<p id="thickbox_headline"><strong>ವಿದ್ಯಾರ್ಥಿಗಳ ದೂರು ವಿಚಾರಣೆ ಭರವಸೆ</strong></p>.<p><strong>ಬೆಂಗಳೂರು. ಸೆ. 15– </strong>ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತದ ಬಗ್ಗೆ ಮಾಡಲಾಗಿರುವ ದೂರುಗಳ ಬಗ್ಗೆ ವಿಚಾರಣೆ ನಡೆಸುವ ಭರವಸೆ ನೀಡಿರುವ ರಾಜ್ಯಪಾಲರು, ‘ಮೊದಲು ತರಗತಿಗಳಿಗೆ ಹಿಂತಿರುಗಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದ್ದಾರೆ.</p>.<p>ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ‘ಮುಷ್ಕರ ಮಾರ್ಗವಲ್ಲ’ ಎಂದು ರಾಜ್ಯ ಪಾಲರು ವಿದ್ಯಾರ್ಥಿ ನಾಯಕರಿಗೆ ಒತ್ತಿ ಹೇಳಿದರು. ಪುಂಡತನವನ್ನು ಯಾರೂ ಖಂಡಿ ಸದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.</p>.<p>‘ವಿದ್ಯಾರ್ಥಿಗಳು ಇದ್ದಕ್ಕಿದ್ದ ಹಾಗೆ ಮುಷ್ಕರ ಹೂಡಬಾರದು. ಸಮಸ್ಯೆಗಳಿಗೆ ಮುಷ್ಕರ ಉತ್ತರವಲ್ಲ ಎಂದು ಹೇಳಿದೆ. ನನ್ನನ್ನಾಗಲೀ, ಉಪಕುಲಪತಿಗಳನ್ನಾಗಲೀ ಭೇಟಿ ಮಾಡಬಹುದಾಗಿತ್ತು. ಅಸ್ಪಷ್ಟ ಆಪಾದನೆಗಳನ್ನು ಮಾಡಿ ಪ್ರಯೋಜನವಿಲ್ಲ. ಅವು ನಿರ್ದಿಷ್ಟವಾಗಿರ<br />ಬೇಕು ಎಂದು ಹೇಳಿದೆ’ ಎಂದು ರಾಜ್ಯ ಪಾಲರು ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ವಿದ್ಯಾರ್ಥಿಗಳ ದೂರು ವಿಚಾರಣೆ ಭರವಸೆ</strong></p>.<p><strong>ಬೆಂಗಳೂರು. ಸೆ. 15– </strong>ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತದ ಬಗ್ಗೆ ಮಾಡಲಾಗಿರುವ ದೂರುಗಳ ಬಗ್ಗೆ ವಿಚಾರಣೆ ನಡೆಸುವ ಭರವಸೆ ನೀಡಿರುವ ರಾಜ್ಯಪಾಲರು, ‘ಮೊದಲು ತರಗತಿಗಳಿಗೆ ಹಿಂತಿರುಗಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದ್ದಾರೆ.</p>.<p>ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ‘ಮುಷ್ಕರ ಮಾರ್ಗವಲ್ಲ’ ಎಂದು ರಾಜ್ಯ ಪಾಲರು ವಿದ್ಯಾರ್ಥಿ ನಾಯಕರಿಗೆ ಒತ್ತಿ ಹೇಳಿದರು. ಪುಂಡತನವನ್ನು ಯಾರೂ ಖಂಡಿ ಸದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.</p>.<p>‘ವಿದ್ಯಾರ್ಥಿಗಳು ಇದ್ದಕ್ಕಿದ್ದ ಹಾಗೆ ಮುಷ್ಕರ ಹೂಡಬಾರದು. ಸಮಸ್ಯೆಗಳಿಗೆ ಮುಷ್ಕರ ಉತ್ತರವಲ್ಲ ಎಂದು ಹೇಳಿದೆ. ನನ್ನನ್ನಾಗಲೀ, ಉಪಕುಲಪತಿಗಳನ್ನಾಗಲೀ ಭೇಟಿ ಮಾಡಬಹುದಾಗಿತ್ತು. ಅಸ್ಪಷ್ಟ ಆಪಾದನೆಗಳನ್ನು ಮಾಡಿ ಪ್ರಯೋಜನವಿಲ್ಲ. ಅವು ನಿರ್ದಿಷ್ಟವಾಗಿರ<br />ಬೇಕು ಎಂದು ಹೇಳಿದೆ’ ಎಂದು ರಾಜ್ಯ ಪಾಲರು ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>