<h2>ವೀರಪ್ಪನ್ನಿಂದ ರಾಜ್ಕುಮಾರ್ ಅಪಹರಣ</h2>.<p><strong>ಬೆಂಗಳೂರು, ಜುಲೈ 31</strong>– ತಮ್ಮ ಸ್ವಗ್ರಾಮವಾದ ತಮಿಳುನಾಡು ಗಡಿ ಭಾಗದ ಗಾಜನೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಹಾಗೂ ಅವರ ಅಳಿಯ ಸೇರಿದಂತೆ ನಾಲ್ವರನ್ನು ಕಾಡುಗಳ್ಳ ವೀರಪ್ಪನ್ ಭಾನುವಾರ ರಾತ್ರಿ ಅಪಹರಿಸಿದ್ದಾನೆ.</p>.<p>ಅಪಹರಣದ ಸುದ್ದಿ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ವಿವಿಧೆಡೆ ಬಂದ್ ಹಾಗೂ ಪ್ರತಿಭಟನೆ ಗಳು ನಡೆದವು.</p>.<p>ನಗರದಲ್ಲಿ ಹಲವೆಡೆ ಅಗ್ನಿಸ್ಪರ್ಶ, ಕಲ್ಲುತೂರಾಟ, ರಸ್ತೆತಡೆಗಳಿಂದಾಗಿ ಜನಜೀವನ ಅಸ್ತವ್ಯಸ್ತ ಆಗಿತ್ತು.</p>.<p>ಡಾ. ರಾಜ್ಕುಮಾರ್ ಮತ್ತು ಅವರ ಪತ್ನಿ ಪಾರ್ವತಮ್ಮ ರಾಜ್ಕುಮಾರ್ ಅವರು ಕುಟುಂಬದ ಸದಸ್ಯರ ಜೊತೆಯಲ್ಲಿ ಶುಕ್ರವಾರದಿಂದ ರಾಜ್ಯದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಬಳಿಯ ಗಾಜನೂರು ಗ್ರಾಮದಲ್ಲಿ ಇರುವ ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. </p>.<h2>ಕಾಶ್ಮೀರ: 7 ಸೈನಿಕರ ಹತ್ಯೆ</h2>.<p><strong>ಶ್ರೀನಗರ, ಜುಲೈ 31 (ಪಿಟಿಐ)</strong>– ಕಳೆದ ವಾರ ಹಿಜಬುಲ್ ಮುಜಾಹಿದ್ದೀನ್ ಕದನ ವಿರಾಮ ಘೋಷಿಸಿದ ಮೇಲೆ ಇದೇ ಮೊದಲ ಬಾರಿಗೆ ಶಸ್ತ್ರಸಜ್ಜಿತ ಉಗ್ರರು, ಕಳೆದ ರಾತ್ರಿ ಉತ್ತರ ಕಾಶ್ಮೀರದ ಸೈನಿಕ ಶಿಬಿರದ ಮೇಲೆ ಪ್ರಮುಖ ದಾಳಿ ನಡೆಸಿ 7 ಸೈನಿಕರನ್ನು ಕೊಂದು ಹಾಕಿದ್ದಾರೆ. ಇತರೆ 7 ಮಂದಿ ಗಾಯಗೊಂಡಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ವೀರಪ್ಪನ್ನಿಂದ ರಾಜ್ಕುಮಾರ್ ಅಪಹರಣ</h2>.<p><strong>ಬೆಂಗಳೂರು, ಜುಲೈ 31</strong>– ತಮ್ಮ ಸ್ವಗ್ರಾಮವಾದ ತಮಿಳುನಾಡು ಗಡಿ ಭಾಗದ ಗಾಜನೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಹಾಗೂ ಅವರ ಅಳಿಯ ಸೇರಿದಂತೆ ನಾಲ್ವರನ್ನು ಕಾಡುಗಳ್ಳ ವೀರಪ್ಪನ್ ಭಾನುವಾರ ರಾತ್ರಿ ಅಪಹರಿಸಿದ್ದಾನೆ.</p>.<p>ಅಪಹರಣದ ಸುದ್ದಿ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ವಿವಿಧೆಡೆ ಬಂದ್ ಹಾಗೂ ಪ್ರತಿಭಟನೆ ಗಳು ನಡೆದವು.</p>.<p>ನಗರದಲ್ಲಿ ಹಲವೆಡೆ ಅಗ್ನಿಸ್ಪರ್ಶ, ಕಲ್ಲುತೂರಾಟ, ರಸ್ತೆತಡೆಗಳಿಂದಾಗಿ ಜನಜೀವನ ಅಸ್ತವ್ಯಸ್ತ ಆಗಿತ್ತು.</p>.<p>ಡಾ. ರಾಜ್ಕುಮಾರ್ ಮತ್ತು ಅವರ ಪತ್ನಿ ಪಾರ್ವತಮ್ಮ ರಾಜ್ಕುಮಾರ್ ಅವರು ಕುಟುಂಬದ ಸದಸ್ಯರ ಜೊತೆಯಲ್ಲಿ ಶುಕ್ರವಾರದಿಂದ ರಾಜ್ಯದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಬಳಿಯ ಗಾಜನೂರು ಗ್ರಾಮದಲ್ಲಿ ಇರುವ ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. </p>.<h2>ಕಾಶ್ಮೀರ: 7 ಸೈನಿಕರ ಹತ್ಯೆ</h2>.<p><strong>ಶ್ರೀನಗರ, ಜುಲೈ 31 (ಪಿಟಿಐ)</strong>– ಕಳೆದ ವಾರ ಹಿಜಬುಲ್ ಮುಜಾಹಿದ್ದೀನ್ ಕದನ ವಿರಾಮ ಘೋಷಿಸಿದ ಮೇಲೆ ಇದೇ ಮೊದಲ ಬಾರಿಗೆ ಶಸ್ತ್ರಸಜ್ಜಿತ ಉಗ್ರರು, ಕಳೆದ ರಾತ್ರಿ ಉತ್ತರ ಕಾಶ್ಮೀರದ ಸೈನಿಕ ಶಿಬಿರದ ಮೇಲೆ ಪ್ರಮುಖ ದಾಳಿ ನಡೆಸಿ 7 ಸೈನಿಕರನ್ನು ಕೊಂದು ಹಾಕಿದ್ದಾರೆ. ಇತರೆ 7 ಮಂದಿ ಗಾಯಗೊಂಡಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>