಮೇಲೆ ಬಹುತೇಕ ಮಟ್ಟಿಗೆ ಯಶಸ್ವೀ ಹೋರಾಟ ನಡೆಸಿದುವು.</p>.<p>ಸುಮಾರು ಒಂದೂ ಮುಕ್ಕಾಲು ಗಂಟೆ ಕಾಲ ಗೊಂದಲ, ಚಕಮಕಿ ತಂದ ವಿಧಾನಸಭೆ, ಒಂದು ಗಂಟೆ ಕಾಲ ಮುಂದಕ್ಕೆ ಹೋದ ಅವಧಿಯಲ್ಲಿ ಆದ ಒಪ್ಪಂದದ ಪ್ರಕಾರ ಸೂಚನೆಯ ಮಂಡನೆಯನ್ನು ಮುಂದಕ್ಕೆ ಹಾಕಲು ಸರ್ಕಾರ ಒಪ್ಪಿಕೊಂಡಿತು. </p>.<p>ವಿಧಾನಪರಿಷತ್ತಿನಲ್ಲಿ ಇನ್ನೊಂದು ರೂಪಕ್ಕೆ ತಿರುಗಿದ ಈ ಪ್ರಕರಣದಲ್ಲಿ ಗೊಂದಲದ ನಡುವೆ ಸಹಕಾರ ಸಚಿವರಿಂದ ಸೂಚನೆಯ ಮಂಡನೆ ಆಗಿದೆಯೇ ಇಲ್ಲವೇ ಎಂಬುದೇ ವಿವಾದವಾಗಿ ಬೆಳೆದಾಗ ನಾಳೆ ದಾಖಲೆಗಳನ್ನು ತರಿಸಿ ನೋಡಿ ರೂಲಿಂಗ್ ನೀಡುವುದಾಗಿ ಉಪ ಸಭಾಪತಿಯವರು ಸಭೆಯನ್ನು ಮುಂದಕ್ಕೆ ಹಾಕಿದರು.</p>.<p><strong>ಮಂಚನಬೆಲೆ ಯೋಜನೆಗೆ ಕೇಂದ್ರದ ಅಸ್ತು</strong></p>.<p><strong>ಬೆಂಗಳೂರು, ಮಾ. 20–</strong> ಮಂಚನಬೆಲೆ ಯೋಜನೆಗೆ ಕೇಂದ್ರದ ಅನುಮತಿ ದೊರೆತಿದೆಯೆಂದು ಭಾರಿ ನೀರಾವರಿ ರಾಜ್ಯ ಸಚಿವ ಶ್ರೀ ಎಚ್.ಎನ್. ನಂಜೇಗೌಡ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿ, ಐದನೇ ಪಂಚವಾರ್ಷಿಕ ಯೋಜನೆ ಅಂತ್ಯದೊಳಗಾಗಿ ಅದನ್ನು ಪೂರ್ಣಗೊಳಿಸಲು ಉದ್ದೇಶಿಸ ಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>