<p><strong>ನ್ಯಾಯ ಮಂಡಲಿರಚಿಸಲು ಒತ್ತಾಯ</strong><br /> <br /> ಬೆಂಗಳೂರು, ಮಾ. 15 - ಕೃಷ್ಣ ಮತ್ತು ಗೋದಾವರಿ ನೀರನ್ನು ಬಳಸುವ ಸಂಬಂಧದಲ್ಲಿ ಅಥವ ಆ ನೀರಿನ ಬಗ್ಗೆ ವಿವಿಧ ರಾಜ್ಯಗಳಿಗಿರುವ ಹಕ್ಕುಗಳ ಸಂಬಂಧದಲ್ಲಿ ತೀರ್ಪು ಕೊಡಲು ಗುಲ್ಹಾತಿ ಆಯೋಗಕ್ಕೆ ಅಧಿಕಾರವಿಲ್ಲದಿರುವುದರಿಂದ ಈ ಸಂಬಂಧದಲ್ಲಿ ಸಮರ್ಪಕವಾದ ನ್ಯಾಯ ನಿರ್ಣಯವಾಗುವಂತೆ ಮಾಡಲು ನ್ಯಾಯ ಮಂಡಳಿಯನ್ನು ರಚಿಸುವಂತೆ ಮೈಸೂರು ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಪ್ರಾರ್ಥಿಸಿದೆ ಎಂದು ರಾಜ್ಯಪಾಲ ಜಯಚಾಮರಾಜ ಒಡೆಯರ್ರವರು ಇಂದು ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ತಿಳಿಸಿದರು.<br /> <br /> <strong>ಅಧಿವೇಶನ ಆರಂಭ:ಸದಸ್ಯರಿಂದ ಪ್ರತಿಜ್ಞೆ<br /> <br /> </strong>ಬೆಂಗಳೂರು, ಮಾ. 15 - ರಾಜ್ಯದ ನೂತನ ವಿಧಾನ ಸಭೆಯ ಸದಸ್ಯರು ಇಂದು ಭಾರತದ ಸಂವಿಧಾನ ವಿಷಯದಲ್ಲಿ ಶ್ರದ್ಧೆಯಿಂದಲೂ, ನಿಷ್ಠೆಯಿಂದಲೂ ಕೂಡಿರುವುದಾಗಿಯೂ, ತಾವು ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುವುದಾಗಿಯೂ ಪ್ರಮಾಣ ವಚನವನ್ನು ಸ್ವೀಕರಿಸಿ ಇನ್ನೈದು ವರ್ಷಗಳ ಕಾಲ ರಾಜ್ಯದ ಆಡಳಿತವನ್ನು ನಿರ್ವಹಿಸಲು ಸಿದ್ಧವಾದರು.<br /> <br /> ಸಭೆಯ ಬಹು ಮಂದಿ ಸದಸ್ಯರು `ಭಗವಂತನ ಹೆಸರಿನ ಮೇಲೂ~ ಕೆಲವು ಸದಸ್ಯರು `ಸತ್ಯ ನಿಷ್ಠೆ~ ಹೆಸರಿನಲ್ಲಿ ಪ್ರತಿಜ್ಞಾ ವಚನವನ್ನು ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯಾಯ ಮಂಡಲಿರಚಿಸಲು ಒತ್ತಾಯ</strong><br /> <br /> ಬೆಂಗಳೂರು, ಮಾ. 15 - ಕೃಷ್ಣ ಮತ್ತು ಗೋದಾವರಿ ನೀರನ್ನು ಬಳಸುವ ಸಂಬಂಧದಲ್ಲಿ ಅಥವ ಆ ನೀರಿನ ಬಗ್ಗೆ ವಿವಿಧ ರಾಜ್ಯಗಳಿಗಿರುವ ಹಕ್ಕುಗಳ ಸಂಬಂಧದಲ್ಲಿ ತೀರ್ಪು ಕೊಡಲು ಗುಲ್ಹಾತಿ ಆಯೋಗಕ್ಕೆ ಅಧಿಕಾರವಿಲ್ಲದಿರುವುದರಿಂದ ಈ ಸಂಬಂಧದಲ್ಲಿ ಸಮರ್ಪಕವಾದ ನ್ಯಾಯ ನಿರ್ಣಯವಾಗುವಂತೆ ಮಾಡಲು ನ್ಯಾಯ ಮಂಡಳಿಯನ್ನು ರಚಿಸುವಂತೆ ಮೈಸೂರು ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಪ್ರಾರ್ಥಿಸಿದೆ ಎಂದು ರಾಜ್ಯಪಾಲ ಜಯಚಾಮರಾಜ ಒಡೆಯರ್ರವರು ಇಂದು ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ತಿಳಿಸಿದರು.<br /> <br /> <strong>ಅಧಿವೇಶನ ಆರಂಭ:ಸದಸ್ಯರಿಂದ ಪ್ರತಿಜ್ಞೆ<br /> <br /> </strong>ಬೆಂಗಳೂರು, ಮಾ. 15 - ರಾಜ್ಯದ ನೂತನ ವಿಧಾನ ಸಭೆಯ ಸದಸ್ಯರು ಇಂದು ಭಾರತದ ಸಂವಿಧಾನ ವಿಷಯದಲ್ಲಿ ಶ್ರದ್ಧೆಯಿಂದಲೂ, ನಿಷ್ಠೆಯಿಂದಲೂ ಕೂಡಿರುವುದಾಗಿಯೂ, ತಾವು ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುವುದಾಗಿಯೂ ಪ್ರಮಾಣ ವಚನವನ್ನು ಸ್ವೀಕರಿಸಿ ಇನ್ನೈದು ವರ್ಷಗಳ ಕಾಲ ರಾಜ್ಯದ ಆಡಳಿತವನ್ನು ನಿರ್ವಹಿಸಲು ಸಿದ್ಧವಾದರು.<br /> <br /> ಸಭೆಯ ಬಹು ಮಂದಿ ಸದಸ್ಯರು `ಭಗವಂತನ ಹೆಸರಿನ ಮೇಲೂ~ ಕೆಲವು ಸದಸ್ಯರು `ಸತ್ಯ ನಿಷ್ಠೆ~ ಹೆಸರಿನಲ್ಲಿ ಪ್ರತಿಜ್ಞಾ ವಚನವನ್ನು ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>