<p>ಆ್ಯಸಿಡ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ ನಿರ್ಬಂಧವಿದ್ದರೂ<br />ಇಂದಿಗೂ ಅಂಗಡಿಗಳಲ್ಲಿ ಅದು ಸುಲಭವಾಗಿ ಸಿಗುತ್ತಿರುವುದು (ಪ್ರ.ವಾ., ಜ. 14) ಗಂಭೀರವಾದ ವಿಷಯ. ಆ್ಯಸಿಡ್ ಮಾರಾಟಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗೆ ಕಿಮ್ಮತ್ತಿಲ್ಲದಂತೆ<br />ಕೆಲವರು ವರ್ತಿಸುತ್ತಿದ್ದಾರೆ. ಮಾನವನ ದೇಹಕ್ಕೆ ತೀವ್ರ ಹಾನಿ ಉಂಟು ಮಾಡುವ ಆ್ಯಸಿಡ್, ಕಿರಾಣಿ ಅಂಗಡಿಗಳಲ್ಲಿ ಮುಕ್ತವಾಗಿ ಸಿಗುತ್ತದೆ ಎಂದರೆ ಏನರ್ಥ? ನಾವು ಎಡವುತ್ತಿರುವುದು ಎಲ್ಲಿ? ಅಧಿಕಾರಿಗಳು ಜಾಣಕುರುಡರಾಗಿದ್ದಾರೆಯೇ ಅಥವಾ ನಾಗರಿಕ ಸಮಾಜ ಕುರುಡಾಗಿದೆಯೇ? ಹೀಗಾದರೆ ಸಮಾಜದ ಗತಿ ಏನು?</p>.<p>ಆ್ಯಸಿಡ್ ದಾಳಿ ಹಾಗೂ ಅದರ ಭೀಕರ ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಬೇಕಾಗಿದೆ. ಹದಿಹರೆಯ<br />ದವರನ್ನು ಗಮನದಲ್ಲಿ ಇಟ್ಟುಕೊಂಡು ಶಾಲಾ ಕಾಲೇಜುಗಳು, ಆಸ್ಪತ್ರೆಗಳಲ್ಲೂ ಈ ಕುರಿತು ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.</p>.<p>ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರಿಗೆ ಅಧಿಕಾರಿಗಳು ದಂಡ ಹಾಕಿ ಕೈ ತೊಳೆದು<br />ಕೊಳ್ಳುವುದರ ಬದಲು, ಕಠಿಣ ಕ್ರಮ ಕೈಗೊಳ್ಳಬೇಕು. ಆ್ಯಸಿಡ್ ಅನ್ನು ಮುಕ್ತವಾಗಿ ಮಾರಾಟ ಮಾಡುವ ಅಂಗಡಿಯ ಪರವಾನಗಿ ರದ್ದು ಮಾಡಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆ್ಯಸಿಡ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ ನಿರ್ಬಂಧವಿದ್ದರೂ<br />ಇಂದಿಗೂ ಅಂಗಡಿಗಳಲ್ಲಿ ಅದು ಸುಲಭವಾಗಿ ಸಿಗುತ್ತಿರುವುದು (ಪ್ರ.ವಾ., ಜ. 14) ಗಂಭೀರವಾದ ವಿಷಯ. ಆ್ಯಸಿಡ್ ಮಾರಾಟಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗೆ ಕಿಮ್ಮತ್ತಿಲ್ಲದಂತೆ<br />ಕೆಲವರು ವರ್ತಿಸುತ್ತಿದ್ದಾರೆ. ಮಾನವನ ದೇಹಕ್ಕೆ ತೀವ್ರ ಹಾನಿ ಉಂಟು ಮಾಡುವ ಆ್ಯಸಿಡ್, ಕಿರಾಣಿ ಅಂಗಡಿಗಳಲ್ಲಿ ಮುಕ್ತವಾಗಿ ಸಿಗುತ್ತದೆ ಎಂದರೆ ಏನರ್ಥ? ನಾವು ಎಡವುತ್ತಿರುವುದು ಎಲ್ಲಿ? ಅಧಿಕಾರಿಗಳು ಜಾಣಕುರುಡರಾಗಿದ್ದಾರೆಯೇ ಅಥವಾ ನಾಗರಿಕ ಸಮಾಜ ಕುರುಡಾಗಿದೆಯೇ? ಹೀಗಾದರೆ ಸಮಾಜದ ಗತಿ ಏನು?</p>.<p>ಆ್ಯಸಿಡ್ ದಾಳಿ ಹಾಗೂ ಅದರ ಭೀಕರ ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಬೇಕಾಗಿದೆ. ಹದಿಹರೆಯ<br />ದವರನ್ನು ಗಮನದಲ್ಲಿ ಇಟ್ಟುಕೊಂಡು ಶಾಲಾ ಕಾಲೇಜುಗಳು, ಆಸ್ಪತ್ರೆಗಳಲ್ಲೂ ಈ ಕುರಿತು ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.</p>.<p>ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರಿಗೆ ಅಧಿಕಾರಿಗಳು ದಂಡ ಹಾಕಿ ಕೈ ತೊಳೆದು<br />ಕೊಳ್ಳುವುದರ ಬದಲು, ಕಠಿಣ ಕ್ರಮ ಕೈಗೊಳ್ಳಬೇಕು. ಆ್ಯಸಿಡ್ ಅನ್ನು ಮುಕ್ತವಾಗಿ ಮಾರಾಟ ಮಾಡುವ ಅಂಗಡಿಯ ಪರವಾನಗಿ ರದ್ದು ಮಾಡಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>