ನಕ್ಸಲರ ವಿರುದ್ಧ ಕಾರ್ಯಾಚರಣೆ: ಒಬ್ಬನ ಹತ್ಯೆ, 284 ಜನರ ಬಂಧನ
ಕಲ್ಕತ್ತಾ, ಜುಲೈ 14: ಪಶ್ಚಿಮ ಬಂಗಾಳದ ಖಾರಿಬಾರಿ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಪೊಲೀಸರು ನಡೆಸಿದ ಎರಡನೇ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಒಬ್ಬ ನಕ್ಸಲ್ವಾದಿಯನ್ನು ಕೊಂದು, 284 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ 54 ಜನರು ಗಾಯಗೊಂಡಿದ್ದಾರೆ. ಬಂಧಿತರಲ್ಲಿ ಮುಂಚೂಣಿ ನಕ್ಸಲ್ ನಾಯಕ ಶಿವಚರಣ್ ಪಹಾರಿಯಾ ಸೇರಿದ್ದಾರೆ.