<p><strong>ವಿಮಾನಗಳ್ಳರ ವಾಪಸಾತಿ ಇಲ್ಲ ಪಾಕ್ ಪುನರ್ ಸ್ಪಷ್ಟನೆ</strong></p>.<p>ನವದೆಹಲಿ, ಫೆ. 10– ಲಾಹೋರಿನಲ್ಲಿ ಭಸ್ಮ ಮಾಡಲಾದ ಭಾರತದ ಫಾಕರ್ ಫ್ರೆಂಡ್ಶಿಪ್ ವಿಮಾನವನ್ನು ಅಪಹರಿಸಿದ ಇಬ್ಬರನ್ನೂ ಭಾರತಕ್ಕೆ ವಾಪಸು ಕಳುಹಿಸಿಕೊಡುವುದಿಲ್ಲವೆಂಬ ತನ್ನ ಹಿಂದಿನ ನಿಲುವನ್ನು ಪಾಕಿಸ್ತಾನ ಇಂದು ಪುನರ್ ಸ್ಪಷ್ಟಪಡಿಸಿತು.</p>.<p><strong>‘ಬಡವ– ಶ್ರೀಮಂತನ ಅಂತರ ಕಡಿಮೆ ಮಾಡುವುದಗತ್ಯ’</strong></p>.<p>ಮಂಗಳೂರು, ಫೆ. 10– ‘ಈ ದೇಶ ಅತ್ಯಂತ ಪ್ರಾಚೀನ ನಾಗರಿಕತೆಯುಳ್ಳ ದೇಶ. ಆದರೆ, ಇದನ್ನು ಎಲ್ಲಾ ವಿಧದಲ್ಲೂ ಆಧುನಿಕಗೊಳಿಸುವ ಕಾರ್ಯ ನಿಮ್ಮದಾಗಿದೆ. ಬಡವ ಮತ್ತು ಶ್ರೀಮಂತರ ನಡುವಣ ಅಂತರವನ್ನು ಕಡಿಮೆಗೊಳಿಸುವುದು ಅಗತ್ಯವಾಗಿದೆ. ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ನಡೆಯುವ ಅನ್ಯಾಯವನ್ನು ಎದುರಿಸ<br />ಬೇಕಾಗಿದೆ’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.</p>.<p>‘ನಾವು ಇದ್ದಂತೆ ಇರಬೇಕೆ? ಪುರಾತನ ಮಾನವರಿಂದ ಆಧುನಿಕ ಮಾನವರಾಗಿ ಬದಲಾವಣೆ ಹೊಂದಬೇಕು. ನಮ್ಮ ಧರ್ಮ, ಸಂಸ್ಕೃತಿಯಲ್ಲಿನ ಒಳ್ಳೆ ಅಂಶಗಳನ್ನು ಅಂಗೀಕರಿಸಿ ಹೊಸ ಸಮಾಜ ಕಟ್ಟುವುದು ನಮ್ಮ ಗುರಿಯಾಗಿದೆ’ ಎಂದರು.</p>.<p><strong>ರಸ್ತೆಯುದ್ದಕ್ಕೂ ಹಾರ್ದಿಕ ಸ್ವಾಗತ</strong></p>.<p>ಹಾಸನ, ಫೆ. 10– ಸುಮಾರು ಒಂದೂವರೆ ಗಂಟೆ ಕಾಲ ತಡವಾಗಿ ಮಂಗಳೂರನ್ನು ಬಿಟ್ಟ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಹಾಸನದವರೆಗೂ ದಾರಿಯುದ್ದಕ್ಕೂ ಊರುಗಳಲ್ಲಿ ಭಾರಿ ಸ್ವಾಗತ ನೀಡಲಾಯಿತು. ರಸ್ತೆ, ವಿದ್ಯುದ್ದೀಪ ಅಥವಾ ಗ್ಯಾಸ್ ದೀಪಗಳನ್ನಿಟ್ಟುಕೊಂಡು ಪ್ರಧಾನಿಗಾಗಿ ಕಾದಿದ್ದರು. ಹಾಸನಕ್ಕೆ ರಾತ್ರಿ 11 ಗಂಟೆಗೆ ತಲುಪಿದರು.<br />ಕಾರ್ಯಕ್ರಮದಲ್ಲಿ ಸೇರದಿದ್ದ ಪುತ್ತೂರಿಗೆ ಭೇಟಿ ಕೊಟ್ಟರು. ಪುತ್ತೂರಿನಲ್ಲಿ ಇಡೀ ಪುತ್ತೂರು ಪ್ರಧಾನಿಗೆ ಸ್ವಾಗತ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಮಾನಗಳ್ಳರ ವಾಪಸಾತಿ ಇಲ್ಲ ಪಾಕ್ ಪುನರ್ ಸ್ಪಷ್ಟನೆ</strong></p>.<p>ನವದೆಹಲಿ, ಫೆ. 10– ಲಾಹೋರಿನಲ್ಲಿ ಭಸ್ಮ ಮಾಡಲಾದ ಭಾರತದ ಫಾಕರ್ ಫ್ರೆಂಡ್ಶಿಪ್ ವಿಮಾನವನ್ನು ಅಪಹರಿಸಿದ ಇಬ್ಬರನ್ನೂ ಭಾರತಕ್ಕೆ ವಾಪಸು ಕಳುಹಿಸಿಕೊಡುವುದಿಲ್ಲವೆಂಬ ತನ್ನ ಹಿಂದಿನ ನಿಲುವನ್ನು ಪಾಕಿಸ್ತಾನ ಇಂದು ಪುನರ್ ಸ್ಪಷ್ಟಪಡಿಸಿತು.</p>.<p><strong>‘ಬಡವ– ಶ್ರೀಮಂತನ ಅಂತರ ಕಡಿಮೆ ಮಾಡುವುದಗತ್ಯ’</strong></p>.<p>ಮಂಗಳೂರು, ಫೆ. 10– ‘ಈ ದೇಶ ಅತ್ಯಂತ ಪ್ರಾಚೀನ ನಾಗರಿಕತೆಯುಳ್ಳ ದೇಶ. ಆದರೆ, ಇದನ್ನು ಎಲ್ಲಾ ವಿಧದಲ್ಲೂ ಆಧುನಿಕಗೊಳಿಸುವ ಕಾರ್ಯ ನಿಮ್ಮದಾಗಿದೆ. ಬಡವ ಮತ್ತು ಶ್ರೀಮಂತರ ನಡುವಣ ಅಂತರವನ್ನು ಕಡಿಮೆಗೊಳಿಸುವುದು ಅಗತ್ಯವಾಗಿದೆ. ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ನಡೆಯುವ ಅನ್ಯಾಯವನ್ನು ಎದುರಿಸ<br />ಬೇಕಾಗಿದೆ’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.</p>.<p>‘ನಾವು ಇದ್ದಂತೆ ಇರಬೇಕೆ? ಪುರಾತನ ಮಾನವರಿಂದ ಆಧುನಿಕ ಮಾನವರಾಗಿ ಬದಲಾವಣೆ ಹೊಂದಬೇಕು. ನಮ್ಮ ಧರ್ಮ, ಸಂಸ್ಕೃತಿಯಲ್ಲಿನ ಒಳ್ಳೆ ಅಂಶಗಳನ್ನು ಅಂಗೀಕರಿಸಿ ಹೊಸ ಸಮಾಜ ಕಟ್ಟುವುದು ನಮ್ಮ ಗುರಿಯಾಗಿದೆ’ ಎಂದರು.</p>.<p><strong>ರಸ್ತೆಯುದ್ದಕ್ಕೂ ಹಾರ್ದಿಕ ಸ್ವಾಗತ</strong></p>.<p>ಹಾಸನ, ಫೆ. 10– ಸುಮಾರು ಒಂದೂವರೆ ಗಂಟೆ ಕಾಲ ತಡವಾಗಿ ಮಂಗಳೂರನ್ನು ಬಿಟ್ಟ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಹಾಸನದವರೆಗೂ ದಾರಿಯುದ್ದಕ್ಕೂ ಊರುಗಳಲ್ಲಿ ಭಾರಿ ಸ್ವಾಗತ ನೀಡಲಾಯಿತು. ರಸ್ತೆ, ವಿದ್ಯುದ್ದೀಪ ಅಥವಾ ಗ್ಯಾಸ್ ದೀಪಗಳನ್ನಿಟ್ಟುಕೊಂಡು ಪ್ರಧಾನಿಗಾಗಿ ಕಾದಿದ್ದರು. ಹಾಸನಕ್ಕೆ ರಾತ್ರಿ 11 ಗಂಟೆಗೆ ತಲುಪಿದರು.<br />ಕಾರ್ಯಕ್ರಮದಲ್ಲಿ ಸೇರದಿದ್ದ ಪುತ್ತೂರಿಗೆ ಭೇಟಿ ಕೊಟ್ಟರು. ಪುತ್ತೂರಿನಲ್ಲಿ ಇಡೀ ಪುತ್ತೂರು ಪ್ರಧಾನಿಗೆ ಸ್ವಾಗತ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>