<p><strong>ಭಾನುವಾರ, 4-9-1961</strong><br /> <br /> <strong>ಉಭಯ ಜರ್ಮನಿಗಳ ನಡುವೆ ಒಪ್ಪಂದ ಆದಲ್ಲಿ ಮಾತ್ರ ಜರ್ಮನ್ ಏಕೀಕರಣ ಸಾಧ್ಯ</strong><br /> <strong>ಬೆಲ್ಗ್ರೇಡ್, ಸೆ. </strong>3 - ಎರಡು ಜರ್ಮನಿಗಳಲ್ಲಿ ಅಸ್ತಿತ್ವವನ್ನು ಒಪ್ಪಿಕೊಳ್ಳುವುದರಿಂದ ಅವುಗಳಿಗೆ ರಾಜತಾಂತ್ರಿಕ ಮನ್ನಣೆಯನ್ನು ನೀಡಿದಂತಾಗಲಿಲ್ಲವೆಂದು ಭಾರತದ ಪ್ರಧಾನ ಮಂತ್ರಿ ನೆಹರೂ ಅವರು ನಿನ್ನೆ ರಾತ್ರಿ ಇಲ್ಲಿ ತಿಳಿಸಿದರು.<br /> <br /> ಭಾರತದ ಪತ್ರಿಕೋದ್ಯೋಗಿಗಳನ್ನುದ್ದೇಶಿಸಿ ಮಾತನಾಡುತ್ತ ಅವರು ತಟಸ್ಥ ರಾಷ್ಟ್ರಗಳ ಶೃಂಗಸಮ್ಮೇಳನದ ಪೂರ್ಣಾಧಿವೇಶನದಲ್ಲಿ ತಾವು ಮಾಡಿದ ಭಾಷಣವನ್ನು ವಿಶದಿಕರಿಸಿದರು. `ಎರಡು ಜರ್ಮನಿಗಳಿರುವ ವಾಸ್ತವ ಸಂಗತಿಯನ್ನು ಮನಗಾಣದೆ ನಾವು ಬರ್ಲಿನ್ ಸಮಸ್ಯೆಯನ್ನು ಬಗೆಹರಿಸುವಂತಿಲ್ಲ~ ಎಂದು ಅವರು ಹೇಳಿದರು.<br /> <br /> <strong>ಮಾದಕ ವಸ್ತು ಸೇವನೆ ನಿಷೇಧಕ್ಕೆ ಕರೆ<br /> ನವದೆಹಲಿ, ಸೆ. 3</strong> - ಮಾದಕ ಪದಾರ್ಥಗಳ ಸೇವನೆಯನ್ನು ಶಾಸನ ಮಾಡುವುದರ ಮೂಲಕ ನಿಷೇಧಿಸುವಂತೆ ಕೇಂದ್ರ ಅರ್ಥಮಂತ್ರಿ ಶ್ರೀ ಮೊರಾರ್ಜಿ ದೇಸಾಯಿ ಅವರು ರಾಜ್ಯ ಸರ್ಕಾರಗಳಿಗೆ ಒತ್ತಾಯ ಪಡಿಸಿದರು.<br /> <br /> ವಿಜ್ಞಾನ ಭವನದಲ್ಲಿ ಅಖಿಲ ಭಾರತ ಪಾನನಿರೋಧ ಕಾರ್ಯಕರ್ತರ ಪ್ರಥಮ ಅಧಿವೇಶನವನ್ನು ಶ್ರೀ ದೇಸಾಯಿ ಅವರು ಉದ್ಘಾಟಿಸುತ್ತಾ, `ಪಾನನಿರೋಧ ಜಾರಿಗೆ ತಂದಿರುವುದರಿಂದ ಆದಾಯ ಕಡಿಮೆಯಾಗಿ ತೊಂದರೆಗೊಳಗಾಗಿರುವ ರಾಜ್ಯಗಳಲ್ಲಿ ಐದು ವರ್ಷಗಳ ಕಾಲ ನಷ್ಟದಲ್ಲಿ ಪಾಲುಗೊಳ್ಳಲು ಕೇಂದ್ರ ಸರ್ಕಾರ ಸಿದ್ಧವಿದೆ~ ಎಂಬುದಾಗಿ ತಿಳಿಸಿದರು.<br /> <br /> <strong>ತಾರಾಸಿಂಗ್ರಿಗೆ ಅತೀವ ನಿಶ್ಯಕ್ತಿ<br /> ಅಮೃತಸರ, ಸೆ. 3</strong> - ಪಂಜಾಬಿ ಸುಬಾ ರಚನೆಗಾಗಿ ಒತ್ತಾಯ ಮಾಡಲು ಉಪವಾಸ ಮಾಡುತ್ತಿರುವ ತಾರಾಸಿಂಗರ ತೂಕ ಈ ವರೆಗೆ ಒಟ್ಟು 22 ಪೌಂಡ್ ಕಡಿಮೆಯಾಗಿದೆ. ಅವರ ತೂಕ ಈಗ 150 ಪೌಂಡ್, ಉಪವಾಸ ಆರಂಭಿಸಿ ಇಂದಿಗೆ 20 ದಿನವಾಯಿತು.<br /> <br /> ಅವರು ನಿನ್ನೆ ರಾತ್ರಿ ಸುಖವಾಗಿ ನಿದ್ರಿಸಿಲ್ಲವೆಂದು ವೈದ್ಯರು ಇಂದು ಸಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈವರೆಗೆ ಅವರ ಪಾದಗಳಿಗೆ ಜೋಮು ಹಿಡಿಯುತ್ತಿತ್ತು. ಈಗ ಮೊಣಕಾಲಿನವರೆಗೂ ಜೋಮು ಹಿಡಿಯುತ್ತಿದೆ. ಅವರು ಬಹಳ ನಿಶ್ಯಕ್ತರಾಗಿದ್ದಾರೆ.<br /> <br /> <strong>ಕೋಮು ಆಧಾರದ ಮೇಲೆ ಮತವೀಯಬೇಡಿ <br /> ಜೆಂಷೆಡ್ಪುರ, ಸೆ. 3</strong> - ಸ್ಪರ್ಧಿಯು ಯಾವ ಪಕ್ಷಕ್ಕೆ ಸೇರಿದವನೆಂಬುದನ್ನು ಪರಿಗಣಿಸಿ ಮತವೀಯಬೇಕೆಂದೂ ಮತ ಅಥವಾ ಕೋಮು ಆಧಾರದ ಮೇಲೆ ಕೊಡಕೂಡದೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿಯವರು ಮತದಾರರಿಗೆ ಮನವಿ ಮಾಡಿದರು.<br /> <br /> ನಗರಕ್ಕೆ ಒಂದು ದಿನದ ಭೇಟಿಗಾಗಿ ನಿನ್ನೆ ಇಲ್ಲಿಗೆ ಆಗಮಿಸಿದ ಶ್ರೀ ರೆಡ್ಡಿಯವರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾನುವಾರ, 4-9-1961</strong><br /> <br /> <strong>ಉಭಯ ಜರ್ಮನಿಗಳ ನಡುವೆ ಒಪ್ಪಂದ ಆದಲ್ಲಿ ಮಾತ್ರ ಜರ್ಮನ್ ಏಕೀಕರಣ ಸಾಧ್ಯ</strong><br /> <strong>ಬೆಲ್ಗ್ರೇಡ್, ಸೆ. </strong>3 - ಎರಡು ಜರ್ಮನಿಗಳಲ್ಲಿ ಅಸ್ತಿತ್ವವನ್ನು ಒಪ್ಪಿಕೊಳ್ಳುವುದರಿಂದ ಅವುಗಳಿಗೆ ರಾಜತಾಂತ್ರಿಕ ಮನ್ನಣೆಯನ್ನು ನೀಡಿದಂತಾಗಲಿಲ್ಲವೆಂದು ಭಾರತದ ಪ್ರಧಾನ ಮಂತ್ರಿ ನೆಹರೂ ಅವರು ನಿನ್ನೆ ರಾತ್ರಿ ಇಲ್ಲಿ ತಿಳಿಸಿದರು.<br /> <br /> ಭಾರತದ ಪತ್ರಿಕೋದ್ಯೋಗಿಗಳನ್ನುದ್ದೇಶಿಸಿ ಮಾತನಾಡುತ್ತ ಅವರು ತಟಸ್ಥ ರಾಷ್ಟ್ರಗಳ ಶೃಂಗಸಮ್ಮೇಳನದ ಪೂರ್ಣಾಧಿವೇಶನದಲ್ಲಿ ತಾವು ಮಾಡಿದ ಭಾಷಣವನ್ನು ವಿಶದಿಕರಿಸಿದರು. `ಎರಡು ಜರ್ಮನಿಗಳಿರುವ ವಾಸ್ತವ ಸಂಗತಿಯನ್ನು ಮನಗಾಣದೆ ನಾವು ಬರ್ಲಿನ್ ಸಮಸ್ಯೆಯನ್ನು ಬಗೆಹರಿಸುವಂತಿಲ್ಲ~ ಎಂದು ಅವರು ಹೇಳಿದರು.<br /> <br /> <strong>ಮಾದಕ ವಸ್ತು ಸೇವನೆ ನಿಷೇಧಕ್ಕೆ ಕರೆ<br /> ನವದೆಹಲಿ, ಸೆ. 3</strong> - ಮಾದಕ ಪದಾರ್ಥಗಳ ಸೇವನೆಯನ್ನು ಶಾಸನ ಮಾಡುವುದರ ಮೂಲಕ ನಿಷೇಧಿಸುವಂತೆ ಕೇಂದ್ರ ಅರ್ಥಮಂತ್ರಿ ಶ್ರೀ ಮೊರಾರ್ಜಿ ದೇಸಾಯಿ ಅವರು ರಾಜ್ಯ ಸರ್ಕಾರಗಳಿಗೆ ಒತ್ತಾಯ ಪಡಿಸಿದರು.<br /> <br /> ವಿಜ್ಞಾನ ಭವನದಲ್ಲಿ ಅಖಿಲ ಭಾರತ ಪಾನನಿರೋಧ ಕಾರ್ಯಕರ್ತರ ಪ್ರಥಮ ಅಧಿವೇಶನವನ್ನು ಶ್ರೀ ದೇಸಾಯಿ ಅವರು ಉದ್ಘಾಟಿಸುತ್ತಾ, `ಪಾನನಿರೋಧ ಜಾರಿಗೆ ತಂದಿರುವುದರಿಂದ ಆದಾಯ ಕಡಿಮೆಯಾಗಿ ತೊಂದರೆಗೊಳಗಾಗಿರುವ ರಾಜ್ಯಗಳಲ್ಲಿ ಐದು ವರ್ಷಗಳ ಕಾಲ ನಷ್ಟದಲ್ಲಿ ಪಾಲುಗೊಳ್ಳಲು ಕೇಂದ್ರ ಸರ್ಕಾರ ಸಿದ್ಧವಿದೆ~ ಎಂಬುದಾಗಿ ತಿಳಿಸಿದರು.<br /> <br /> <strong>ತಾರಾಸಿಂಗ್ರಿಗೆ ಅತೀವ ನಿಶ್ಯಕ್ತಿ<br /> ಅಮೃತಸರ, ಸೆ. 3</strong> - ಪಂಜಾಬಿ ಸುಬಾ ರಚನೆಗಾಗಿ ಒತ್ತಾಯ ಮಾಡಲು ಉಪವಾಸ ಮಾಡುತ್ತಿರುವ ತಾರಾಸಿಂಗರ ತೂಕ ಈ ವರೆಗೆ ಒಟ್ಟು 22 ಪೌಂಡ್ ಕಡಿಮೆಯಾಗಿದೆ. ಅವರ ತೂಕ ಈಗ 150 ಪೌಂಡ್, ಉಪವಾಸ ಆರಂಭಿಸಿ ಇಂದಿಗೆ 20 ದಿನವಾಯಿತು.<br /> <br /> ಅವರು ನಿನ್ನೆ ರಾತ್ರಿ ಸುಖವಾಗಿ ನಿದ್ರಿಸಿಲ್ಲವೆಂದು ವೈದ್ಯರು ಇಂದು ಸಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈವರೆಗೆ ಅವರ ಪಾದಗಳಿಗೆ ಜೋಮು ಹಿಡಿಯುತ್ತಿತ್ತು. ಈಗ ಮೊಣಕಾಲಿನವರೆಗೂ ಜೋಮು ಹಿಡಿಯುತ್ತಿದೆ. ಅವರು ಬಹಳ ನಿಶ್ಯಕ್ತರಾಗಿದ್ದಾರೆ.<br /> <br /> <strong>ಕೋಮು ಆಧಾರದ ಮೇಲೆ ಮತವೀಯಬೇಡಿ <br /> ಜೆಂಷೆಡ್ಪುರ, ಸೆ. 3</strong> - ಸ್ಪರ್ಧಿಯು ಯಾವ ಪಕ್ಷಕ್ಕೆ ಸೇರಿದವನೆಂಬುದನ್ನು ಪರಿಗಣಿಸಿ ಮತವೀಯಬೇಕೆಂದೂ ಮತ ಅಥವಾ ಕೋಮು ಆಧಾರದ ಮೇಲೆ ಕೊಡಕೂಡದೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿಯವರು ಮತದಾರರಿಗೆ ಮನವಿ ಮಾಡಿದರು.<br /> <br /> ನಗರಕ್ಕೆ ಒಂದು ದಿನದ ಭೇಟಿಗಾಗಿ ನಿನ್ನೆ ಇಲ್ಲಿಗೆ ಆಗಮಿಸಿದ ಶ್ರೀ ರೆಡ್ಡಿಯವರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>