ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಹತ್ತನೇ ವಿಶ್ವ ಸಂಸ್ಕೃತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸಂಸ್ಕೃತ ಕೇವಲ ಮೇಲ್ವರ್ಗದವರ ಭಾಷೆ ಎಂಬುದನ್ನು ತಿರಸ್ಕರಿಸಿ ‘ಸಂಸ್ಕೃತವನ್ನು ಗ್ರಾಂಥಿಕ ಭಾಷೆಯಾಗಿ ಪುರಾತನ ಸಾಹಿತ್ಯದ ಅಧ್ಯಯನಕ್ಕೆ ಮಾತ್ರ ಮೀಸಲಾಗಿದೆ ಎಂದು ದೇಶದ ಒಳಗೆ ಮತ್ತು ಹೊರಗೆ ಹಲವು ಬಾರಿ ಅಭಿಪ್ರಾಯ ತಳೆದಿದ್ದಾರೆ. ಇದು ಕಲಿತವರ ಹಾಗೂ ಪ್ರಜ್ಞಾವಂತರ ಭಾಷೆ, ಇದಕ್ಕೂ ವಾಸ್ತವ ಬದುಕಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬ ಭಾವನೆಯ ಇದೆ. ಆದರೆ, ಇದು ತಪ್ಪು ಕಲ್ಪನೆ. ಸಂಸ್ಕೃತ ಅರಿಯದವರ ನಿರ್ಲಕ್ಷ್ಯದಿಂದ ಹುಟ್ಟಿರುವ ಕಲ್ಪನೆ ಇದು. ಒಂದು ವಿಷಯವನ್ನು ಸ್ಪಷ್ಟ ವಾಗಿ ಮನೋಜ್ಞವಾಗಿ ಸಂವಾದಿಸಬಲ್ಲ ವಿಶಿಷ್ಟ ಗುಣ ಸಂಸ್ಕೃತಕ್ಕಿದೆ’ ಎಂದು ಹೇಳಿದರು.