<p><strong>ನವದೆಹಲಿ, ಜ24–</strong> ಉತ್ತರ ಪ್ರದೇಶದ ಜಮೀನ್ದಾರಿ ನಿರ್ಮೂಲನ ಮಸೂದೆಗೆ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಅಂಗೀಕಾರವಿತ್ತಿದ್ದಾರೆ.</p>.<p>ಒಂದೂವರೆ ಶಮಾನಗಳಿಂದಲೂ ನಡೆದುಕೊಂಡು ಬಂದಿರುವ ಜಮೀನ್ದಾರಿ ಪದ್ಧತಿಯನ್ನು ತೊಡೆದುಹಾಕಬೇಕೆಂಬ ಮಸೂದೆಯು ಶಾಸನ ಸಭೆಯಲ್ಲಿ ಅಂಗೀಕಾರವಾಯಿತು. </p>.<p>ಮೇಲ್ಮನೆಯು ಜನವರಿ 16ರಂದು ಮಸೂದೆಯನ್ನು ಒಪ್ಪಿ ಭಾರತ ರಾಜ್ಯಾಂಗದ 1ನೇ ವಿಧಿಯ ಪ್ರಕಾರ ರಾಷ್ಟ್ರಾಧ್ಯಕ್ಷರ ಅನುಮತಿಗೆ ಕಾದಿಡಲಾಗಿತ್ತು. </p>.<p>ಜನವರಿ 26ರಂದು ಲೋಕರಾಜ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಸನವನ್ನು ಉದ್ಘಾಟಿಸಬಹುದೆಂದು ಮುಖ್ಯಮಂತ್ರಿ ಶ್ರೀ ಗೋವಿಂದ ವಲ್ಲಭ ಪಂತರು ಶಾಸನ ಸಭೆಯಲ್ಲಿ ತಿಳಿಸಿದರು. </p>
<p><strong>ನವದೆಹಲಿ, ಜ24–</strong> ಉತ್ತರ ಪ್ರದೇಶದ ಜಮೀನ್ದಾರಿ ನಿರ್ಮೂಲನ ಮಸೂದೆಗೆ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಅಂಗೀಕಾರವಿತ್ತಿದ್ದಾರೆ.</p>.<p>ಒಂದೂವರೆ ಶಮಾನಗಳಿಂದಲೂ ನಡೆದುಕೊಂಡು ಬಂದಿರುವ ಜಮೀನ್ದಾರಿ ಪದ್ಧತಿಯನ್ನು ತೊಡೆದುಹಾಕಬೇಕೆಂಬ ಮಸೂದೆಯು ಶಾಸನ ಸಭೆಯಲ್ಲಿ ಅಂಗೀಕಾರವಾಯಿತು. </p>.<p>ಮೇಲ್ಮನೆಯು ಜನವರಿ 16ರಂದು ಮಸೂದೆಯನ್ನು ಒಪ್ಪಿ ಭಾರತ ರಾಜ್ಯಾಂಗದ 1ನೇ ವಿಧಿಯ ಪ್ರಕಾರ ರಾಷ್ಟ್ರಾಧ್ಯಕ್ಷರ ಅನುಮತಿಗೆ ಕಾದಿಡಲಾಗಿತ್ತು. </p>.<p>ಜನವರಿ 26ರಂದು ಲೋಕರಾಜ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಸನವನ್ನು ಉದ್ಘಾಟಿಸಬಹುದೆಂದು ಮುಖ್ಯಮಂತ್ರಿ ಶ್ರೀ ಗೋವಿಂದ ವಲ್ಲಭ ಪಂತರು ಶಾಸನ ಸಭೆಯಲ್ಲಿ ತಿಳಿಸಿದರು. </p>