ಪೂರ್ವ ಜರ್ಮನಿಯಲ್ಲಿ ಭಯೋತ್ಪಾದನೆ
ಬರ್ಲಿನ್, ಸೆ. 4 - ಪಶ್ಚಿಮ ಬರ್ಲಿನ್ನ ಮೇಯರ್ ಹೆರ್ವಿಲ್ಲಿ ಬ್ರಾಂಟ್ರವರು ಇಂದು ಇಲ್ಲಿ ಮಾತನಾಡುತ್ತಾ ಪೂರ್ವ ಜರ್ಮನಿಯಲ್ಲಿ ಭಯೋತ್ಪಾದಕರ ಪ್ರಭುತ್ವವು ಆರಂಭವಾಗಿದೆಯೆಂದೂ, ಜನರನ್ನು ಬೇರೆಡೆಗೆ ಒಯ್ದು, ಬಲವಂತ ದುಡಿಮೆ ಶಿಬಿರಗಳಲ್ಲಿಡಲು ಯೋಜನೆ ರೂಪಿಸಲಾಗುತ್ತಿದೆಯೆಂದು ನುಡಿದರು.
ಪಿ.ಎಸ್.ಪಿ. ತಯಾರಿಸಿದ ಮುನ್ಸೀಫ್ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು, ಸೆ. 4 - ಮೈಸೂರು ಪಬ್ಲಿಕ್ ಸರ್ವಿಸ್ ಕಮಿಷನ್ 1961ರ ಮೇ 22 ರಂದು ರಾಜ್ಯದ ನ್ಯಾಯಾಂಗ ಸರ್ವಿಸ್ನಲ್ಲಿ ನೇಮಕವಾಗಲು ಅರ್ಹರಾದ, ಯೋಗ್ಯತಾನುಕ್ರಮವಾಗಿ ತಯಾರಿಸಿದ 52 ಮಂದಿ ಯಶಸ್ವೀ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ಹೊರಡಿಸಿದ ಸೂಚನೆಯನ್ನು ಇಂದು ಹೈಕೋರ್ಟ್ ರದ್ದುಗೊಳಿಸಿತು.