ಕೇಂದ್ರ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಸಾರಾಸಗಟಾಗಿ ಟೀಕಿಸುವುದರಿಂದ ಕಾಂಗ್ರೆಸ್ಸಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಆ ಪಕ್ಷವು ಮನಗಾಣಬೇಕು. ಸಕ್ರಿಯ ವಿರೋಧ ಪಕ್ಷವಾಗಿ, ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸಿ ಆಡಳಿತ ನಡೆಸುವವರನ್ನು ಎಚ್ಚರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿ. ಮೋದಿಯವರನ್ನು ಹೊಗಳಿದ ತಮ್ಮದೇ ಪಕ್ಷದ ಮುಂಚೂಣಿಯ ನಾಯಕರನ್ನು ಟೀಕಿಸುವುದನ್ನು ಬಿಟ್ಟು, ಅಂಥ ಮಾತುಗಳನ್ನಾಡಿದ್ದರ ಹಿಂದಿನ ಉದ್ದೇಶ, ಅದರ ಅಂತರಾರ್ಥ ಏನೆಂಬುದನ್ನು ಅರಿಯಲಿ.