‘ಕಾಲೇಜು ಆರಂಭಕ್ಕೆ ಅವಸರವೇಕೆ?’ ಎಂದು ಕೆ.ಶಿವಸ್ವಾಮಿ ಅವರು ಕೇಳಿರುವುದನ್ನು ಓದಿ (ವಾ.ವಾ., ಅ. 31) ಅಚ್ಚರಿಯಾಯಿತು. ಅವರು ತಿಳಿದುಕೊಂಡಿರುವಂತೆ, ಕೊರೊನಾ ಹರಡುವಿಕೆಯನ್ನು ತಡೆಯಲು ಯುವಜನರು ಮನೆಯಲ್ಲಿ ಬಾಗಿಲು ಹಾಕಿಕೊಂಡು ಕುಳಿತಿಲ್ಲ. ಹಬ್ಬಗಳ ಈ ಸರಣಿಯಲ್ಲಿ ಪ್ರವಾಸಿ ತಾಣಗಳು, ಶಾಪಿಂಗ್ ಮಾಲ್ಗಳು, ದೇವಸ್ಥಾನಗಳು, ಹೋಟೆಲ್ಗಳು, ಬಸ್, ರೈಲು ಮುಂತಾದ ಸಾರ್ವಜನಿಕ ಸ್ಥಳಗಳು ಜನರಿಂದ ತುಂಬಿ ತುಳುಕುತ್ತಿವೆ. ಮಾಸ್ಕೂ ಇಲ್ಲ, ಅಂತರವೂ ಇಲ್ಲ. ಉಪ ಚುನಾವಣೆಯಲ್ಲಿ ಸ್ಟಾರ್ ನಟರ ಪ್ರಚಾರದ ವೇಳೆ ಯುವಜನರು ತಂಡೋಪತಂಡವಾಗಿ ಭಾಗವಹಿಸಿದ್ದುದು ಜಗಜ್ಜಾಹೀರಾಗಿದೆ. ಅಲ್ಲೆಲ್ಲೂ ಇಲ್ಲದ ಕೊರೊನಾ ಭೀತಿ ಕಾಲೇಜುಗಳಲ್ಲಿ ಮಾತ್ರ ಏಕೆ?