ನವದೆಹಲಿ, ಜೂನ್ 25– ಯುದ್ಧ ಕೈದಿಗಳು ಹಾಗೂ ಪಾಕಿಸ್ತಾನದಲ್ಲಿ ನಿರ್ಬಂಧಕ್ಕೆ ಸಿಕ್ಕಿಬಿದ್ದಿರುವ ಬಂಗಾಳಿಗಳು ಮತ್ತು ಬಾಂಗ್ಲಾ ದೇಶದಲ್ಲಿ ಉಳದು ಹೋಗಿರುವ ಪಾಕಿಸ್ತಾನಿಗಳ ಸ್ವದೇಶ ರವಾನೆ ಕುರಿತು ಏಪ್ರಿಲ್ 17ರಂದು ಭಾರತ– ಬಾಂಗ್ಲಾದೇಶ ಸಂಯುಕ್ತ ಹೇಳಿಕೆಯಲ್ಲಿ ಸೂಚಿಸಿರುವ ಸಲಹೆಗಳ ಬಗೆಗೆ ಪಾಕಿಸ್ತಾನ ಸರ್ಕಾರ ಭಾರತಕ್ಕೆ ಬರೆದಿರುವ ಈಚಿನ ಪತ್ರದಲ್ಲಿ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಧೋರಣೆ ತಳೆದಿದೆಯೆಂದು ಗೊತ್ತಾಗಿದೆ.