ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ‘ದಲಿತರ ಮೇಲಿನ ದೌರ್ಜನ್ಯ ಕುರಿತು ಮಾತನಾಡದೇ ಪ್ರಧಾನಿ ನರೇಂದ್ರ ಮೋದಿಯವರು ‘ಮೌನಿ ಬಾಬಾ’ ಆಗಿದ್ದಾರೆ’ ಎಂದು ಆರೋಪಿಸಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಅನ್ಯಾಯ ಎಸಗಿದ್ದಾರೆ!
‘ಮೌನಿ ಬಾಬಾ’ ಪದದ ‘ಕಾಪಿರೈಟ್’ ಹೊಂದಿರುವವರು ಕಾಂಗ್ರೆಸ್ ಪಕ್ಷದವರೇ ಆದ ಮನಮೋಹನ ಸಿಂಗ್ ಅವರು! ಹತ್ತು ವರ್ಷ ಮೌನಿ ಬಾಬಾ ವ್ರತವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದ ಮಾಜಿ ಪ್ರಧಾನಿ, ಇದೀಗ ‘ಮೌನ ಮುರಿದು’ ಮಾತನಾಡುತ್ತಿರುವುದು ಒಂದು ಪವಾಡ!