<p>ನನ್ನ ಮಗ ಭಾನುವಾರ ಬೆಳಿಗ್ಗೆ 7.30ಕ್ಕೆ ಔಷಧ ತರಲು ಅಂಗಡಿಗೆ ಹೋಗಿ ಬರುವಾಗ ಪೊಲೀಸರಿಗೆ ಸಿಕ್ಕಿಬಿದ್ದ. ತನ್ನ ಕೈಲಿರುವ ಔಷಧ ತೋರಿಸಿದರೂ ಬಿಡದ ಪೊಲೀಸರು ಅವನ ಗಾಡಿಯನ್ನು ಕಸಿದುಕೊಂಡು ಠಾಣೆಗೆ ಕರೆದೊಯ್ದದ್ದು ತಿಳಿದಾಗ ದಿಗಿಲುಗೊಂಡು ನಾನೂ ಅಲ್ಲಿಗೆ ಹೋದೆ. ‘ವಾಹನ ಒಯ್ಯಬಾರದೆಂಬ ನಿಯಮ ಅನ್ವಯಿಸುವುದು ಮೇ 10ರಿಂದ, ಇಂದು 9ನೇ ತಾರೀಖು. ಆದರೂ ಈ ದಿನವೇ ಹೀಗೇಕೆ’ ಎಂದು ಕೇಳಿ ವಾಹನ ಬಿಡಲು ಬೇಡಿಕೊಂಡೆ. ಸಣ್ಣ ವಯಸ್ಸಿನ ಪೊಲೀಸರ ಮಾತು, ವರ್ತನೆ ತುಂಬಾ ಬೇಸರ ತರಿಸಿತು. ಅಧಿಕಾರಿಯೂ ಸಣ್ಣ ವಯಸ್ಸಿನವರೆ. ಆದರೆ ಪೊಲೀಸ್ ಇಲಾಖೆಯಲ್ಲಿ ಬ್ರಿಟಿಷರ ಪಳೆಯುಳಿಕೆ ಮೊಳಕೆಯೊಡೆದು ಬೆಳೆಯುತ್ತಿರುವುದು ದುರಂತ.</p>.<p>ಆಧುನಿಕ ಬದುಕು ಎಷ್ಟು ಮಾನವೀಯತೆಯಿಂದ ಬೆಳೆಯಬೇಕಿತ್ತೋ ಅದಕ್ಕೆ ವಿರುದ್ಧವಾಗಿ ಪೊಲೀಸ್ ಅಧಿಕಾರಿಗಳು ವರ್ತಿಸುತ್ತಿರುವುದು ವಿಷಾದಕರ ಸಂಗತಿ. ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳು ಇತ್ತ ಚಿತ್ತಹರಿಸದಿದ್ದರೆ ಪೊಲೀಸ್ ಗೂಂಡಾಗಿರಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.</p>.<p><em><strong>–ಡಾ. ಸಿ.ಬಿ.ಚಿಲ್ಕರಾಗಿ, <span class="Designate">ಲಿಂಗಸುಗೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನನ್ನ ಮಗ ಭಾನುವಾರ ಬೆಳಿಗ್ಗೆ 7.30ಕ್ಕೆ ಔಷಧ ತರಲು ಅಂಗಡಿಗೆ ಹೋಗಿ ಬರುವಾಗ ಪೊಲೀಸರಿಗೆ ಸಿಕ್ಕಿಬಿದ್ದ. ತನ್ನ ಕೈಲಿರುವ ಔಷಧ ತೋರಿಸಿದರೂ ಬಿಡದ ಪೊಲೀಸರು ಅವನ ಗಾಡಿಯನ್ನು ಕಸಿದುಕೊಂಡು ಠಾಣೆಗೆ ಕರೆದೊಯ್ದದ್ದು ತಿಳಿದಾಗ ದಿಗಿಲುಗೊಂಡು ನಾನೂ ಅಲ್ಲಿಗೆ ಹೋದೆ. ‘ವಾಹನ ಒಯ್ಯಬಾರದೆಂಬ ನಿಯಮ ಅನ್ವಯಿಸುವುದು ಮೇ 10ರಿಂದ, ಇಂದು 9ನೇ ತಾರೀಖು. ಆದರೂ ಈ ದಿನವೇ ಹೀಗೇಕೆ’ ಎಂದು ಕೇಳಿ ವಾಹನ ಬಿಡಲು ಬೇಡಿಕೊಂಡೆ. ಸಣ್ಣ ವಯಸ್ಸಿನ ಪೊಲೀಸರ ಮಾತು, ವರ್ತನೆ ತುಂಬಾ ಬೇಸರ ತರಿಸಿತು. ಅಧಿಕಾರಿಯೂ ಸಣ್ಣ ವಯಸ್ಸಿನವರೆ. ಆದರೆ ಪೊಲೀಸ್ ಇಲಾಖೆಯಲ್ಲಿ ಬ್ರಿಟಿಷರ ಪಳೆಯುಳಿಕೆ ಮೊಳಕೆಯೊಡೆದು ಬೆಳೆಯುತ್ತಿರುವುದು ದುರಂತ.</p>.<p>ಆಧುನಿಕ ಬದುಕು ಎಷ್ಟು ಮಾನವೀಯತೆಯಿಂದ ಬೆಳೆಯಬೇಕಿತ್ತೋ ಅದಕ್ಕೆ ವಿರುದ್ಧವಾಗಿ ಪೊಲೀಸ್ ಅಧಿಕಾರಿಗಳು ವರ್ತಿಸುತ್ತಿರುವುದು ವಿಷಾದಕರ ಸಂಗತಿ. ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳು ಇತ್ತ ಚಿತ್ತಹರಿಸದಿದ್ದರೆ ಪೊಲೀಸ್ ಗೂಂಡಾಗಿರಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.</p>.<p><em><strong>–ಡಾ. ಸಿ.ಬಿ.ಚಿಲ್ಕರಾಗಿ, <span class="Designate">ಲಿಂಗಸುಗೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>