<p><strong>ಅಗತ್ಯ ಬಿದ್ದರೆ ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್ ಸಿದ್ಧ: ಎಸ್ಸೆನ್ </strong><br /> ನವದೆಹಲಿ, ಏ. 24– ರಾಷ್ಟ್ರ ಮತ್ತು ಪ್ರಜಾಸತ್ತೆಯ ಹಿತದೃಷ್ಟಿಯಿಂದ ಅಗತ್ಯವಾದರೆ ಸಮ್ಮಿಶ್ರ ಸರ್ಕಾರಗಳನ್ನು ರಚಿಸಲು ಕಾಂಗ್ರೆಸ್ ಹಿಂತೆಗೆಯುವುದಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು.</p>.<p>ಪ್ರೆಸ್ಕ್ಲಬ್ಬಿನ ಭೋಜನಕೂಟದಲ್ಲಿ ಮಾತನಾಡುತ್ತಿದ್ದ ಎಸ್ಸೆನ್ ಅವರು ಕೇಂದ್ರದಲ್ಲೂ ಅಂತಹ ಸಮ್ಮಿಶ್ರ ಸರ್ಕಾರದ ಸಾಧ್ಯತೆಯನ್ನು ತಳ್ಳಿ ಹಾಕಲಿಲ್ಲ.</p>.<p><strong>ಅನ್ನಪೂರ್ಣೆ ಈ ವಸುಂಧರೆ </strong><br /> ನವದೆಹಲಿ, ಏ. 24– ಮಾನವ ಕುಲಕ್ಕೆಲ್ಲ ಅನ್ನ ನೀಡುವ ಶಕ್ತಿ ಈ ಭೂಮಿಗೆ ಇದೆ ಎಂಬುದು ರಷ್ಯದ ವಿಜ್ಞಾನಿಗಳ ನಂಬಿಕೆ. ಜಗತ್ತಿನಾದ್ಯಂತ ಕ್ರೂರ ಕ್ಷಾಮ ತಲೆದೋರುವುದೆಂಬ ಕೆಲ ಅಮೆರಿಕನ್ ವಿಜ್ಞಾನಿಗಳ ಮಾತಿನಲ್ಲಿ ಅವರಿಗೆ ನಂಬಿಕೆ ಇಲ್ಲ.</p>.<p>ಜೀವನದ ಸಂಪನ್ಮೂಲಗಳನ್ನು ಹೆಚ್ಚಿಸಲು ವಿಜ್ಞಾನಕ್ಕೆ ಅಪಾರ ಅವಕಾಶವಿದೆ ಎಂಬುದು ಈ ಆಶಾವಾದಿ ವಿಜ್ಞಾನಿಗಳ ಭಾವನೆ. ಒಟ್ಟು ಭೂ ಪ್ರದೇಶದ ಶೇಕಡ 1 ರಷ್ಟು ಭಾಗದಲ್ಲಿ ಮಾತ್ರ ಈಗ ಸಾಗುವಳಿ ಮಾಡಲಾಗುತ್ತಿದೆ.</p>.<p><strong>ಕೃಷ್ಣಾ ವಿವಾದ: ಮುಖ್ಯಮಂತ್ರಿಗಳಿಗೆ ಪ್ರಧಾನಿ ಪತ್ರ</strong><br /> ಹೈದರಾಬಾದ್, ಏ. 24– ಕೃಷ್ಣಾ ನೀರು ವಿವಾದದ ಬಗ್ಗೆ ಆಂಧ್ರ, ಮೈಸೂರು, ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮಾತುಕತೆ ನಡೆಸುವರು, ವಿವಾದವನ್ನು ಮಾತುಕತೆ ಮೂಲಕ ಮುಕ್ತಾಯಗೊಳಿಸುವ ಯತ್ನವಿದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಗತ್ಯ ಬಿದ್ದರೆ ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್ ಸಿದ್ಧ: ಎಸ್ಸೆನ್ </strong><br /> ನವದೆಹಲಿ, ಏ. 24– ರಾಷ್ಟ್ರ ಮತ್ತು ಪ್ರಜಾಸತ್ತೆಯ ಹಿತದೃಷ್ಟಿಯಿಂದ ಅಗತ್ಯವಾದರೆ ಸಮ್ಮಿಶ್ರ ಸರ್ಕಾರಗಳನ್ನು ರಚಿಸಲು ಕಾಂಗ್ರೆಸ್ ಹಿಂತೆಗೆಯುವುದಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು.</p>.<p>ಪ್ರೆಸ್ಕ್ಲಬ್ಬಿನ ಭೋಜನಕೂಟದಲ್ಲಿ ಮಾತನಾಡುತ್ತಿದ್ದ ಎಸ್ಸೆನ್ ಅವರು ಕೇಂದ್ರದಲ್ಲೂ ಅಂತಹ ಸಮ್ಮಿಶ್ರ ಸರ್ಕಾರದ ಸಾಧ್ಯತೆಯನ್ನು ತಳ್ಳಿ ಹಾಕಲಿಲ್ಲ.</p>.<p><strong>ಅನ್ನಪೂರ್ಣೆ ಈ ವಸುಂಧರೆ </strong><br /> ನವದೆಹಲಿ, ಏ. 24– ಮಾನವ ಕುಲಕ್ಕೆಲ್ಲ ಅನ್ನ ನೀಡುವ ಶಕ್ತಿ ಈ ಭೂಮಿಗೆ ಇದೆ ಎಂಬುದು ರಷ್ಯದ ವಿಜ್ಞಾನಿಗಳ ನಂಬಿಕೆ. ಜಗತ್ತಿನಾದ್ಯಂತ ಕ್ರೂರ ಕ್ಷಾಮ ತಲೆದೋರುವುದೆಂಬ ಕೆಲ ಅಮೆರಿಕನ್ ವಿಜ್ಞಾನಿಗಳ ಮಾತಿನಲ್ಲಿ ಅವರಿಗೆ ನಂಬಿಕೆ ಇಲ್ಲ.</p>.<p>ಜೀವನದ ಸಂಪನ್ಮೂಲಗಳನ್ನು ಹೆಚ್ಚಿಸಲು ವಿಜ್ಞಾನಕ್ಕೆ ಅಪಾರ ಅವಕಾಶವಿದೆ ಎಂಬುದು ಈ ಆಶಾವಾದಿ ವಿಜ್ಞಾನಿಗಳ ಭಾವನೆ. ಒಟ್ಟು ಭೂ ಪ್ರದೇಶದ ಶೇಕಡ 1 ರಷ್ಟು ಭಾಗದಲ್ಲಿ ಮಾತ್ರ ಈಗ ಸಾಗುವಳಿ ಮಾಡಲಾಗುತ್ತಿದೆ.</p>.<p><strong>ಕೃಷ್ಣಾ ವಿವಾದ: ಮುಖ್ಯಮಂತ್ರಿಗಳಿಗೆ ಪ್ರಧಾನಿ ಪತ್ರ</strong><br /> ಹೈದರಾಬಾದ್, ಏ. 24– ಕೃಷ್ಣಾ ನೀರು ವಿವಾದದ ಬಗ್ಗೆ ಆಂಧ್ರ, ಮೈಸೂರು, ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮಾತುಕತೆ ನಡೆಸುವರು, ವಿವಾದವನ್ನು ಮಾತುಕತೆ ಮೂಲಕ ಮುಕ್ತಾಯಗೊಳಿಸುವ ಯತ್ನವಿದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>