‘ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಪಾಠ ಕಲಿಯಲಿ’ ಎಂಬ ಸಂಪಾದಕೀಯ (ಪ್ರ.ವಾ., ಜೂನ್ 8) ಸಕಾಲಿಕವಾಗಿದೆ. ಆದರೆ ಈ ಪ್ರಕರಣದಲ್ಲಿ ಕಲಿಯಬೇಕಾದದ್ದು ಬಿಜೆಪಿ ಮಾತ್ರವಲ್ಲ, ಎಲ್ಲ ರಾಜಕೀಯ ಪಕ್ಷಗಳಿಗೂ ಪಾಠ ಇದೆ. ಯಾವ ರಾಜಕೀಯ ಪಕ್ಷವೂ ಭಾರತವನ್ನು ವೈಶ್ವಿಕ ಮಟ್ಟದಲ್ಲಿ, ಒಂದು ಆರ್ಥಿಕ ಅಥವಾ ಸ್ವತಂತ್ರ ರಾಜಕೀಯ ಘಟಕವಾಗಿ ಕಂಡಂತೆಯೇ ಇಲ್ಲ. ದೇಶ ನಡೆಸುತ್ತೇವೆಂಬ ನಮ್ಮ ಜಂಬದ ಹುರಿಯಾಳುಗಳಿಗೆ ತಮ್ಮ ಕ್ಷೇತ್ರದಾಚೆಗಿನ ಪ್ರಪಂಚ ಕಾಣಿಸುತ್ತದೆಯೇ ಎನ್ನುವುದೇ ಅನುಮಾನ. ಅವರ ವಿದ್ಯೆ, ಬುದ್ಧಿ, ದೃಷ್ಟಿಕೋನವೆಲ್ಲಾ ಎದುರಾಳಿಗಿಂತ ನಾಲ್ಕಾರು ಮತಗಳನ್ನು ಹೆಚ್ಚು ಪಡೆದು ಸೀಟು ಗೆಲ್ಲುವಷ್ಟಕ್ಕೇ ಸೀಮಿತ. ಗೆದ್ದ ಮೇಲೆ ಅದನ್ನು ಉಳಿಸಿಕೊಳ್ಳುವ ಹುಸಿ ಕಸರತ್ತು. ಅದಕ್ಕಾಗಿ ಭಾವೋದ್ರೇಕವನ್ನು ಬಡಿದೆಬ್ಬಿಸಿ, ಅಮಾಯಕರನ್ನು ಬಲಿ ಕೊಟ್ಟು, ಅವರು ಗಳಿಸುವ ಹೀರೊ ಪಟ್ಟ ಶಾಶ್ವತವೇ?