ಮೀಸಲಾತಿ ಹಾಗೂ ಪ್ರಾತಿನಿಧ್ಯದ ಹೆಸರಿನಲ್ಲಿ ಇಂದು ಬೇಡಿಕೆ ಸಲ್ಲಿಸುತ್ತಿರುವ ಸಮುದಾಯಗಳ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಮರಾಠಿಗರು, ಗುಜರಾತಿನಲ್ಲಿ ಪಟೇಲರು, ಕರ್ನಾಟಕದಲ್ಲಿ ಲಿಂಗಾಯತ ಪಂಚಮಸಾಲಿ, ಕುರುಬರು ಹಾಗೂ ಒಕ್ಕಲಿಗರು... ಹೀಗೆ ಅನೇಕ ಕಡೆ ಮೀಸಲಾತಿ ಬೇಡಿಕೆಯ ಕೂಗು ಕೇಳಿಬರುತ್ತಿದೆ. ಈ ಮೀಸಲಾತಿ ಎಂಬುದು ರಾಜಕೀಯ ದಾಳವಾಗಿ ಬಳಕೆಯಾಗಿ, ಮುಂದೊಂದು ದಿನ ಇದೇ ಪಿಡುಗಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿದರೂ ಆಶ್ಚರ್ಯವಿಲ್ಲ. ಹಾಗೆ ಆಗುವ ಮುನ್ನವೇ ಎಚ್ಚೆತ್ತುಕೊಂಡು, ಮೀಸಲಾತಿಯ ಅಗತ್ಯದ ಬಗ್ಗೆ ಪರಿಶೀಲನೆ, ಪರಾಮರ್ಶೆ ಹಾಗೂ ಪುನರಾವಲೋಕನ ಮಾಡಿಕೊಳ್ಳಲು ಕಾಲ ಪಕ್ವವಾಗಿದೆ.