ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳೋಣ

Last Updated 10 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಕೊಡಗು ಜಿಲ್ಲೆಯಲ್ಲಿ ನರಭಕ್ಷಕ ಹುಲಿಯನ್ನು ಹಿಡಿಯಲು ಸಾಧ್ಯವಾಗದಿದ್ದರೆ ಗುಂಡಿಕ್ಕಿ ಕೊಲ್ಲುವ ಆದೇಶವನ್ನು ಅರಣ್ಯಾಧಿಕಾರಿ ಹೊರಡಿಸಿರುವುದು ಯುಕ್ತವೇ? ವನ್ಯಮೃಗಗಳನ್ನು ಗುಂಡಿಕ್ಕಿ ಕೊಲ್ಲುತ್ತಾ ಹೋದರೆ ಮುಂದೆ ಅವುಗಳ ಸಂತತಿಯೇ ಸಂಪೂರ್ಣವಾಗಿ ನಶಿಸುವುದರಲ್ಲಿ ಅನುಮಾನವಿಲ್ಲ. ವನ್ಯಮೃಗಗಳನ್ನು ಸೆರೆಹಿಡಿಯಲು ಅಥವಾ ನಾಡಿನತ್ತ ಬಾರದಿರುವಂತೆ ಮಾಡಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಯೋಜನೆ ರೂಪಿಸಬಹುದಲ್ಲವೇ? ಆಹಾರದ ಅಸಮತೋಲನದಿಂದಾಗಿ ವನ್ಯಮೃಗಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕುತ್ತಿರುವುದಂತೂ ಸ್ಪಷ್ಟ. ಅದಕ್ಕೆ ಕಾರಣ ಮಾನವ ಮತ್ತು ಪ್ರಾಣಿಗಳ ನಡುವಿನ ನಿರಂತರ ಸಂಘರ್ಷ, ಅರಣ್ಯ ನಾಶ, ಗಣಿಗಾರಿಕೆ, ದುರಾಸೆ, ಪ್ರಕೃತಿ ಮೇಲಿನ ಅತಿಯಾದ ಹಸ್ತಕ್ಷೇಪ... ನಮ್ಮ ಕಡೆಯಿಂದ ಇಷ್ಟೆಲ್ಲಾ ತಪ್ಪುಗಳಿದ್ದರೂ ಸರಿಪಡಿಸಿಕೊಳ್ಳದೆ ಪ್ರಾಣಿಗಳನ್ನು ಕೊಲ್ಲುವುದು ಎಷ್ಟು ಸರಿ?

-ಮುರುಗೇಶ ಡಿ., ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT