ಕಾಡುಗಳಲ್ಲಿ ಸಂಘಟನೆಯ ಅಗತ್ಯ ಇರುವುದು ಜಿಂಕೆಗಳಿಗೆ. ಅದು ಅವುಗಳ ಜೀವರಕ್ಷಣೆಯ ಹಕ್ಕು. ಹುಲಿ, ಸಿಂಹ, ಚಿರತೆ ಮುಂತಾದ ಶಕ್ತಿಶಾಲಿ ಪ್ರಾಣಿಗಳು ಸಂಘಟನೆ ಮಾಡಿಕೊಂಡರೆ ನಿಶ್ಶಕ್ತ ಪ್ರಾಣಿಗಳ ನಾಶ ಖಂಡಿತ.
ನಿಗಮ ರಚನೆಯು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಚಾಲ್ತಿಯಲ್ಲಿದೆ. ಆಗ ಅವರು ನಿರ್ಲಕ್ಷಿತ ಸಮುದಾಯಗಳ ಶ್ರೇಯಸ್ಸಿಗೆ ಅನುವಾಗಲೆಂದು ನಿಗಮಗಳನ್ನು ರಚಿಸಿದ್ದರು. ನಂತರದ ದಿನಗಳಲ್ಲಿ ಅದಕ್ಕೆ ಚುನಾವಣೆ ವಾಸನೆ ಬಡಿಯಿತು ಮತ್ತು ಜಾತಿಗೊಂದು ನಿಗಮ ರಚನೆ ಪ್ರಾರಂಭವಾಯಿತು.
ಎಲ್ಲ ಜಾತಿಗಳಲ್ಲೂ ಕಡಿಮೆ ವರಮಾನದವರು ಇರಬಹುದು. ಆದರೆ ಅವರು ನಿರ್ಗತಿಕರು, ನಿರ್ಲಕ್ಷಿತರು ಆಗಿರುವುದಿಲ್ಲ. ಹಾಗಾಗಿ ಎಲ್ಲಾ ಜಾತಿ– ಸಮುದಾಯಗಳಿಗೆ ನಿಗಮದ ಸಂಕೋಲೆ ಬೇಕಾಗಿರುವುದಿಲ್ಲ. -ಗೊಡಬನಹಾಳ್ ಮಲ್ಲಿಕಾರ್ಜುನ, ಚಿತ್ರದುರ್ಗ