ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿರುವುದರಿಂದ ಜಿಲ್ಲೆಯ ಜನ ಹೊಸಪೇಟೆಯ ತುಂಗಭದ್ರಾ ಜಲಾಶಯ, ನಾಡಿನ ಹೆಮ್ಮೆಯಾಗಿರುವ ಐತಿಹಾಸಿಕ ಹಂಪಿಯಿಂದ ಭಾವನಾತ್ಮಕ ನಂಟನ್ನು ಕಳೆದು ಕೊಂಡಂತಾಗಿದೆ. ಆದರೆ ಆಡಳಿತಾತ್ಮಕವಾಗಿ ನೋಡುವುದಾದರೆ, ತಾಲ್ಲೂಕುಗಳು ಜಿಲ್ಲಾ ಕೇಂದ್ರಕ್ಕೆ ಹತ್ತಿರವಿದ್ದರೆ ಒಳಿತು. ಕೆಲ ತಾಲ್ಲೂಕುಗಳು ಬಳ್ಳಾರಿ ಜಿಲ್ಲಾ ಕೇಂದ್ರದಿಂದ ದೂರದಲ್ಲಿ ಇದ್ದಿದ್ದರಿಂದ ಆಡಳಿತಕ್ಕೆ ಕಷ್ಟವಾಗುತ್ತಿತ್ತು. ಹೊಸ ಜಿಲ್ಲೆ ರಚನೆಯು ಅಭಿವೃದ್ಧಿಯಿಂದ ದೂರ ಉಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದಾದರೆ, ನಾವು ಬಳ್ಳಾರಿ ಜಿಲ್ಲಾ ವಿಭಜನೆಯನ್ನು ಒಪ್ಪಿಕೊಳ್ಳಲೇಬೇಕು. ನೂತನ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈಗ ವೇಗ ದೊರೆಯಲಿ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಅಭಿವೃದ್ಧಿ ಹೊಂದುವಂತೆ ಸರ್ಕಾರ ನೋಡಿಕೊಳ್ಳಲಿ.