ಮುಖ್ಯಮಂತ್ರಿಯವರ ಪುತ್ರ ಹಾಗೂ ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ಅವರು ಲಾಕ್ಡೌನ್ ನಡುವೆಯೂ ನಂಜನಗೂಡಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ಸುದ್ದಿ (ಪ್ರ.ವಾ., ಮೇ 19) ಓದಿ ದಿಗ್ಭ್ರಮೆಯಾಯಿತು. ಕೋವಿಡ್ ರೋಗ ತಾಂಡವವಾಡುತ್ತಿರುವ ಈ ಸಮಯದಲ್ಲಿ ಅಂತರಜಿಲ್ಲಾ ಓಡಾಟ ಮತ್ತು ಭಕ್ತರಿಗೆ ದೇವಾಲಯ ಪ್ರವೇಶ ನಿರ್ಬಂಧ ಇದೆ. ಹೀಗಿದ್ದರೂ ವಿಜಯೇಂದ್ರ ಅವರು ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಹರಕೆ ತೀರಿಸುವ ಸಲುವಾಗಿ ಕುಟುಂಬ ಸಮೇತ ಗರ್ಭಗುಡಿಯಲ್ಲಿ ಕುಳಿತು ಪೂಜೆ ಸಲ್ಲಿಸಿದ್ದಾರೆ. ಆರೋಗ್ಯ ತುರ್ತು ಸಂದರ್ಭದಲ್ಲಿ ಮಾತ್ರ ಅಂತರಜಿಲ್ಲಾ ಓಡಾಟಕ್ಕೆ ಅನುಮತಿ ಇದೆಯೇ ವಿನಾ ಹರಕೆ ತೀರಿಸಲು ಅಲ್ಲ ಎಂಬ ಅರಿವು ಅವರಿಗೆ ಇದ್ದಂತಿಲ್ಲ. ಇದಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳಿಗೆ ಇದು ತಿಳಿದಿರಲಿಲ್ಲವೇ? ಹರಕೆ ತೀರಿಸಲು ಮುಖ್ಯಮಂತ್ರಿಯವರ ಕುಟುಂಬಕ್ಕೆ ಅಷ್ಟೊಂದು ಅವಸರ ಇತ್ತೇ?