ಮಹದಾಯಿ ನದಿ ನೀರಿನ ವಿವಾದ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ.ದೂರದಿಂದ ನೋಡುವ ನಮ್ಮಂಥ ಜನಸಾಮಾನ್ಯರಿಗೆ ಇದರಿಂದ ನೋವು ಉಂಟಾಗುತ್ತದೆ. ಸರಳವಾಗಿ ಪರಿಹಾರ ಕಾಣಬಹುದಾದ ವಿವಾದ ಜಟಿಲಗೊಂಡು ರೇಜಿಗೆ ಹುಟ್ಟಿಸುತ್ತಿದೆ. ಪದೇ ಪದೇ ನಡೆಯುವ ಬಂದ್ಗಳಿಂದ ಆರ್ಥಿಕ ನಷ್ಟ ಉಂಟಾಗಿ, ವ್ಯಾಪಾರ–ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಕರ್ನಾಟಕ ಪ್ರಕ್ಷುಬ್ಧ ರಾಜ್ಯ ಎಂದು ಬಿಂಬಿತವಾಗುತ್ತಿದೆ. ಇದು ಬದಲಾಗಬೇಕು.