ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಬುಧವಾರ, 21 ಮಾರ್ಚ್‌ 1973

Last Updated 20 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಆದೇಶ ಮಂಡನೆ ತಡೆಗೆ ಉಭಯ ಸದನಗಳಲ್ಲೂ ಯಶಸ್ವೀ ಹೋರಾಟ

ಬೆಂಗಳೂರು, ಮಾ. 20– ಬಿಜಾಪುರ ಮತ್ತು ಕುಲ್ಬುರ್ಗಿ ಜಿಲ್ಲಾ ಸಹಕಾರಿ ಬ್ಯಾಂಕುಗಳ ಅಧಿಕಾರ ಚಲಾವಣೆ ಮೇಲೆ, ಹತೋಟಿ ಪಡೆದುಕೊಂಡು ಸರ್ಕಾರ ಹೊರಡಿಸಿದ ಆದೇಶಗಳಲ್ಲಿ ‘ರಾಜಕೀಯ ದುರುದ್ದೇಶ’ ಕಂಡ ವಿರೋಧ ಪಕ್ಷಗಳು ಇಂದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಈ ಸಂಬಂಧದಲ್ಲಿ ಆದೇಶ ಮಂಡಿಸಬಯಸಿದ ಸರ್ಕಾರದ ಮೇಲೆ ಬಹುತೇಕ ಮಟ್ಟಿಗೆ ಯಶಸ್ವೀ ಹೋರಾಟ ನಡೆಸಿದುವು.

ಸುಮಾರು ಒಂದೂ ಮುಕ್ಕಾಲು ಗಂಟೆ ಕಾಲ ಗೊಂದಲ, ಚಕಮಕಿ ತಂದ ವಿಧಾನಸಭೆ, ಒಂದು ಗಂಟೆ ಕಾಲ ಮುಂದಕ್ಕೆ ಹೋದ ಅವಧಿಯಲ್ಲಿ ಆದ ಒಪ್ಪಂದದ ಪ್ರಕಾರ ಸೂಚನೆಯ ಮಂಡನೆಯನ್ನು ಮುಂದಕ್ಕೆ ಹಾಕಲು ಸರ್ಕಾರ ಒಪ್ಪಿಕೊಂಡಿತು.

ವಿಧಾನಪರಿಷತ್ತಿನಲ್ಲಿ ಇನ್ನೊಂದು ರೂಪಕ್ಕೆ ತಿರುಗಿದ ಈ ಪ್ರಕರಣದಲ್ಲಿ ಗೊಂದಲದ ನಡುವೆ ಸಹಕಾರ ಸಚಿವರಿಂದ ಸೂಚನೆಯ ಮಂಡನೆ ಆಗಿದೆಯೇ ಇಲ್ಲವೇ ಎಂಬುದೇ ವಿವಾದವಾಗಿ ಬೆಳೆದಾಗ ನಾಳೆ ದಾಖಲೆಗಳನ್ನು ತರಿಸಿ ನೋಡಿ ರೂಲಿಂಗ್‌ ನೀಡುವುದಾಗಿ ಉಪ ಸಭಾಪತಿಯವರು ಸಭೆಯನ್ನು ಮುಂದಕ್ಕೆ ಹಾಕಿದರು.

ಮಂಚನಬೆಲೆ ಯೋಜನೆಗೆ ಕೇಂದ್ರದ ಅಸ್ತು

ಬೆಂಗಳೂರು, ಮಾ. 20– ಮಂಚನಬೆಲೆ ಯೋಜನೆಗೆ ಕೇಂದ್ರದ ಅನುಮತಿ ದೊರೆತಿದೆಯೆಂದು ಭಾರಿ ನೀರಾವರಿ ರಾಜ್ಯ ಸಚಿವ ಶ್ರೀ ಎಚ್‌.ಎನ್‌. ನಂಜೇಗೌಡ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿ, ಐದನೇ ಪಂಚವಾರ್ಷಿಕ ಯೋಜನೆ ಅಂತ್ಯದೊಳಗಾಗಿ ಅದನ್ನು ಪೂರ್ಣಗೊಳಿಸಲು ಉದ್ದೇಶಿಸ ಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT