<p><strong>ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದಿಗೆ ಕೇಳಿಕೆ: ಚವಾಣ್ ನಕಾರ</strong></p>.<p><strong>ನವದೆಹಲಿ, ಡಿ. 6–</strong> ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ರಾಜ್ಯಾಂಗದ 370ನೇ ವಿಧಿ ರದ್ದುಪಡಿಸಬೇಕೆಂಬ ಜನಸಂಘ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಒತ್ತಾಯವನ್ನು ಇಂದು ಲೋಕಸಭೆಯಲ್ಲಿ ಗೃಹಮಂತ್ರಿ ವೈ.ಬಿ. ಚವಾಣ್ ತಳ್ಳಿಹಾಕಿದರು.</p>.<p><strong>ಕಲ್ಲಿಕೋಟೆ ಸಬ್ಜೈಲಿಗೆ ಕುಮಾರಿ ಅಜಿತಾ</strong></p>.<p><strong>ಕಲ್ಲಿಕೋಟೆ, ಡಿ. 6–</strong> ನಕ್ಸಲೀಯ ಚಳವಳಿಯ ಅಗ್ರನಾಯಕರಲ್ಲಿ ಒಬ್ಬರೆನ್ನಲಾದ ಕುಮಾರಿ ಅಜಿತಾ ಮತ್ತು ಇತರ ಐವರನ್ನು ಮಾನಂದವಾಡಿಯಿಂದ ಇಲ್ಲಿನ ಸಬ್ ಜೈಲಿಗೆ ಕಳುಹಿಸಲಾಯಿತು.</p>.<p>ಕುಮಾರಿ ಅಜಿತಾ ಅವರ ಕಾಲುಗಳ ಮೇಲೆ ಆಗಿರುವ ಹಲವಾರು ಗಾಯಗಳನ್ನು ಮಾನಂದವಾಡಿಯಲ್ಲಿ ನಿನ್ನೆ ವೈದ್ಯರೊಬ್ಬರು ಪರೀಕ್ಷಿಸಿದರು.</p>.<p><strong>ಕಂಪನಿ ಕಾಣಿಕೆ ನಿಷೇಧ: ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ತರಲು ಒತ್ತಾಯ</strong></p>.<p><strong>ನವದೆಹಲಿ, ಡಿ. 6–</strong> ರಾಜಕೀಯ ಪಕ್ಷಗಳಿಗೆ ಕಂಪನಿಗಳು ಕಾಣಿಕೆ ನೀಡುವುದನ್ನು ನಿಷೇಧಿಸುವ ಯೋಜಿತ ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ತರಬೇಕೆಂದು ವಿರೋಧ ಪಕ್ಷಗಳ ಸದಸ್ಯರು ಇಂದು ಲೋಕಸಭೆಯಲ್ಲಿ ಒತ್ತಾಯಪಡಿಸಿದರು.</p>.<p><strong>ರಾಜ್ಯದ ಮಾಧ್ಯಮಿಕ ಶಾಲೆಗಳಿಗೆಲ್ಲ ಪದವೀಧರ ಮುಖ್ಯೋಪಾಧ್ಯಾಯರನ್ನು ನೇಮಿಸಲು ಸರ್ಕಾರದ ಯೋಜನೆ</strong></p>.<p><strong>ಬೆಂಗಳೂರು, ಡಿ. 6–</strong> ರಾಜ್ಯದ ಮಾಧ್ಯಮಿಕ ಶಾಲೆಗಳಿಗೆಲ್ಲ ಪದವೀಧರರನ್ನು ಮುಖ್ಯೋಪಾಧ್ಯಾಯರನ್ನಾಗಿ ನೇಮಿಸುವ ಯೋಜನೆಯನ್ನು ರಾಜ್ಯ ಸರಕಾರ ಕೈಗೊಂಡಿದೆ.</p>.<p>ಒಂದರಿಂದ 7ನೇ ತರಗತಿವರೆಗಿನ 30 ಸಾವಿರ ಶಾಲೆಗಳು ಈಗ ರಾಜ್ಯದಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದಿಗೆ ಕೇಳಿಕೆ: ಚವಾಣ್ ನಕಾರ</strong></p>.<p><strong>ನವದೆಹಲಿ, ಡಿ. 6–</strong> ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ರಾಜ್ಯಾಂಗದ 370ನೇ ವಿಧಿ ರದ್ದುಪಡಿಸಬೇಕೆಂಬ ಜನಸಂಘ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಒತ್ತಾಯವನ್ನು ಇಂದು ಲೋಕಸಭೆಯಲ್ಲಿ ಗೃಹಮಂತ್ರಿ ವೈ.ಬಿ. ಚವಾಣ್ ತಳ್ಳಿಹಾಕಿದರು.</p>.<p><strong>ಕಲ್ಲಿಕೋಟೆ ಸಬ್ಜೈಲಿಗೆ ಕುಮಾರಿ ಅಜಿತಾ</strong></p>.<p><strong>ಕಲ್ಲಿಕೋಟೆ, ಡಿ. 6–</strong> ನಕ್ಸಲೀಯ ಚಳವಳಿಯ ಅಗ್ರನಾಯಕರಲ್ಲಿ ಒಬ್ಬರೆನ್ನಲಾದ ಕುಮಾರಿ ಅಜಿತಾ ಮತ್ತು ಇತರ ಐವರನ್ನು ಮಾನಂದವಾಡಿಯಿಂದ ಇಲ್ಲಿನ ಸಬ್ ಜೈಲಿಗೆ ಕಳುಹಿಸಲಾಯಿತು.</p>.<p>ಕುಮಾರಿ ಅಜಿತಾ ಅವರ ಕಾಲುಗಳ ಮೇಲೆ ಆಗಿರುವ ಹಲವಾರು ಗಾಯಗಳನ್ನು ಮಾನಂದವಾಡಿಯಲ್ಲಿ ನಿನ್ನೆ ವೈದ್ಯರೊಬ್ಬರು ಪರೀಕ್ಷಿಸಿದರು.</p>.<p><strong>ಕಂಪನಿ ಕಾಣಿಕೆ ನಿಷೇಧ: ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ತರಲು ಒತ್ತಾಯ</strong></p>.<p><strong>ನವದೆಹಲಿ, ಡಿ. 6–</strong> ರಾಜಕೀಯ ಪಕ್ಷಗಳಿಗೆ ಕಂಪನಿಗಳು ಕಾಣಿಕೆ ನೀಡುವುದನ್ನು ನಿಷೇಧಿಸುವ ಯೋಜಿತ ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ತರಬೇಕೆಂದು ವಿರೋಧ ಪಕ್ಷಗಳ ಸದಸ್ಯರು ಇಂದು ಲೋಕಸಭೆಯಲ್ಲಿ ಒತ್ತಾಯಪಡಿಸಿದರು.</p>.<p><strong>ರಾಜ್ಯದ ಮಾಧ್ಯಮಿಕ ಶಾಲೆಗಳಿಗೆಲ್ಲ ಪದವೀಧರ ಮುಖ್ಯೋಪಾಧ್ಯಾಯರನ್ನು ನೇಮಿಸಲು ಸರ್ಕಾರದ ಯೋಜನೆ</strong></p>.<p><strong>ಬೆಂಗಳೂರು, ಡಿ. 6–</strong> ರಾಜ್ಯದ ಮಾಧ್ಯಮಿಕ ಶಾಲೆಗಳಿಗೆಲ್ಲ ಪದವೀಧರರನ್ನು ಮುಖ್ಯೋಪಾಧ್ಯಾಯರನ್ನಾಗಿ ನೇಮಿಸುವ ಯೋಜನೆಯನ್ನು ರಾಜ್ಯ ಸರಕಾರ ಕೈಗೊಂಡಿದೆ.</p>.<p>ಒಂದರಿಂದ 7ನೇ ತರಗತಿವರೆಗಿನ 30 ಸಾವಿರ ಶಾಲೆಗಳು ಈಗ ರಾಜ್ಯದಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>