ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ್ದ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದವರು ಎಲ್.ಕೆ.ಅಡ್ವಾಣಿ.ಬಿಜೆಪಿಯ ‘ಭೀಷ್ಮ’ ಎಂದು ತಿಳಿಯಲಾಗಿರುವ ಅವರು, ಈಚೆಗೆ ‘ಮೊದಲು ದೇಶ, ನಂತರ ಪಕ್ಷ, ಕೊನೆಗೆ ನಾವು’ ಎಂಬ ಮುತ್ತಿನಂಥ ಮಾತನಾಡಿದ್ದಾರೆ.
ರಾಜಕಾರಣಿಗಳಿಗೆಲ್ಲ ಇದು ಮಾದರಿಯ ಮಾತು. ವೈವಿಧ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದು ಭಾರತೀಯ ಪ್ರಜಾಪ್ರಭುತ್ವದ ಮೂಲ ತತ್ವ ಎಂದು ಅವರು ಹೇಳಿರುವುದು ಎಲ್ಲ ರಾಜಕೀಯ ಪಕ್ಷಗಳೂ ಗಮನಿಸಬೇಕಾದ ಮಹತ್ವದ ಮಾತು. ಇದನ್ನು ಅನುಷ್ಠಾನಗೊಳಿಸುವುದು ರಾಜಕಾರಣಿಗಳ ಜವಾಬ್ದಾರಿಯಾಗಿದೆ.