ಕೋಮುವಾದದ ಅಗ್ನಿಕುಂಡಕ್ಕೆ ಈ ದೇಶವನ್ನು ತಳ್ಳುವ ಕಸರತ್ತು ಪ್ರಾರಂಭವಾದದ್ದೇ ಕೋಮು ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡಿದ ದಿನ. ಆನಂತರದಲ್ಲಿ ಅರ್ಧಶತಮಾನಕ್ಕೂ ಹೆಚ್ಚುಕಾಲ ದೇಶವನ್ನು ಮುನ್ನಡೆಸಿದ ಅಧಿಕಾರಸ್ಥರು ವೋಟಿಗಾಗಿ ಓಲೈಕೆ ರಾಜಕಾರಣದ ಮೂಲಕ ಆ ಅಗ್ನಿಕುಂಡವನ್ನು ಇನ್ನಷ್ಟು ಪ್ರಜ್ವಲಗೊಳಿಸುತ್ತಾ ಹೋದರು. ಅದು ಹೀಗೆ ಎಲ್ಲರನ್ನೂ ಬಲಿ ತೆಗೆದುಕೊಳ್ಳುವ ಮಟ್ಟಕ್ಕೆ ಪ್ರಜ್ವಲಿಸಲು ಕಾರಣವಾದ ನೆರೆಯ ರಾಷ್ಟ್ರ ಪಾಕಿಸ್ತಾನ, ತನ್ನ ನೆಲದಿಂದಲೇ ಕಾಶ್ಮೀರಿ ಪಂಡಿತರು ಕಣ್ಣೀರು ಸುರಿಸುತ್ತ ಕಾಲ್ತೆಗೆದು ಹೋಗುವಂತೆ ಮಾಡಿದ ಪರಿ, ಆನಂತರದಲ್ಲಿ ಭಾರತವನ್ನೇ ಗುರಿಯಾಗಿಸಿಕೊಂಡು ಉಗ್ರರನ್ನು ಪೋಷಿಸುತ್ತಿರುವ ರೀತಿ ಇದಾವುದನ್ನೂ ಪ್ರಸ್ತಾಪಿಸದೆ, ಬರೀ ಅಡ್ವಾಣಿಯವರನ್ನು ಅದಕ್ಕೆ ಕಾರಣರೆಂಬಂತೆ ಬಲಿಪಶು ಮಾಡಿರುವುದು ಸರಿಯಲ್ಲ.