ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ನ್ಯಾಯದ ಜನನಾಯಕ ಕರ್ಪೂರಿ ಠಾಕೂರ್ 100ನೇ ಜನ್ಮದಿನ: ಭಾರತ ರತ್ನದ ಗೌರವ

ಹಿರಿಯ ರಾಜಕೀಯ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ, ಜನ ನಾಯಕ ಕರ್ಪೂರಿ ಠಾಕೂರ್ ಅವರ 100ನೇ ಹುಟ್ಟುಹಬ್ಬ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೇಖನ
Published 24 ಜನವರಿ 2024, 0:30 IST
Last Updated 24 ಜನವರಿ 2024, 0:30 IST
ಅಕ್ಷರ ಗಾತ್ರ

ಇಂದು ಜನ ನಾಯಕ ಕರ್ಪೂರಿ ಠಾಕೂರ್ ಅವರ ಜನ್ಮ ಶತಮಾನೋತ್ಸವ. ಅವರ ನಿರಂತರ ಸಾಮಾಜಿಕ ನ್ಯಾಯದ ಅನ್ವೇಷಣೆಯು ಕೋಟ್ಯಂತರ ಜನರ ಜೀವನದಲ್ಲಿ ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸಿತು. ಕರ್ಪೂರಿ ಅವರನ್ನು ಭೇಟಿಯಾಗುವ ಅವಕಾಶ ನನಗೆ ಎಂದೂ ಸಿಕ್ಕಿರಲಿಲ್ಲ. ಆದರೆ, ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಕೈಲಾಸಪತಿ ಮಿಶ್ರಾ ಅವರಿಂದ ನಾನು ಅವರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಅವರು ಸಮಾಜದ ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಒಂದಾದ ನಾಯ್ ಸಮಾಜಕ್ಕೆ ಸೇರಿದವರು. ಹಲವಾರು ಅಡೆತಡೆಗಳನ್ನು ಮೆಟ್ಟಿ ನಿಂತು ಸಮಾಜ ಸುಧಾರಣೆಗೆ ಶ್ರಮಿಸಿದರು.

ಜನ ನಾಯಕ ಕಪೂರ್ ಠಾಕೂರ್ ಅವರ ಜೀವನವು ಸರಳತೆ ಮತ್ತು ಸಾಮಾಜಿಕ ನ್ಯಾಯದ ಅವಳಿ ಆಧಾರ ಸ್ತಂಭಗಳ ಸುತ್ತ ಸುತ್ತುತ್ತದೆ. ಅವರ ಕೊನೆಯ ಉಸಿರು ಇರುವ ತನಕ, ಅವರ ಸರಳ ಜೀವನಶೈಲಿ ಮತ್ತು ವಿನಮ್ರ ಸ್ವಭಾವವು ಸಾಮಾನ್ಯ ಜನರನ್ನು ಆಳವಾಗಿ ಅನುರಣಿಸಿತು. ಅವರ ಸರಳತೆ ಎತ್ತಿ ತೋರಿಸುವ ಹಲವಾರು ಉದಾಹರಣೆಗಳಿವೆ. ತನ್ನ ಮಗಳ ವಿವಾಹ ಸೇರಿದಂತೆ ಯಾವುದೇ ವೈಯಕ್ತಿಕ ವಿಷಯಕ್ಕೆ ತನ್ನ ಸ್ವಂತ ಹಣ ಖರ್ಚು ಮಾಡಲು ಅವರು ಹೇಗೆ ಆದ್ಯತೆ ನೀಡುತ್ತಿದ್ದರು ಎಂಬುದನ್ನು ಅವರೊಂದಿಗೆ ಕೆಲಸ ಮಾಡಿದವರು ನೆನಪಿಸಿಕೊಳ್ಳುತ್ತಾರೆ. ಬಿಹಾರದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜಕೀಯ ನಾಯಕರಿಗಾಗಿ ಕಾಲೋನಿ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಠಾಕೂರ್ ಅವರು ಭೂಮಿ ಅಥವಾ ಹಣ ಯಾವುದನ್ನೂ ತೆಗೆದುಕೊಳ್ಳಲಿಲ್ಲ. 1988ರಲ್ಲಿ ಅವರು ನಿಧನರಾದಾಗ ಹಲವಾರು ನಾಯಕರು ಶ್ರದ್ಧಾಂಜಲಿ ಸಲ್ಲಿಸಲು ಅವರ ಗ್ರಾಮಕ್ಕೆ ತೆರಳಿದ್ದರು. ಅವರ ಮನೆಯ ಸ್ಥಿತಿ ಕಂಡು ಆ ನಾಯಕರು ಕಣ್ಣೀರು ಹಾಕಿದ್ದರು - ಇಷ್ಟು ಎತ್ತರಕ್ಕೆ ಏರಿದ ವ್ಯಕ್ತಿಯೊಬ್ಬರು ಇಷ್ಟೊಂದು ಸರಳವಾದ ಮನೆ ಹೊಂದಲು ಸಾಧ್ಯ ಎಂದು!

ಅವರ ಸರಳತೆಯ ಮತ್ತೊಂದು ಉದಾಹರಣೆ. 1977ರಲ್ಲಿ ಅವರು ಬಿಹಾರದ ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ, ದೆಹಲಿ ಮತ್ತು ಪಟ್ನಾದಲ್ಲಿ ಜನತಾ ಸರ್ಕಾರ ಅಧಿಕಾರದಲ್ಲಿತ್ತು. ಆ ಸಮಯದಲ್ಲಿ ಲೋಕನಾಯಕ ಜೆಪಿ ಅವರ ಜನ್ಮದಿನ ಆಚರಿಸಲು ಜನತಾ ನಾಯಕರು ಪಟ್ನಾದಲ್ಲಿ ಜಮಾಯಿಸಿದ್ದರು. ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರು ಹರಿದ ಕುರ್ತಾದಲ್ಲೇ ನಡೆದಾಡಿದರು. ತಮ್ಮದೇ ಶೈಲಿಯಲ್ಲಿ, ಕರ್ಪೂರಿ ಅವರಿಗೆ ಹೊಸ ಕುರ್ತಾ ಖರೀದಿಸಲು ಸ್ವಲ್ಪ ಹಣ ದೇಣಿಗೆ ನೀಡುವಂತೆ ಚಂದ್ರಶೇಖರ್ ಜನರನ್ನು ಕೇಳಿದರು. ಆದರೆ, ಕರ್ಪೂರಿ ಅವರು ಆ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದರು.

ಜನ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಸಾಮಾಜಿಕ ನ್ಯಾಯ ಅತ್ಯಂತ ಪ್ರಿಯವಾಗಿತ್ತು. ಅವರ ರಾಜಕೀಯ ಪ್ರಯಾಣವು ಸಂಪನ್ಮೂಲಗಳನ್ನು ನ್ಯಾಯಯುತವಾಗಿ ವಿತರಿಸುವ ಸಮಾಜವನ್ನು ರೂಪಿಸುವ ಸ್ಮರಣೀಯ ಪ್ರಯತ್ನಗಳಿಂದ ಗುರುತಿಸಲ್ಪಟ್ಟಿದೆ. ಪ್ರತಿಯೊಬ್ಬರೂ ತಮ್ಮ ಸಾಮಾಜಿಕ ಸ್ಥಾನಮಾನ ಲೆಕ್ಕಿಸದೆ ಅವಕಾಶಗಳಿಗೆ ಪ್ರವೇಶ ಹೊಂದಿದ್ದರು. ಆದರೆ ಠಾಕೂರ್ ಭಾರತೀಯ ಸಮಾಜವನ್ನು ಕಾಡುತ್ತಿರುವ ವ್ಯವಸ್ಥಿತ ಅಸಮಾನತೆಗಳನ್ನು ಪರಿಹರಿಸಲು ಬಯಸಿದ್ದರು.

ಅವರ ಆದರ್ಶಗಳಿಗೆ ಅವರ ಬದ್ಧತೆ ಎಷ್ಟಿತ್ತೆಂದರೆ, ಕಾಂಗ್ರೆಸ್ ಪಕ್ಷವು ಸರ್ವವ್ಯಾಪಿಯಾಗಿದ್ದ ಯುಗದಲ್ಲಿ ಜೀವಿಸುತ್ತಿದ್ದರೂ, ಅವರು ಸ್ಪಷ್ಟವಾಗಿ ಕಾಂಗ್ರೆಸ್ ವಿರೋಧಿ ಧೋರಣೆ ಅನುಸರಿಸಿದರು.  ಏಕೆಂದರೆ ಕಾಂಗ್ರೆಸ್ ತನ್ನ ಸ್ಥಾಪನಾ ತತ್ವಗಳಿಂದ ವಿಮುಖವಾಗಿದೆ ಎಂದು ಅವರಿಗೆ ಬಹಳ ಬೇಗ ಮನವರಿಕೆಯಾಯಿತು.

ಅವರ ಚುನಾವಣಾ ವೃತ್ತಿಜೀವನವು 1950ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು. ಅಂದಿನಿಂದ ಅವರು ಶಾಸಕಾಂಗ ಕೊಠಡಿಗಳ ಶಕ್ತಿಯಾದರು, ಕಾರ್ಮಿಕ ವರ್ಗ, ಕಾರ್ಮಿಕರು, ಸಣ್ಣ ರೈತರು ಮತ್ತು ಯುವಕರ ಹೋರಾಟಗಳಿಗೆ ಶಕ್ತಿಯುತವಾಗಿ ಧ್ವನಿ ನೀಡಿದರು. ಶಿಕ್ಷಣ ಅವರ ಹೃದಯಕ್ಕೆ ಬಹಳ ಹತ್ತಿರವಾದ ವಿಷಯವಾಗಿತ್ತು. ತಮ್ಮ ರಾಜಕೀಯ ಜೀವನದುದ್ದಕ್ಕೂ ಅವರು ಬಡವರಿಗೆ ಶಿಕ್ಷಣ ಸೌಲಭ್ಯಗಳನ್ನು ಸುಧಾರಿಸಲು ಶ್ರಮಿಸಿದರು. ಅವರು ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣದ ಪ್ರತಿಪಾದಕರಾಗಿದ್ದರು, ಇದರಿಂದ ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳ ಜನರು ಏಣಿ ಏರಲು ಮತ್ತು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಅವರು ಮುಖ್ಯಮಂತ್ರಿಯಾಗಿ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

ಪ್ರಜಾಪ್ರಭುತ್ವ, ಚರ್ಚೆ ಮತ್ತು ಸಮಾಲೋಚನೆ(ಸಂವಾದ) ಕರ್ಪೂರಿ ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿತ್ತು. ಚಿಕ್ಕವಯಸ್ಸಿನಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮಗ್ನರಾಗಿದ್ದಾಗ ಕಂಡ ಈ ಚೈತನ್ಯ ಮತ್ತೆ ತುರ್ತು ಪರಿಸ್ಥಿತಿ ವಿರೋಧಿಸಿದಾಗಲೂ ಕಾಣಿಸಿತು. ಅವರ ವಿಶಿಷ್ಟ ದೃಷ್ಟಿಕೋನಗಳನ್ನು ಜೆಪಿ, ಡಾ.  ಲೋಹಿಯಾ ಮತ್ತು ಚರಣ್ ಸಿಂಗ್ ಮುಂತಾದವರು ಮೆಚ್ಚಿಕೊಂಡಿದ್ದರು.

ಬಹುಶಃ ಜನ ನಾಯಕ ಕರ್ಪೂರಿ ಠಾಕೂರ್ ಅವರು ಭಾರತಕ್ಕೆ ನೀಡಿದ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದೆಂದರೆ, ಹಿಂದುಳಿದ ವರ್ಗಗಳಿಗೆ ಅವರು ಅರ್ಹ ಪ್ರಾತಿನಿಧ್ಯ ಮತ್ತು ಅವಕಾಶಗಳನ್ನು ಒದಗಿಸುವ ಭರವಸೆಗಳನ್ನು ಈಡೇರಿಸಲು ಕೈಗೊಂಡ ಕ್ರಮಗಳು. ಹಿಂದುಳಿದ ವರ್ಗಗಳ ಬಲವರ್ಧನೆಗೆ ಕೈಗೊಂಡ ಈ ಕ್ರಮಗಳಿಗೆ ಅವರ ಪಾತ್ರ ದೊಡ್ಡದು. ಅವರ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾದರೂ ಯಾವುದೇ ಒತ್ತಡಕ್ಕೆ ಮಣಿಯಲಿಲ್ಲ. ಒಬ್ಬರ ಜನ್ಮವು ಒಬ್ಬರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ ಎಂಬುದು ಅವರ ಪ್ರತಿಪಾದನೆಯಾಗಿತ್ತು.  ಅವರ ನಾಯಕತ್ವದಲ್ಲಿ, ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುವ ನೀತಿಗಳನ್ನು ಜಾರಿಗೆ ತರಲಾಯಿತು. ಅವರು ಸಮಾಜದ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೂ, ಅವರು ಎಲ್ಲ ವರ್ಗದ ಜನರಿಗಾಗಿ ಕೆಲಸ ಮಾಡಿದರು. ಅವರಲ್ಲಿ ಕಹಿಯ ಯಾವುದೇ ಕುರುಹು ಇರಲಿಲ್ಲ, ಅದು ಅವರನ್ನು ನಿಜವಾಗಿಯೂ ಶ್ರೇಷ್ಠ ನಾಯಕನನ್ನಾಗಿ ಮಾಡಿದೆ.

ಕಳೆದ 10 ವರ್ಷಗಳಲ್ಲಿ, ನಮ್ಮ ಸರ್ಕಾರವು ಪರಿವರ್ತನೀಯ ಸಬಲೀಕರಣದ ಯೋಜನೆಗಳು ಮತ್ತು ನೀತಿಗಳನ್ನು ಜಾರಿಗೆ ತಂದು, ಜನ ನಾಯಕ ಕರ್ಪೂರಿ ಠಾಕೂರ್ ಅವರ ಹಾದಿಯಲ್ಲಿ ಸಾಗಿದೆ. ನಮ್ಮ ರಾಜಕೀಯದ ದೊಡ್ಡ ದುರಂತವೆಂದರೆ, ಕರ್ಪೂರಿ ಅವರಂತಹ ಕೆಲವು ನಾಯಕರನ್ನು ಹೊರತುಪಡಿಸಿ, ಸಾಮಾಜಿಕ ನ್ಯಾಯದ ಕರೆಯನ್ನು ರಾಜಕೀಯ ಘೋಷಣೆಯಾಗಿ ಸೀಮಿತಗೊಳಿಸಲಾಗಿದೆ. ಕರ್ಪೂರಿ ಅವರ ದೃಷ್ಟಿಕೋನದಿಂದ ಪ್ರೇರಿತರಾಗಿ ನಾವು ಅದನ್ನು ಪರಿಣಾಮಕಾರಿ ಆಡಳಿತ ಮಾದರಿಯಾಗಿ ಜಾರಿಗೆ ತಂದಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದ ಹಿಡಿತದಿಂದ ಮುಕ್ತಗೊಳಿಸಿದ ಭಾರತದ ಸಾಧನೆಯ ಬಗ್ಗೆ ಜನ ನಾಯಕ ಕರ್ಪೂರಿ ಠಾಕೂರ್ ಅವರು ಇದ್ದಿದ್ದರೆ ತುಂಬಾ ಹೆಮ್ಮೆಪಡುತ್ತಿದ್ದರು ಎಂದು ನಾನು ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಹೇಳಬಲ್ಲೆ. ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಸುಮಾರು 7 ದಶಕಗಳ ನಂತರ ಮೂಲಭೂತ ಸೌಲಭ್ಯಗಳನ್ನು ನಿರಾಕರಿಸಿದ ಸಮಾಜದ ಅತ್ಯಂತ ಹಿಂದುಳಿದ ವರ್ಗಗಳ ಜನರು ಇವರು. ಅದೇ ಸಮಯದಲ್ಲಿ, ಸಂತೃಪ್ತಿಯ ಕಡೆಗೆ ನಮ್ಮ ಪ್ರಯತ್ನಗಳು- ಪ್ರತಿ ಯೋಜನೆಯು 100% ವ್ಯಾಪ್ತಿ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಸಾಮಾಜಿಕ ಕಲ್ಯಾಣಕ್ಕಾಗಿ ಅವರ ಬದ್ಧತೆಯನ್ನು ಪ್ರತಿಧ್ವನಿಸುತ್ತದೆ. ಇಂದು, ಹಿದುಳಿದ, ಪ.ಜಾ. ಮತ್ತು ಪ.ಪಂ. ಸಮುದಾಯಗಳ ಜನರು ಮುದ್ರಾ ಸಾಲಗಳಿಂದ ಉದ್ಯಮಿಗಳಾಗುತ್ತಿರುವಾಗ, ಇದು ಕರ್ಪೂರಿ ಠಾಕೂರ್ ಅವರ ಆರ್ಥಿಕ ಸ್ವಾತಂತ್ರ್ಯದ ದೃಷ್ಟಿಕೋನವನ್ನು ಪೂರೈಸುತ್ತದೆ. ಅಂತೆಯೇ, ಪ.ಜಾ., ಪ.ಪಂ. ಮತ್ತು ಒಬಿಸಿ ಮೀಸಲಾತಿಯನ್ನು ವಿಸ್ತರಿಸುವ ಸವಲತ್ತು ನಮ್ಮ ಸರ್ಕಾರಕ್ಕೆ ಇತ್ತು. ಕರ್ಪೂರಿ ಜೀ ಅವರು ತೋರಿಸಿದ ಹಾದಿಯಲ್ಲಿ ಕೆಲಸ ಮಾಡುತ್ತಿರುವ ಒಬಿಸಿ ಆಯೋಗವನ್ನು (ಕೆಟ್ಟದಾಗಿ ಕಾಂಗ್ರೆಸ್ ವಿರೋಧಿಸಿತು) ಸ್ಥಾಪಿಸಿದ ಗೌರವವೂ ನಮಗಿದೆ. ನಮ್ಮ ಪ್ರಧಾನ ಮಂತ್ರಿ-ವಿಶ್ವಕರ್ಮ ಯೋಜನೆಯು ಭಾರತದಾದ್ಯಂತ ಒಬಿಸಿ ಸಮುದಾಯಗಳಿಗೆ ಸೇರಿದ ಕೋಟಿಗಟ್ಟಲೆ ಜನರಿಗೆ ಸಮೃದ್ಧಿಯ ಹೊಸ ಮಾರ್ಗಗಳನ್ನು ತರುತ್ತಿದೆ.

ನಾನು ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಯಾಗಿ, ನಾನು ಜನ ನಾಯಕ ಕರ್ಪೂರಿ ಠಾಕೂರ್ ಜೀ ಅವರಿಗೆ ತುಂಬಾ ಧನ್ಯವಾದ ಹೇಳಬೇಕು. ದುರದೃಷ್ಟವಶಾತ್, ನಾವು 64ನೇ ವಯಸ್ಸಿನಲ್ಲಿ ಕರ್ಪೂರಿ ಅವರನ್ನು ಕಳೆದುಕೊಂಡೆವು. ನಮಗೆ ಹೆಚ್ಚು ಅಗತ್ಯವಿರುವಾಗ ನಾವು ಅವರನ್ನು ಕಳೆದುಕೊಂಡಿದ್ದೇವೆ. ಆದರೂ, ಅವರು ತಮ್ಮ ಕೆಲಸದಿಂದ ಕೋಟ್ಯಂತರ ಜನರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರು ನಿಜವಾದ ಜನನಾಯಕರಾಗಿದ್ದರು!

-ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT