ನಟ ಅಮಿತಾಭ್ ಬಚ್ಚನ್ ಅವರು ಉತ್ತರಪ್ರದೇಶದ ಕೆಲವು ರೈತರನ್ನು ಸಾಲಬಾಧೆಯಿಂದ ಮುಕ್ತರಾಗಿಸಲು ನಿರ್ಧರಿಸಿರುವುದು ಪ್ರಶಂಸನೀಯ. ಸಣ್ಣ ರೈತರಿಗೆ ಬೇಸಾಯ ಎಂಬುದು ಹೊರೆಯಾಗಿ ಪರಿಣಮಿಸಿದೆ. ಮಳೆ, ಅದನ್ನು ಆಧರಿಸಿದ ಬೆಳೆ ಮತ್ತು ಕೃಷಿ ಉತ್ಪನ್ನಗಳಿಗೆ ಸಿಗುವ ಬೆಲೆ ಎಲ್ಲವೂ ಅನಿಶ್ಚಯ. ಇದರ ಪರಿಣಾಮವೇ ಹತಾಶೆ ಮತ್ತು ಅತಿರೇಕದ ನಿರ್ಧಾರಗಳು.