ಮಂಡ್ಯ ತಾಲ್ಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಜೋಡೆತ್ತುಗಳು ಬರೋಬ್ಬರಿ 14.55 ಟನ್ ತೂಕದ ಕಬ್ಬು ತುಂಬಿದ ಗಾಡಿಯನ್ನು ಎಳೆದು ಎಲ್ಲರನ್ನೂ ಅಚ್ಚರಿ ಪಡಿಸಿವೆಯಂತೆ. ಈ ಎತ್ತುಗಳ ಸಾಧನೆ ಮಾಲೀಕನ ಸಂತಸವನ್ನೇನೋ ಇಮ್ಮಡಿಗೊಳಿಸಿರಬಹುದು. ಆದರೆ ತಮ್ಮ ಸಾಮರ್ಥ್ಯಕ್ಕಿಂತ ಅತೀ ಹೆಚ್ಚು ತೂಕದ ಗಾಡಿಯನ್ನು ಮುಂದಕ್ಕೆ ಎಳೆಯಬೇಕಾದಾಗ ಆ ಮೂಕಪ್ರಾಣಿಗಳ ನೋವು, ಸಂಕಟ, ವೇದನೆ ಯಾರು ಬಲ್ಲರು?
–ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ