ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಗುರುವಾರ 16–9–1971

Last Updated 15 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳ ದೂರು ವಿಚಾರಣೆ ಭರವಸೆ

ಬೆಂಗಳೂರು. ಸೆ. 15– ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತದ ಬಗ್ಗೆ ಮಾಡಲಾಗಿರುವ ದೂರುಗಳ ಬಗ್ಗೆ ವಿಚಾರಣೆ ನಡೆಸುವ ಭರವಸೆ ನೀಡಿರುವ ರಾಜ್ಯಪಾಲರು, ‘ಮೊದಲು ತರಗತಿಗಳಿಗೆ ಹಿಂತಿರುಗಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದ್ದಾರೆ.

ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ‘ಮುಷ್ಕರ ಮಾರ್ಗವಲ್ಲ’ ಎಂದು ರಾಜ್ಯ ಪಾಲರು ವಿದ್ಯಾರ್ಥಿ ನಾಯಕರಿಗೆ ಒತ್ತಿ ಹೇಳಿದರು. ಪುಂಡತನವನ್ನು ಯಾರೂ ಖಂಡಿ ಸದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳು ಇದ್ದಕ್ಕಿದ್ದ ಹಾಗೆ ಮುಷ್ಕರ ಹೂಡಬಾರದು. ಸಮಸ್ಯೆಗಳಿಗೆ ಮುಷ್ಕರ ಉತ್ತರವಲ್ಲ ಎಂದು ಹೇಳಿದೆ. ನನ್ನನ್ನಾಗಲೀ, ಉಪಕುಲಪತಿಗಳನ್ನಾಗಲೀ ಭೇಟಿ ಮಾಡಬಹುದಾಗಿತ್ತು. ಅಸ್ಪಷ್ಟ ಆಪಾದನೆಗಳನ್ನು ಮಾಡಿ ಪ್ರಯೋಜನವಿಲ್ಲ. ಅವು ನಿರ್ದಿಷ್ಟವಾಗಿರ
ಬೇಕು ಎಂದು ಹೇಳಿದೆ’ ಎಂದು ರಾಜ್ಯ ಪಾಲರು ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT