ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಎಲ್.ಕೆ.ಅಡ್ವಾಣಿ ಅವರಿಂದ ಶಿಲಾನ್ಯಾಸ ನೆರವೇರಬೇಕು ಎಂದು ರಮಾನಂದ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಜುಲೈ 23). ರಾಮಾಯಣ ಎಂಬುದು ಕಾವ್ಯ (ಕಥೆ, ಕಲ್ಪನೆ) ಎಂಬುದನ್ನು ಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದರೂ ಜನರ ನಂಬಿಕೆ ಆಧರಿಸಿ ಮಂದಿರ ನಿರ್ಮಾಣದ ತೀರ್ಪು ನೀಡಿದೆ. ಆದರೆ ಅದೇ ಸಮಯದಲ್ಲಿ, ಮಸೀದಿ ಧ್ವಂಸ ಪ್ರಕರಣವನ್ನು ಕೈಬಿಡದೆ ಮುಂದುವರಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದೂ ಹೇಳಿದೆ. ಆ ಪ್ರಕರಣದ ಅತಿಮುಖ್ಯ ಆರೋಪಿಗಳಲ್ಲಿ ಅಡ್ವಾಣಿ ಕೂಡ ಒಬ್ಬರು.