<p><strong>ರಾಜ್ಯ ಸಂಯುಕ್ತ ವಿದಾಯಕ ದಳದಿಂದ 11 ಮಂದಿ ಪಿಎಸ್ಪಿ ಸದಸ್ಯರ ನಿರ್ಗಮನ</strong></p>.<p><strong>ಬೆಂಗಳೂರು, ಅ. 6– </strong>ಕೆಲಕಾಲದಿಂದ ನಿರೀಕ್ಷಿಸಿದ್ದಂತೆ ರಾಜ್ಯ ವಿಧಾನಸಭೆಯ ಹನ್ನೊಂದು ಮಂದಿ ಪಿಎಸ್ಪಿ ಸದಸ್ಯರು ಸಂಯುಕ್ತ ವಿದಾಯಕ ದಳದಿಂದ ಹೊರಬರಲು ತೀರ್ಮಾನಿಸಿದ್ದಾರೆ.</p>.<p>ಲಖನೌ ವರದಿ: ಉತ್ತರ ಪ್ರದೇಶದಲ್ಲಿ ಐದು ಪಕ್ಷಗಳ ಕೂಟ ರಚಿಸುವ ಬಗ್ಗೆ ಆರಂಭವಾದ ವಿರೋಧ ಪಕ್ಷಗಳ ನಾಯಕರ, ಶಾಸಕರ ಮೂರು ದಿನಗಳ ಸಭೆಯು ಇಂದು ಯಾವ ನಿರ್ಧಾರವೂ ಇಲ್ಲದೆ ಮುಂದೂಡಲ್ಪಟ್ಟಿತು.</p>.<p>ಕೇಂದ್ರ ನಾಯಕರೊಂದಿಗೆ ಸಮಾಲೋಚಿಸಿದ ನಂತರ, ಉದ್ದೇಶಿತ ಸಂಯುಕ್ತ ವಿಧಾಯಕ ದಳದ ನಾಯಕತ್ವದ ಬಗ್ಗೆ ಮುಂದೆ ಸೂಕ್ತವಾದ ಕಾಲದಲ್ಲಿ ನಿರ್ಧರಿಸಲಾಗುವುದು ಎಂದು ಈ ಐದು ಪಕ್ಷಗಳ ಸಮನ್ವಯ ಸಮಿತಿಯ ವಕ್ತಾರರೊಬ್ಬರು ತಿಳಿಸಿದರು.</p>.<p><strong>11 ನ್ಯಾಯಾಧೀಶರ ಸುಪ್ರೀಂ ಕೋರ್ಟಿನ ಪೂರ್ಣ ಪೀಠ ರಚನೆ</strong></p>.<p><strong>ನವದೆಹಲಿ, ಅ. 6–</strong> ಮಾಜಿ ರಾಜರನ್ನು ಅಮಾನ್ಯಗೊಳಿಸಿ ರಾಷ್ಟ್ರಪತಿ ಹೊರಡಿಸಿರುವ ಆಜ್ಞೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಎಂಟು ಜನ ಮಾಜಿ ಅರಸರು ಸಲ್ಲಿಸಿರುವ ರಿಟ್ ಅರ್ಜಿಗಳ ವಿಚಾರಣೆಗಾಗಿ ಭಾರತದ ಶ್ರೇಷ್ಠ ನ್ಯಾಯಾಧೀಶರು ಸುಪ್ರೀಂ ಕೋರ್ಟಿನ ಹನ್ನೊಂದು ಜನ ನ್ಯಾಯಾಧೀಶರನ್ನೊಳಗೊಂಡ ಪೂರ್ಣ ಪೀಠವೊಂದನ್ನು ರಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯ ಸಂಯುಕ್ತ ವಿದಾಯಕ ದಳದಿಂದ 11 ಮಂದಿ ಪಿಎಸ್ಪಿ ಸದಸ್ಯರ ನಿರ್ಗಮನ</strong></p>.<p><strong>ಬೆಂಗಳೂರು, ಅ. 6– </strong>ಕೆಲಕಾಲದಿಂದ ನಿರೀಕ್ಷಿಸಿದ್ದಂತೆ ರಾಜ್ಯ ವಿಧಾನಸಭೆಯ ಹನ್ನೊಂದು ಮಂದಿ ಪಿಎಸ್ಪಿ ಸದಸ್ಯರು ಸಂಯುಕ್ತ ವಿದಾಯಕ ದಳದಿಂದ ಹೊರಬರಲು ತೀರ್ಮಾನಿಸಿದ್ದಾರೆ.</p>.<p>ಲಖನೌ ವರದಿ: ಉತ್ತರ ಪ್ರದೇಶದಲ್ಲಿ ಐದು ಪಕ್ಷಗಳ ಕೂಟ ರಚಿಸುವ ಬಗ್ಗೆ ಆರಂಭವಾದ ವಿರೋಧ ಪಕ್ಷಗಳ ನಾಯಕರ, ಶಾಸಕರ ಮೂರು ದಿನಗಳ ಸಭೆಯು ಇಂದು ಯಾವ ನಿರ್ಧಾರವೂ ಇಲ್ಲದೆ ಮುಂದೂಡಲ್ಪಟ್ಟಿತು.</p>.<p>ಕೇಂದ್ರ ನಾಯಕರೊಂದಿಗೆ ಸಮಾಲೋಚಿಸಿದ ನಂತರ, ಉದ್ದೇಶಿತ ಸಂಯುಕ್ತ ವಿಧಾಯಕ ದಳದ ನಾಯಕತ್ವದ ಬಗ್ಗೆ ಮುಂದೆ ಸೂಕ್ತವಾದ ಕಾಲದಲ್ಲಿ ನಿರ್ಧರಿಸಲಾಗುವುದು ಎಂದು ಈ ಐದು ಪಕ್ಷಗಳ ಸಮನ್ವಯ ಸಮಿತಿಯ ವಕ್ತಾರರೊಬ್ಬರು ತಿಳಿಸಿದರು.</p>.<p><strong>11 ನ್ಯಾಯಾಧೀಶರ ಸುಪ್ರೀಂ ಕೋರ್ಟಿನ ಪೂರ್ಣ ಪೀಠ ರಚನೆ</strong></p>.<p><strong>ನವದೆಹಲಿ, ಅ. 6–</strong> ಮಾಜಿ ರಾಜರನ್ನು ಅಮಾನ್ಯಗೊಳಿಸಿ ರಾಷ್ಟ್ರಪತಿ ಹೊರಡಿಸಿರುವ ಆಜ್ಞೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಎಂಟು ಜನ ಮಾಜಿ ಅರಸರು ಸಲ್ಲಿಸಿರುವ ರಿಟ್ ಅರ್ಜಿಗಳ ವಿಚಾರಣೆಗಾಗಿ ಭಾರತದ ಶ್ರೇಷ್ಠ ನ್ಯಾಯಾಧೀಶರು ಸುಪ್ರೀಂ ಕೋರ್ಟಿನ ಹನ್ನೊಂದು ಜನ ನ್ಯಾಯಾಧೀಶರನ್ನೊಳಗೊಂಡ ಪೂರ್ಣ ಪೀಠವೊಂದನ್ನು ರಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>