ವನ್ಯ ಮೃಗಗಳಾದ ಚಿರತೆ ಮತ್ತು ಆನೆಗಳ ಸಂತತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿರುವುದು ಒಂದು ಕಡೆ ಸಂತಸದ ಸಂಗತಿ. ಆದರೆ, ಇನ್ನೊಂದು ಕಡೆ ಆಹಾರ ಅರಸಿ ಗ್ರಾಮಗಳತ್ತ ಬರುತ್ತಿರುವ ಈ ಪ್ರಾಣಿಗಳು ರಸ್ತೆ ಅಪಘಾತ, ವಿಷಪ್ರಾಶನ, ವಿದ್ಯುತ್ ಅಪಘಾತ, ಬೇಟೆ ಇತ್ಯಾದಿಗಳಿಗೆ ತುತ್ತಾಗಿ, ಅಸಹಜ ಸಾವನ್ನಪ್ಪುತ್ತಿರುವುದು ಕಳವಳಕಾರಿ.
ಒಂದೆಡೆ ಕಾಡು ಪ್ರಾಣಿಗಳ ಸಾವು, ಮತ್ತೊಂದೆಡೆ ಇವುಗಳ ದಾಳಿಯಿಂದ ರೈತರ ಆಸ್ತಿ-ಪಾಸ್ತಿ ನಷ್ಟ ಹಾಗೂ ಜನ-ಜಾನುವಾರುಗಳಿಗೆ ರಕ್ಷಣೆ ಇಲ್ಲದಿರುವುದು ಎರಡೂ ಆತಂಕದ ವಿದ್ಯಮಾನಗಳು. ಇಷ್ಟೆಲ್ಲಾ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇದು ವಿಷಾದನೀಯ.