ಬಹುತೇಕ ಚಾನೆಲ್ಗಳ ಮಾಲೀಕರು ರಾಜಕಾರಣಿಗಳೇ ಆಗಿದ್ದು, ಸಾರ್ವಜನಿಕರು ನೀಡುವ ದೂರು ಸಂಬಂಧಿತ ವ್ಯಕ್ತಿಗಳಿಗೆ ತಲುಪದೆ ಗಾಳಿಯಲ್ಲೇ ತೇಲಿಹೋಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ಕೇಬಲ್ ಆಪರೇಟರ್ಗಳಿಗೆ ಕೇಬಲ್ ಪ್ರಸಾರದ ಮೇಲೆ ಇಂದು ಯಾವುದೇ ನಿಯಂತ್ರಣ ಇರುವುದಿಲ್ಲ. ಮೊದಲಿದ್ದ ಚಲನಚಿತ್ರ ಆಯ್ಕೆ, ನಮ್ಮೂರಿನ ಸುದ್ದಿ, ಜಾತ್ರೆ, ಜನ್ಮದಿನಾಚರಣೆ ಯಾವುದರ ಪ್ರಸಾರವೂ ಈಗ ಅವರ ಕೈಯಲ್ಲಿಲ್ಲ. ಒಟ್ಟಾರೆ ಕೇಬಲ್ ಆಪರೇಟರ್ಗಳನ್ನು ದೂರಿ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ‘ಟ್ರಾಯ್’ಹಲ್ಲು ಕಿತ್ತ ಹಾವಿನಂತಾಗಿದ್ದು, ಮಲ್ಟಿ ಸಿಸ್ಟಮ್ ಆಪರೇಟರ್ಗಳನ್ನು ಹದ್ದುಬಸ್ತಿನಲ್ಲಿ ಇಡಲು ವಿಫಲವಾಗಿದೆ ಎನ್ನಬಹುದು.