<p id="thickbox_headline"><strong>ರಾಷ್ಟ್ರದಾದ್ಯಂತ ಧಾನ್ಯದ ಸಗಟು ಪೇಟೆ ಬಂದ್; ಹರತಾಳ ‘ಯಶಸ್ವಿ’</strong></p>.<p><strong>ನವದೆಹಲಿ, ಮಾರ್ಚ್ 21– </strong>ಆಹಾರ ಧಾನ್ಯಗಳ ಸಗಟು ವ್ಯಾಪಾರವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಪ್ರತಿಭಟಿಸಿ ರಾಷ್ಟ್ರದಾದ್ಯಂತ ಆಹಾರಧಾನ್ಯ ಸಗಟು ಪೇಟೆಗಳು ಇಂದು ಒಂದು ದಿನದ ‘ಹರತಾಳ’ ಆಚರಿಸಿದವು.</p>.<p>ಎಲ್ಲ ರಾಜ್ಯಗಳಲ್ಲಿಯೂ ‘ಹರತಾಳ’ ಪೂರ್ಣವಾಗಿತ್ತೆಂದು ಅದಕ್ಕೆ ಕರೆ ಕೊಟ್ಟಿದ್ದ ಅಖಿಲ ಭಾರತ ಆಹಾರಧಾನ್ಯ ವ್ಯಾಪಾರಸ್ಥರ ಸಂಘಗಳ ಫೆಡರೇಷನ್ ಹೇಳಿದೆ.</p>.<p>ರಾಷ್ಟ್ರದ ಅನೇಕ ಕಡೆ ಭಾಗಶಃ ಸಗಟು ವ್ಯಾಪಾರಸ್ಥರು, ಚಿಲ್ಲರೆ ವ್ಯಾಪಾರಸ್ಥರು ಹಾಗೂ ಸಂಬಂಧಪಟ್ಟ ವಸ್ತುಗಳ ವಹಿವಾಟುಗಳವರು ಸಹ ಹರತಾಳಕ್ಕೆ ಸಹಾನುಭೂತಿ ವ್ಯಕ್ತಪಡಿಸಲು ತಮ್ಮ ಅಂಗಡಿಗಳನ್ನು ಮುಚ್ಚಿದ್ದರೆಂದು ಇಲ್ಲಿಗೆ ವರದಿ ಬಂದಿದೆ.</p>.<p><strong>ವಿದ್ಯಾರ್ಥಿಗಳಿಗೆ ಬರದ ಬೇಗೆಯ ಪರಿಚಯ</strong></p>.<p><strong>ಬೆಂಗಳೂರು, ಮಾರ್ಚ್ 21</strong>– ಬರದ ಬೇಗೆಯನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು 21 ದಿನಗಳ ಕಾಲ ಬರದ ಪ್ರದೇಶಗಳಿಗೆ ಕಳುಹಿಸಿಕೊಡಲಾಗುವುದು.</p>.<p>ಶಿಕ್ಷಣ ಸಚಿವ ಶ್ರೀ ಎ.ಆರ್.ಬದರಿನಾರಾಯಣ್ ಅವರು ಈ ವಿಷಯವನ್ನು ಇಂದು ವಿಧಾನಸಭೆಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ರಾಷ್ಟ್ರದಾದ್ಯಂತ ಧಾನ್ಯದ ಸಗಟು ಪೇಟೆ ಬಂದ್; ಹರತಾಳ ‘ಯಶಸ್ವಿ’</strong></p>.<p><strong>ನವದೆಹಲಿ, ಮಾರ್ಚ್ 21– </strong>ಆಹಾರ ಧಾನ್ಯಗಳ ಸಗಟು ವ್ಯಾಪಾರವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಪ್ರತಿಭಟಿಸಿ ರಾಷ್ಟ್ರದಾದ್ಯಂತ ಆಹಾರಧಾನ್ಯ ಸಗಟು ಪೇಟೆಗಳು ಇಂದು ಒಂದು ದಿನದ ‘ಹರತಾಳ’ ಆಚರಿಸಿದವು.</p>.<p>ಎಲ್ಲ ರಾಜ್ಯಗಳಲ್ಲಿಯೂ ‘ಹರತಾಳ’ ಪೂರ್ಣವಾಗಿತ್ತೆಂದು ಅದಕ್ಕೆ ಕರೆ ಕೊಟ್ಟಿದ್ದ ಅಖಿಲ ಭಾರತ ಆಹಾರಧಾನ್ಯ ವ್ಯಾಪಾರಸ್ಥರ ಸಂಘಗಳ ಫೆಡರೇಷನ್ ಹೇಳಿದೆ.</p>.<p>ರಾಷ್ಟ್ರದ ಅನೇಕ ಕಡೆ ಭಾಗಶಃ ಸಗಟು ವ್ಯಾಪಾರಸ್ಥರು, ಚಿಲ್ಲರೆ ವ್ಯಾಪಾರಸ್ಥರು ಹಾಗೂ ಸಂಬಂಧಪಟ್ಟ ವಸ್ತುಗಳ ವಹಿವಾಟುಗಳವರು ಸಹ ಹರತಾಳಕ್ಕೆ ಸಹಾನುಭೂತಿ ವ್ಯಕ್ತಪಡಿಸಲು ತಮ್ಮ ಅಂಗಡಿಗಳನ್ನು ಮುಚ್ಚಿದ್ದರೆಂದು ಇಲ್ಲಿಗೆ ವರದಿ ಬಂದಿದೆ.</p>.<p><strong>ವಿದ್ಯಾರ್ಥಿಗಳಿಗೆ ಬರದ ಬೇಗೆಯ ಪರಿಚಯ</strong></p>.<p><strong>ಬೆಂಗಳೂರು, ಮಾರ್ಚ್ 21</strong>– ಬರದ ಬೇಗೆಯನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು 21 ದಿನಗಳ ಕಾಲ ಬರದ ಪ್ರದೇಶಗಳಿಗೆ ಕಳುಹಿಸಿಕೊಡಲಾಗುವುದು.</p>.<p>ಶಿಕ್ಷಣ ಸಚಿವ ಶ್ರೀ ಎ.ಆರ್.ಬದರಿನಾರಾಯಣ್ ಅವರು ಈ ವಿಷಯವನ್ನು ಇಂದು ವಿಧಾನಸಭೆಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>