<p class="Briefhead">ಕಾಡುಗಳಲ್ಲಿ ಸಂಘಟನೆಯ ಅಗತ್ಯ ಇರುವುದು ಜಿಂಕೆಗಳಿಗೆ. ಅದು ಅವುಗಳ ಜೀವರಕ್ಷಣೆಯ ಹಕ್ಕು. ಹುಲಿ, ಸಿಂಹ, ಚಿರತೆ ಮುಂತಾದ ಶಕ್ತಿಶಾಲಿ ಪ್ರಾಣಿಗಳು ಸಂಘಟನೆ ಮಾಡಿಕೊಂಡರೆ ನಿಶ್ಶಕ್ತ ಪ್ರಾಣಿಗಳ ನಾಶ ಖಂಡಿತ.</p>.<p>ನಿಗಮ ರಚನೆಯು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಚಾಲ್ತಿಯಲ್ಲಿದೆ. ಆಗ ಅವರು ನಿರ್ಲಕ್ಷಿತ ಸಮುದಾಯಗಳ ಶ್ರೇಯಸ್ಸಿಗೆ ಅನುವಾಗಲೆಂದು ನಿಗಮಗಳನ್ನು ರಚಿಸಿದ್ದರು. ನಂತರದ ದಿನಗಳಲ್ಲಿ ಅದಕ್ಕೆ ಚುನಾವಣೆ ವಾಸನೆ ಬಡಿಯಿತು ಮತ್ತು ಜಾತಿಗೊಂದು ನಿಗಮ ರಚನೆ ಪ್ರಾರಂಭವಾಯಿತು.</p>.<p>ಎಲ್ಲ ಜಾತಿಗಳಲ್ಲೂ ಕಡಿಮೆ ವರಮಾನದವರು ಇರಬಹುದು. ಆದರೆ ಅವರು ನಿರ್ಗತಿಕರು, ನಿರ್ಲಕ್ಷಿತರು ಆಗಿರುವುದಿಲ್ಲ. ಹಾಗಾಗಿ ಎಲ್ಲಾ ಜಾತಿ– ಸಮುದಾಯಗಳಿಗೆ ನಿಗಮದ ಸಂಕೋಲೆ ಬೇಕಾಗಿರುವುದಿಲ್ಲ.<br /><em><strong>-ಗೊಡಬನಹಾಳ್ ಮಲ್ಲಿಕಾರ್ಜುನ, <span class="Designate">ಚಿತ್ರದುರ್ಗ</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead">ಕಾಡುಗಳಲ್ಲಿ ಸಂಘಟನೆಯ ಅಗತ್ಯ ಇರುವುದು ಜಿಂಕೆಗಳಿಗೆ. ಅದು ಅವುಗಳ ಜೀವರಕ್ಷಣೆಯ ಹಕ್ಕು. ಹುಲಿ, ಸಿಂಹ, ಚಿರತೆ ಮುಂತಾದ ಶಕ್ತಿಶಾಲಿ ಪ್ರಾಣಿಗಳು ಸಂಘಟನೆ ಮಾಡಿಕೊಂಡರೆ ನಿಶ್ಶಕ್ತ ಪ್ರಾಣಿಗಳ ನಾಶ ಖಂಡಿತ.</p>.<p>ನಿಗಮ ರಚನೆಯು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಚಾಲ್ತಿಯಲ್ಲಿದೆ. ಆಗ ಅವರು ನಿರ್ಲಕ್ಷಿತ ಸಮುದಾಯಗಳ ಶ್ರೇಯಸ್ಸಿಗೆ ಅನುವಾಗಲೆಂದು ನಿಗಮಗಳನ್ನು ರಚಿಸಿದ್ದರು. ನಂತರದ ದಿನಗಳಲ್ಲಿ ಅದಕ್ಕೆ ಚುನಾವಣೆ ವಾಸನೆ ಬಡಿಯಿತು ಮತ್ತು ಜಾತಿಗೊಂದು ನಿಗಮ ರಚನೆ ಪ್ರಾರಂಭವಾಯಿತು.</p>.<p>ಎಲ್ಲ ಜಾತಿಗಳಲ್ಲೂ ಕಡಿಮೆ ವರಮಾನದವರು ಇರಬಹುದು. ಆದರೆ ಅವರು ನಿರ್ಗತಿಕರು, ನಿರ್ಲಕ್ಷಿತರು ಆಗಿರುವುದಿಲ್ಲ. ಹಾಗಾಗಿ ಎಲ್ಲಾ ಜಾತಿ– ಸಮುದಾಯಗಳಿಗೆ ನಿಗಮದ ಸಂಕೋಲೆ ಬೇಕಾಗಿರುವುದಿಲ್ಲ.<br /><em><strong>-ಗೊಡಬನಹಾಳ್ ಮಲ್ಲಿಕಾರ್ಜುನ, <span class="Designate">ಚಿತ್ರದುರ್ಗ</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>